‘ಆತನಿಗೆ ಮೊದಲೇ ಒಂದು ಸಂಸಾರ ಇತ್ತು’…ಗಂಡನ ವಿರುದ್ಧ ನಟಿ ರಾಖಿ ಆರೋಪ
ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕೂಡ ತನ್ನ ಮದುವೆ ಬಗ್ಗೆ ಕೆಲವೊಂದು ಸುಳ್ಳುಗಳನ್ನು ಹೇಳಿದ್ದಳು.
Team Udayavani, Feb 24, 2021, 5:02 PM IST
ಮುಂಬೈ : ಹಿಂದಿ ಬಿಗ್ ಬಾಸ್ 14 ನೇ ಸೀಸನ್ ಮುಗಿಸಿ ಹೊರ ಬಂದಿರುವ ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜತೆ ನಡೆದ ತನ್ನ ಮದುವೆ ಕುರಿತು ಆಘಾತಕಾರಿ ಸಂಗತಿಗಳನ್ನ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ರಾಖಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿತೇಶ್ ಹಾಗೂ ತನ್ನ ಮದುವೆ ಹೇಗೆ ನಡೆಯಿತು ಎಂದು ಹೇಳಿಕೊಂಡಿದ್ದಾರೆ. ‘ಒಬ್ಬರು ನನ್ನ ಅಪಹರಣ ಮಾಡಲು ಮುಂದಾಗಿದ್ದರು. ಈ ವಿಚಾರ ನನಗೆ ಹಾಗೂ ನಮ್ಮ ತಾಯಿಗೆ ಭಯ ಹುಟ್ಟಿಸಿತು. ಈ ಆಪತ್ತಿನಿಂದ ಪಾರಾಗಲು ಚಿಂತಿಸುತ್ತಿರುವಾಗಲೇ ರಿತೇಶ್ ಜತೆ ಮದುವೆ ಮಾಡಲು ನಮ್ಮ ತಾಯಿ ಮುಂದಾದರು. ನಾನು ಕೂಡ ಈ ಮದುವೆಗೆ ಒಪ್ಪಿಕೊಂಡೆ’ಎಂದಿದ್ದಾರೆ.
ಮದುವೆ ಮುಂಚೆ ರಿತೇಶ್ ಜತೆ ಒಮ್ಮೆಯೂ ಮಾತಾಡಿರಲಿಲ್ಲ ಎಂದು ಹೇಳಿರುವ ರಾಖಿ, 2019 ರಲ್ಲಿ ಹೋಟೆಲ್ ವೊಂದರಲ್ಲಿ ನಮ್ಮ ಮದುವೆ ನಡೆಯಿತು. ಈ ವಿಷಯ ತಿಳಿದ ಕೆಲ ಪತ್ರಕರ್ತರು ಅಲ್ಲಿಗೆ ಧಾವಿಸಿದ್ದರಿಂದ ರಿತೇಶ್ ಹಿತ್ತಲ ಬಾಗಿಲಿನಿಂದ ಓಡಿದ. ಅವನು ಹಾಗೇಕೆ ಮಾಡಿದ ಎಂದು ನಂಗೆ ಅಂದು ತಿಳಿಯಲಿಲ್ಲ. ನಂತರ ಲಾಕ್ ಡೌನ್ ವೇಳೆ ಎಲ್ಲವೂ ನಡೆದು ಹೋಯಿತು ಎಂದಿದ್ದಾರೆ.
ರಿತೇಶ್ ಕುರಿತು ಮತ್ತೊಂದು ಆಘಾತಕಾರಿ ವಿಷಯ ರಿವೀಲ್ ಮಾಡಿರುವ ರಾಖಿ, ಆತನಿಗೆ ಈ ಮುಂಚೆಯೇ ಒಂದು ಸಂಸಾರ ಇರುವ ವಿಚಾರ ನನ್ನ ಮುಂದೆ ಮುಚ್ಚಿಟ್ಟಿದ್ದ ಎಂದಿದ್ದಾರೆ. ಆದರೆ, ರಾಖಿ ಸಾವಂತ್ ತುಂಬ ಸುಳ್ಳುಬುರುಕಿ ಎಂದು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಈ ಹಿಂದೆಯೂ ಸಾಕಷ್ಟು ಹಸಿಹಸಿ ಸುಳ್ಳುಗಳನ್ನು ಆಕೆ ಹೇಳಿದ್ದಳು. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕೂಡ ತನ್ನ ಮದುವೆ ಬಗ್ಗೆ ಕೆಲವೊಂದು ಸುಳ್ಳುಗಳನ್ನು ಹೇಳಿದ್ದಳು. ಈಗ ಮತ್ತೆ ಗಂಡನ ಮೇಲೆ ಗುರುತರವಾದ ಅಪವಾದ ಹೊರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
MUST WATCH
ಹೊಸ ಸೇರ್ಪಡೆ
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
Rajinikanth ಬಯೋಪಿಕ್ಗೆ ಭರ್ಜರಿ ತಯಾರಿ; ಬಾಲಿವುಡ್ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ
Udupi: ಪರಿಸರ ಸ್ನೇಹಿ ಸಿಎನ್ಜಿ ಬಸ್ ಸಂಚಾರ-ಸಿಎನ್ಜಿ ಲಭ್ಯತೆ ಸಮಸ್ಯೆ
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