Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್ ಶಾ ಮನವಿ
Team Udayavani, May 2, 2024, 9:19 AM IST
ಹೊಸದಿಲ್ಲಿ: ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಇರುವ ಮೀಸಲು ವ್ಯವಸ್ಥೆಯನ್ನು ಬಿಜೆಪಿ ರದ್ದು ಮಾಡುವುದಿಲ್ಲ. ಕಾಂಗ್ರೆಸ್ಗೆ ಕೂಡ ಅದನ್ನು ರದ್ದು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್ಗಢದ ಖಟ್ಗೊಹ್ರಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿ ಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬಕ್ಕಾಗಿ ಮೀಸಲು ವಿಚಾರದಲ್ಲಿ ಸುಳ್ಳು ಹೇಳುವುದು ಬೇಡ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವ್ಯಂಗ್ಯವಾಗಿ ಸಲಹೆ ಮಾಡಿದ್ದಾರೆ. ಚುನಾ ವಣೆಯಲ್ಲಿ ಜಯ ಗಳಿಸಲು ಕಾಂಗ್ರೆಸ್ ನಕ್ಸಲೀಯರಿಗೆ ಮತ್ತು ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ. ಬಿಜೆಪಿ ಮೀಸಲು ರದ್ದು ಮಾಡಲಿದೆ ಎಂದು ತಮ್ಮ ನಕಲಿ ವೀಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ದೂರಿದರು.