ಮಾಜಿ ಪ್ರೇಯಸಿ ಬಳಿ ಹೋದ ವಿವಾಹಿತ ಮಸಣ ಸೇರಿದ : ಆ ಮಧ್ಯರಾತ್ರಿ ನಡೆದಿದ್ದೇನು ?
Team Udayavani, Feb 27, 2021, 8:40 PM IST
ಗುಜರಾತ್ : ಮಧ್ಯರಾತ್ರಿ ಮಾಜಿ ಪ್ರೇಯಸಿ ಭೇಟಿಗೆ ಹೋದ ವಿವಾಹಿತನೋರ್ವ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ರಾಜಕೋಟ್ ನಲ್ಲಿ ನಡೆದಿದೆ. ಉಜೈನ್ ಸಿಂಗ್ ಗೌತಮ್ ಪ್ರಾಣ ಕಳೆದುಕೊಂಡ ವ್ಯಕ್ತಿ.
28 ವರ್ಷದ ಗೌತಮ್ನಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದರು. ಚೆಂದದ ಪತ್ನಿಯಿದ್ದರೂ ಕೂಡ ಈತ ಮದುವೆ ಮುಂಚಿನ ತನ್ನ ‘ಅಫೇರ್’ ನಿಂದ ಹೊರ ಬಂದಿರಲಿಲ್ಲ. ಕದ್ದು ಮುಚ್ಚಿ ಹಳೆಯ ಗೆಳತಿ ಜತೆ ಸಂಬಂಧ ಮುಂದುವರೆಸಿದ್ದ.
ಫೆ.20 ರಂದು ಗೌತಮ್ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮದುವೆಗೆಂದು ಊರಿಗೆ ತೆರಳಿದ್ದರು. ಅಂದು ರಾತ್ರಿ ಗೌತಮ್ ಮಾಜಿ ಪ್ರೇಯಸಿ ಮನೆಗೆ ತೆರಳಿ ರೂಂ ಸೇರಿದ್ದ. ಗದ್ದಲದಿಂದಾಗಿ ಎಚ್ಚರಗೊಂಡ ಅವಳ ಸಹೋದರ ಲೈಟ್ ಆನ್ ಮಾಡಿದ್ದ. ಇದರಿಂದ ಸಿಕ್ಕಿ ಬೀಳುವ ಭಯದಲ್ಲಿ ಗೌತಮ್ ಕತ್ತಲಿನಲ್ಲಿ ಓಡಲು ಶುರುಮಾಡಿದ. ಆತನ ನೆರಳು ಗುರುತಿಸಿದ ಪ್ರೇಯಸಿಯ ಸಹೋದರ ಗೌತಮ್ ಬೆನ್ನು ಹತ್ತಿದ. ಗಾಬರಿಯಲ್ಲಿದ್ದ ಗೌತಮ್ ನೆಲಬಾವಿ (ತಡೆಗೋಡೆ ಇರದ ಬಾವಿ) ಗಮನಿಸದೆ ಅದರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ :ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ : ಡಿಕೆಶಿ ಅನುಮಾನ
ಇನ್ನು ಮದುವೆ ಮುಗಿಸಿಕೊಂಡು ಮನೆಗೆ ಮರಳಿದ ಗೌತಮ್ ಪತ್ನಿ, ಪತಿಯ ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾರನೇ ದಿನ ಮಾಜಿ ಸ್ನೇಹಿತೆಯ ಮನೆ ಸಮೀಪ ಗೌತಮ್ ಬೈಕ್ ಸಿಕ್ಕಿತ್ತು. ಅದೇ ದಿನ ಬಾವಿಯಲ್ಲಿ ಆತನ ಮೃತದೇಹ ಕೂಡ ಪತ್ತೆಯಾಗಿತ್ತು. ವಿಚಾರಣೆ ವೇಳೆ ಗೌತಮ್ ತನ್ನ ಭೇಟಿಯಾಗಲು ಬಂದಿದ್ದ ವಿಚಾರವನ್ನು ಆತನ ಮಾಜಿ ಪ್ರೇಯಸಿ ಪೊಲೀಸರಿಗೆ ತಿಳಿಸಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