ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


Team Udayavani, Apr 24, 2024, 12:31 PM IST

11

ಪಾಟ್ನಾ: ಕ್ರಿಕೆಟ್‌ ಕುರಿತು ಯಾವ ಜ್ಞಾನವಿಲ್ಲದ ವ್ಯಕ್ತಿಯೊಬ್ಬ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ 59 ರೂ.ಕಟ್ಟಿ 1.5 ಕೋಟಿ ರೂ ಗೆದ್ದಿದ್ದಾರೆ.

ಡ್ರೀಮ್‌ 11 ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ ಕೋಟಿ ಗೆಲ್ಲುವುದು ಅಂದರೆ ಅದು ಕೋಟ್ಯಂತರ ಮಂದಿಯಲ್ಲಿ ಒಬ್ಬರಿಗೆ ಸಿಗುವ ಅದೃಷ್ಟವೆಂದೇ ಹೇಳಬಹುದು. ಇಂಥದ್ದೇ ಅದೃಷ್ಟ ಬಿಹಾರದ ಬಡ ವ್ಯಕ್ತಿಯೊಬ್ಬನಿಗೆ ಖುಲಾಯಿಸಿದೆ.

ಬಿಹಾರದ ಅರಾಹ್ ಜಿಲ್ಲೆಯ ಕೊಹ್ಡಾ ಗ್ರಾಮದ ನಿವಾಸಿಯಾದ ದೀಪು ಓಜಾ ಡ್ರೀಮ್‌ 11 ನಲ್ಲಿ ಒಂದೂವರೆ ಕೋಟಿ ಗೆದ್ದು ರಾತ್ರೋರಾತ್ರಿ ಊರಿನವರ ಮುಂದೆ ಸ್ಟಾರ್‌ ಆಗಿದ್ದಾರೆ.

ದೀಪು ಅವರಿಗೆ ಕ್ರಿಕೆಟ್‌ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ. 8 ತರಗತಿಯಲ್ಲಿ ಶಿಕ್ಷಣ ಬಿಟ್ಟು  ಗ್ಯಾರೇಜ್‌ ನಲ್ಲಿ ಕೆಲಸ ಮಾಡುವ ದೀಪು ಅವರ ಕುಟುಂಬ ಬಡತನದಲ್ಲೇ ದಿನ ಸಾಗಿಸುತ್ತದೆ. ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ದೀಪು ಕಳೆದ 6 ತಿಂಗಳಿನಿಂದ ಡ್ರೀಮ್‌ 11 ನಲ್ಲಿ ಆಡುತ್ತಿದ್ದಾರೆ.

ಇತ್ತೀಚೆಗೆ ಐಪಿಎಲ್‌ ನ ಕೆಕೆಆರ್‌ – ಆರ್‌ ಸಿಬಿ ನಡುವಿನ ಪಂದ್ಯದಲ್ಲಿ ಡ್ರೀಮ್‌ 11 ತಂಡವನ್ನು ಕಟ್ಟಿದ್ದರು. ಈ ಪಂದ್ಯದಲ್ಲಿ ಅವರು ರೆಸೆಲ್‌ ಅವರನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದ್ದರು. ರಸೆಲ್‌ ಉತ್ತಮವಾಗಿ ಬೌಲಿಂಗ್‌ ಮಾಡಿದ ಕಾರಣ ಹಾಗೂ ತಂಡದ ಇತರೆ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಪರಿಣಾಮ ದೀಪು ಡ್ರೀಮ್‌ 11 ನಲ್ಲಿ ಫಸ್ಟ್‌ ರ್‍ಯಾಂಕ್‌ ಬಂದು ಕೋಟ್ಯಧಿಪತಿ ಆಗಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ನನಗೆ ತುಂಬಾ ಸಂತೋಷವಾಗಿದೆ. ಮೊದಲು ಕೋಟಿ ಗೆದ್ದಿದ್ದೇನೆ ಅಂಥ ನಂಬಿಕೆ ಬರಲಿಲ್ಲ. ಇಂತಹ ಅಪ್ಲಿಕೇಶನ್‌ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಇದು ಮೋಸ ಎಂದು ಭಾವಿಸಿದ್ದೆ. ನಾನು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಆರು ತಿಂಗಳಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ ನನಗೆ ಕೆಲಸವಿಲ್ಲ. ನಾನು ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಹಣ ಗೆದ್ದಿದ್ದೇನೆ” ಎಂದು ಹೇಳುತ್ತಾರೆ.

