ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಎಚ್ಚರ ತಪ್ಪಿದರೆ ಜೀವಹಾನಿ ಸಾಧ್ಯತೆ

Team Udayavani, May 5, 2024, 7:30 AM IST

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಕೋಟ: ವಿಪರೀತ ಬಿಸಿಲು ಹಾಗೂ ಬಿಸಿಗಾಳಿಯ ದುಷ್ಪರಿಣಾಮ ಜಾನುವಾರುಗಳ ಮೇಲೆ ಕೂಡ ಆಗುತ್ತಿದ್ದು ಅನಾರೋಗ್ಯದಿಂದ ದನಗಳು ಮೃತಪಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ದಾಖಲಾಗುತ್ತಿವೆ. ಆದ್ದರಿಂದ ಜನರ ಜತೆಗೆ ಜಾನುವಾರುಗಳ ಆರೋಗ್ಯ ರಕ್ಷಣೆಗೂ ಹೆಚ್ಚಿನ ಕಾಳಜಿ ತೋರುವ ಅಗತ್ಯವಿದೆ.

ಹವಾಮಾನದ ಬದಲಾವಣೆ, ಉಷ್ಣಾಂಶದಲ್ಲಿ ಏರಿಳಿತಗಳಿಂದ ಜಾನುವಾರುಗಳ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ರೋಗ ವಾಹಕಗಳಾದ ಉಣುಗು ಮತ್ತಿತರ ಸೂಕ್ಷ್ಮ ಜೀವಿಗಳಿಂದ ರೋಗಾಣುಗಳು ವೃದ್ಧಿಸಿ ಹಲವು ರೀತಿಯ ಕಾಯಿಲೆಗಳು ಬಾಧಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬೇಸಗೆಯಲ್ಲಿ ಸರಿಯಾಗಿ ಕುಡಿಯಲು ನೀರು ನೀಡದಿದ್ದರೆ, ಪೋಷಕಾಂಶದ ಬಗ್ಗೆ ಗಮನಹರಿಸದ್ದಿರೆ, ಸ್ವತ್ಛ ವಾತವರಣ ಕಲ್ಪಿಸದಿದ್ದರೆ ಹೆಚ್ಚಿನ ಸಮಸ್ಯೆಯಾಗುತ್ತದೆ.

ವೈದ್ಯರ ಸಲಹೆ
ಗಬ್ಬದ / ಕರು ಹಾಕಿದ ದನಗಳು, /ಅಶಕ್ತ ದನಗಳ ಬಗ್ಗೆ ಹೆಚ್ಚಿನ ಜಾಗ್ರತೆ ಮುಖ್ಯ. ಪುಟ್ಟ ಕರುಗಳಿಗೆ ದೇಹದ ಉಷ್ಣತೆ ಸರಿದೂಗಿಸಿಕೊಳ್ಳುವ ಶಕ್ತಿ ಇಲ್ಲದ ಕಾರಣ ಜ್ವರ ಬಾಧಿಸಬಹುದು. ಇಂತಹ ಸಂದರ್ಭ ಫ್ಯಾನಿನ ವ್ಯವಸ್ಥೆ ಇದ್ದರೆ ಉತ್ತಮ. ಕರು ಹಾಕಿದ ದನಗಳ ದೇಹದಲ್ಲಿ ಶಕ್ತಿ ಕುಂಠಿತವಾಗುವುದರಿಂದ ಕರು ಹಾಕಲು ತಿಂಗಳ ಮುಂಚೆ ಮೊಳಕೆ ಬರಿಸಿದ ಹುರುಳಿ ಮುಂತಾದ ಉತ್ತಮ ಪೋಷಕಾಂಶಯುಕ್ತ ಆಹಾರ ನೀಡಬೇಕು. ಅಧಿಕ ತಾಪದಿಂದ ಜಾನುವಾರುಗಳಲ್ಲಿಯೂ ನಿರ್ಜಲೀಕರಣ ಸಮಸ್ಯೆ ತಲೆದೋರಿ ತೀವ್ರ ಸುಸ್ತು ಅನುಭವಿಸುತ್ತವೆ. ಜತೆಗೆ ಒಣ ಮೇವು ತಿನ್ನುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ.

