ಜಲ್ಲಿಕಟ್ಟು ವಿರುದ್ಧ ಮಾತೇ ಆಡಿಲ್ಲ: ನಟಿ ತೃಷಾ, ಕೀಟಲೆಗೆ ಖೇದ
Team Udayavani, Jan 14, 2017, 3:42 PM IST
ಚೆನ್ನೈ : ದಕ್ಷಿಣ ಭಾರತದ ಚಿತ್ರ ನಟಿ ತೃಷಾ ಇದೀಗ ಜಲ್ಲಿಕಟ್ಟು ಬೆಂಬಲಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಜಲ್ಲಿಕಟ್ಟು ವಿರುದ್ಧ ಕಠಿನ ನಿಲುವು ತಳೆದಿರುವ ಪ್ರಾಣಿ ದಯಾ ಸಂಘಟನೆ ಪೇಟಾ ಪರ ಪ್ರಚಾರ ನಿರತೆಯಾಗಿರುವ ತೃಶಾ ಳ ಸಿನೇಮಾ ಚಿತ್ರೀಕರಣಕ್ಕೆ ಜಲ್ಲಿಕಟ್ಟು ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಆದರೆ ತೃಷಾ ತಾನೆಂದೂ ಜಲ್ಲಿಕಟ್ಟು ವಿರುದ್ಧ ಮಾತೇ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲದೆ ತನಗೆ ಅನಗತ್ಯವಾಗಿರುವ ನೀಡಲಾಗುತ್ತಿರುವ ಕೀಟಲೆಗೆ ಆಕೆ ಖೇದ ವ್ಯಕ್ತಪಡಿಸಿದ್ದಾರೆ.
ತೃಷಾ ನಟಿಸುತ್ತಿರುವ “ಘರ್ಜನೈ’ ತಮಿಳು ಚಿತ್ರದ ಚಿತ್ರೀಕರಣ ನಿನ್ನೆ ಶುಕ್ರವಾರ ಶಿವಗಂಗಾ ಜಿಲ್ಲೆಯಲ್ಲಿ ನಡೆಯುತ್ತಿದ್ದಾಗ ಜಲ್ಲಿಕಟ್ಟು ಬೆಂಬಲಿಗರು ಅಲ್ಲಿಗೆ ದಾಂಗುಡಿ ಇಟ್ಟು ಪಿಕೆಟಿಂಗ್ ನಡೆಸಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು.
ಪೇಟಾ ಟಿ ಶರ್ಟ್ ತೊಟ್ಟುಕೊಂಡಿರುವ ತೃಷಾಳ ಫೋಟೋಗೆ ಕೆಟ್ಟ ಕೆಟ್ಟ ಸಂದೇಶಗಳನ್ನು ಜೋಡಿಸಲಾದ ಸಂದೇಶಗಳು ನಿನ್ನೆಯಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತನ್ನ ವಿರುದ್ಧ ವಿನಾಕಾರಣವಾಗಿ ಈ ರೀತಿಯ ಅಪಪ್ರಚಾರ ಮಾಡುವು ತಮಿಳರ ಸಂಸ್ಕೃತಿಯಲ್ಲ ಎಂದು ತೃಷಾ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
MUST WATCH
ಹೊಸ ಸೇರ್ಪಡೆ
B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್
BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ
Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು
ಬಿಲ್ಡರ್ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್
QR code system: ರೈಲ್ವೆ ಟಿಕೆಟ್ ಖರೀದಿಗೆ ಕ್ಯೂಆರ್ಕೋಡ್ ವ್ಯವಸ್ಥೆ; ಉತ್ತಮ ಸ್ಪಂದನೆ