ಏನಿದು ಡ್ರೀಮ್‌ 11: ಡ್ರೀಮ್‌ 11 ಒಂದು ಜನಪ್ರಿಯ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ಆಗಿದೆ. ಡ್ರೀಮ್‌ 11 ನಲ್ಲಿ ಪ್ರತಿನಿತ್ಯ 3 ಮಂದಿ ಕೋಟಿ ಗೆಲ್ಲುವ ಅವಕಾಶಗಳಿರುತ್ತದೆ. 49 ಅಥವಾ 59 ರೂಪಾಯಿಯನ್ನು 11 ಜನರ ತಂಡವನ್ನು ಮಾಡಬೇಕಾಗುತ್ತದೆ. ನಾವು ಆಯ್ಕೆ ಮಾಡಿದ ನಾಯಕ/ ಉಪನಾಯಕ ಸೇರಿದಂತೆ 11 ಮಂದಿ ಆಟಗಾರರು ಉತ್ತಮವಾಗಿ ಆಡಿದರೆ ರ್‍ಯಾಂಕ್‌ ಆಧಾರದಲ್ಲಿ ಕೋಟಿ ಗೆಲ್ಲಬಹುದಾಗಿದೆ. ಪ್ರಥಮ ರ್‍ಯಾಂಕ್‌ ನಲ್ಲಿ ಬಂದರೆ ಒಂದೂವರೆ ಕೋಟಿ ಆ ಬಳಿಕ ಲಕ್ಷ ನಂತರ ಸಾವಿರ ಹೀಗೆ ಈ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ ಬಹುಮಾನ ಇರುತ್ತದೆ.

ಎಚ್ಚರ ಇದು ಹೆಚ್ಚಾದರೆ ಗೀಳು.. ಡ್ರೀಮ್‌ 11 ಸೇರಿದಂತೆ ಹತ್ತಾರು ಫ್ಯಾಂಟಸಿ ಆ್ಯಪ್ ಗಳಿವೆ. ಕೇವಲ 49 ಅಥವಾ 59 ರೂ. ಹಾಕಿದರೆ ಇಲ್ಲಿ ಸುಲಭವಾಗಿ ಕೋಟಿ ಗೆಲ್ಲುತ್ತಾರೆ ಎನ್ನುವುದು ನಮ್ಮ ಭ್ರಮೆ ಅಷ್ಟೇ. ಇಲ್ಲಿ ಕೋಟಿ ಗೆಲ್ಲುವ ಆಸೆಯಿಂದ ಪ್ರತಿನಿತ್ಯ ಕೋಟ್ಯಂತರ ಮಂದಿಯ ಪೈಪೋಟಿ ಇರುತ್ತದೆ. ಇವರಲ್ಲಿ ಕೋಟಿ ಸಿಗುವುದು ಅದೃಷ್ಟವಂತರಿಗೆ ಮಾತ್ರ. ಈ ಅದೃಷ್ಟವಂತರು ಕೋಟಿಯಲ್ಲಿ ಒಬ್ಬರು ಇಬ್ಬರು ಮಾತ್ರ. ಇಲ್ಲಿ ಕೋಟಿ ಗೆಲ್ಲುತ್ತೇವೆ ಎಂದು ತಂಡವನ್ನು ಕಟ್ಟಿ ಹಣ ಹಾಕುತ್ತಲೇ ಹೋದರೆ ನಷ್ಟ ಆಗಿ ಜೇಬು ಖಾಲಿ ಆಗುವುದು ಗ್ಯಾರಂಟಿ. ಆದ್ದರಿಂದ ಈ ಫ್ಯಾಂಟಸಿ ಆ್ಯಪ್ ಗಳ ಬಗ್ಗೆ ಎಚ್ಚರವಿರಲಿ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?

Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?

Video: ರಸ್ತೆಗಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾದ ದುಷ್ಕರ್ಮಿಗಳು

Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

best

Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.