ಬಯಲು ಗುಡ್ಡಗಾಡುಗಳಲ್ಲಿ ಮೇಯುವವು, ಕಾಂಕ್ರೀಟ್‌ ಛಾವಣಿ, ಶೀಟ್‌ಗಳಿಂದ ನಿರ್ಮಿಸಿದ ಹಟ್ಟಿಗಳಲ್ಲಿ ಸಾಕುವ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯಾಘಾತಕ್ಕೆ ಒಳಗಾಗುತ್ತವೆ. ಆದ್ದರಿಂದ ಅವುಗಳಿಗೆ ದಿನಕ್ಕೆ 2ರಿಂದ 3 ಸಲ ಶುದ್ಧವಾದ ನೀರನ್ನು ಕುಡಿಸಬೇಕು. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಿಸಿಲಿನ ತಾಪ ಹೆಚ್ಚು ಇರುವುದರಿಂದ ನೆರಳಿನಲ್ಲಿ ಸಂರಕ್ಷಿಸಬೇಕು. ಪೌಷ್ಟಿಕ ಆಹಾರ, ಹಸುರು ಹುಲ್ಲು ನೀಡಬೇಕು. ಅಪರಾಹ್ನ ಬಿಸಿಲಿನ ವೇಳೆ ಬೂಸ ಮುಂತಾದ ಪಶು ಆಹಾರ ಒಳ್ಳೆಯದಲ್ಲ. ದೇಹದ ಉಷ್ಣತೆಯನ್ನು ಕಾಪಾಡಲು ದೇಹಕ್ಕೆ ನೀರು ಚಿಮುಕಿಸಿದರೆ ಉತ್ತಮ. ಕಾಂಕ್ರೀಟ್‌ ಛಾವಣಿ, ಶೀಟ್‌ಗಳಿಂದ ನಿರ್ಮಿಸಿದ ಗಾಳಿ-ಬೆಳಕು ಇಲ್ಲದ ಕೊಟ್ಟಿಗೆಗಳಿದ್ದರೆ ಅದರಿಂದ ದೂರವಿರಿಸಿ ಮರದ ಅಡಿ, ನೆರಳಿನ ಪ್ರದೇಶದಲ್ಲಿ ಕಟ್ಟಿ ಹಾಕುವುದು ಸೂಕ್ತ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ತತ್‌ಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಔಷಧ ನೀಡುವುದು, ಸೂಕ್ತಸಲಹೆ ಪಡೆಯುವುದು ಉತ್ತಮ ಎನ್ನುತ್ತಾರೆ ಬ್ರಹ್ಮಾವರ ತಾಲೂಕು ಆಡಳಿತ ಪಶುವೈದ್ಯಾಧಿಕಾರಿ ಡಾ| ಪ್ರದೀಪ್‌ ಕುಮಾರ್‌.

ನಾಯಿ, ಬೆಕ್ಕುಗಳ ಬಗ್ಗೆ ಇರಲಿ ಎಚ್ಚರ
ಬೇಸಗೆಯಲ್ಲಿ ನಾಯಿ, ಬೆಕ್ಕುಗಳು ಕೂಡ ತಂಪಾದ ವಾತಾವರಣಕ್ಕೆ ಹಾತೊರೆಯುತ್ತವೆ. ಬಿಸಿ ಗಾಳಿಯಿಂದ ಅವುಗಳಿಗೆ ಉಸಿರುಗಟ್ಟುವಿಕೆ, ಹೃದಯ ಬಡಿತ ಹೆಚ್ಚಳ, ಜೊಲ್ಲು ಸುರಿಯುವಿಕೆ ಕಾಣಿಸಿಕೊಳ್ಳಬಹುದು. ಆಗ ಅವುಗಳಿಗೆ ನೆರಳಿನಲ್ಲಿ ವಿಶ್ರಾಂತಿ ಸಿಗುವಂತೆ ಮಾಡಿ ಸ್ವತ್ಛ ವಾತಾವರಣ ಕಲ್ಪಿಸಬೇಕು. ತಣ್ಣನೆಯ ಆಹಾರ, ತಂಪಾದ ಗಾಳಿ ಇರುವಂತೆ ನೋಡಿಕೊಳ್ಳಬೇಕು. ನಿತ್ಯ ಸ್ನಾನ ಮಾಡಿಸುವ ಮೂಲಕ ದೇಹ ತಂಪಗಿರುವಂತೆ ಮಾಡಬೇಕು. ಕಾರಿನಲ್ಲಿ ಹೊರಗಡೆ ಕರೆದೊಯ್ಯುವುದು, ಕಾರಿನ ಒಳಗಡೆ ಬಿಡುವುದು ಸರಿಯಲ್ಲ. ಅತಿಯಾಗಿ ಜೊಲ್ಲು ಸುರಿಸುವುದು, ಉಸಿರಾಟದ ತೊಂದರೆಯ ಲಕ್ಷಣ ಕಂಡರೆ ಅಥವಾ ಜ್ವರ, ವಾಂತಿಯ ಲಕ್ಷಣ ಗಮನಕ್ಕೆ ಬಂದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಮೊಸರು ಮತ್ತು ಅನ್ನ, ಮಜ್ಜಿಗೆ ಅಥವಾ ಮೊಸರು ಬೆರೆಸಿದ ಪೀನಟ್‌ ಬಟರ್‌ ಅವುಗಳಿಗೆ ಬೇಸಗೆಯ ಉತ್ತಮ ಆಹಾರ. ಮಾಂಸಾಹಾರ, ಉಪ್ಪು ಮತ್ತು ಸಕ್ಕರೆ ಇರುವ ಉತ್ಪನ್ನಗಳನ್ನು ಕಡಿಮೆ ನೀಡಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

ದ.ಕ., ಉಡುಪಿ ಜಿಲ್ಲೆಯಲ್ಲಿ ತಿಂಗಳಲ್ಲಿ ಹಸುಗಳ 21 ಸಾವು
ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 16 ದನಗಳು ಸಾವನ್ನಪ್ಪಿದ್ದು ಅದರಲ್ಲಿ 4 ವಿಷಮಿಶ್ರಿತ ಆಹಾರ ಸೇವನೆಯಿಂದ ಸಂಭವಿಸಿದರೆ, ಮಿಕ್ಕುಳಿದವು ಆರೋಗ್ಯ ಸಮಸ್ಯೆ ಬೇಸಗೆಯಲ್ಲಿ ಉಲ್ಬಣಗೊಂಡು ಸಂಭವಿಸಿದೆ. ದ.ಕ. ಜಿಲ್ಲೆಯಲ್ಲಿ 5 ದನಗಳು ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಸಾವನ್ನಪ್ಪಿವೆ ಎಂದು ಪಶು ವೈದ್ಯ ಇಲಾಖೆ ಮೂಲಗಳು ತಿಳಿಸಿದೆ.

ಮನುಷ್ಯನ ರೀತಿಯಲ್ಲೇ ಬೇಸಗೆಯಲ್ಲಿ ಪ್ರಾಣಿಗಳ ಆರೋಗ್ಯದ ಬಗ್ಗೆ ಕೂಡ ಹೆಚ್ಚು ಕಾಳಜಿ ವಹಿಸಬೇಕು. ಅನಾ ರೋಗ್ಯದ ಲಕ್ಷಣ ಕಾಣಿಸಿದಾಗ ನಿರ್ಲಕ್ಷ್ಯ ತೋರಿದಲ್ಲಿ ಜೀವ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಹೆಚ್ಚಿನ ಜಾಗ್ರತೆ ಅಗತ್ಯ.
– ಡಾ| ರೆಡ್ಡಪ್ಪ /
ಡಾ| ಅರುಣ್‌ ಕುಮಾರ್‌,
ಉಪನಿರ್ದೇಶಕರು, ಪಶುಪಾಲನೆ ಇಲಾಖೆ ಉಡುಪಿ / ದ.ಕ. ಜಿಲ್ಲೆ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

1-adasdsd

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Udupi; ಯಕ್ಷರಂಗಕ್ಕೆ ಜೀವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

ಮೂಲ್ಕಿಗೆ ಇನ್ನೂ ಮಂಜೂರಾಗದ ಅಗ್ನಿಶಾಮಕ ಠಾಣೆ; ಪ್ರಸ್ತಾವನೆ ಹಂತದಲ್ಲೇ ಬಾಕಿ

ಮೂಲ್ಕಿಗೆ ಇನ್ನೂ ಮಂಜೂರಾಗದ ಅಗ್ನಿಶಾಮಕ ಠಾಣೆ; ಪ್ರಸ್ತಾವನೆ ಹಂತದಲ್ಲೇ ಬಾಕಿ

8

Fraud: ವಾಟ್ಸಾಪ್‌ ಲಿಂಕ್‌ಗೆ ಕ್ಲಿಕ್‌; ಬ್ಯಾಕ್‌ ಖಾತೆಯಿಂದ 82,200 ರೂಪಾಯಿ ಮಾಯ

1-wqewqewqe

Byndoor: ಗಾಳಿ- ಮಳೆಯಿಂದ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.