ಚನ್ನಪಟ್ಟಣ ಗೊಂಬೆಗೆ ವಿಶ್ವ ಮಾನ್ಯತೆ : ಆನ್ಲೈನ್ ಮೂಲಕ ವಿಶ್ವಕ್ಕೆ ಪರಿಚಯ
Team Udayavani, Feb 28, 2021, 6:50 AM IST
ಚನ್ನಪಟ್ಟಣ: ಪಾರಂಪರಿಕ ಗೊಂಬೆ ಉದ್ಯಮದಲ್ಲಿ ಹೊಸ ಆಲೋಚನೆ, ಹೊಸತನವನ್ನು ಅಳವಡಿಸಿಕೊಂಡು ವಿಶ್ವದ ಮಕ್ಕಳನ್ನು ಸೆಳೆಯುವ ಗೊಂಬೆಗಳನ್ನು ಆವಿಷ್ಕರಿಸುವಂತೆ ಪ್ರಧಾನಿ ಮೋದಿ ಗೊಂಬೆ ತಯಾರಕರಿಗೆ ಸಲಹೆ ನೀಡಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಯಡಿ ಶನಿವಾರ ಆರಂಭವಾದ “ದಿ ಇಂಡಿಯಾ ಟಾಯ್ಸ್ ಫೇರ್ 2021′ ವರ್ಚುವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಚನ್ನಪಟ್ಟಣವೂ ಸೇರಿದಂತೆ ದೇಶದ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಚನ್ನಪಟ್ಟಣದ ಗೊಂಬೆಗಳನ್ನು ಕೇವಲ ಆ ಕ್ಷೇತ್ರ, ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಮೋದಿ, ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ಗ್ಳ ಜತೆ ಕರಕುಶಲಕರ್ಮಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರದ ಜತೆ ಚರ್ಚಿಸಿ ಮುನ್ನಡೆಯುತ್ತೇವೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಖುದ್ದು ನಿಗಾ ವಹಿಸಲಿದೆ ಎಂದಿದ್ದಾರೆ.
ಸ್ಪರ್ಧೆ ಆಯೋಜಿಸಿ
ಚನ್ನಪಟ್ಟಣದಲ್ಲಿ ಗೊಂಬೆ ಉದ್ಯಮದಲ್ಲಿ ತೊಡಗಿರುವ 2 ಸಾವಿರ ಮಂದಿಗೆ ಒಂದು ಸ್ಪರ್ಧೆ ಆಯೋಜಿಸಬೇಕು. ಯಾರು ಹೊಸ ವಿಧಾನದಲ್ಲಿ ಗೊಂಬೆ ಉತ್ಪಾದನೆ ಮಾಡುತ್ತಾರೆಯೋ ಅವರಿಗೆ ಬಹುಮಾನ ನೀಡುವ ಮೂಲಕ ಹೊಸ ಪ್ರಯತ್ನಗಳು ಮಾರುಕಟ್ಟೆಗೆ ಬರುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದರು.
ಹೊಸ ಗೊಂಬೆಗಳ ಆವಿಷ್ಕಾರ
ಗೊಂಬೆ ಉದ್ಯಮವನ್ನು ಇ-ಮಾರುಕಟ್ಟೆ ಮುಖಾಂತರ ವಿಶ್ವಕ್ಕೆ ತಲುಪಿಸಬೇಕೆನ್ನುವ ಆಲೋಚನೆಯನ್ನು ಮಾಡಿದ್ದೀರಾ ಎಂದು ಪ್ರಧಾನಿ ಪ್ರಶ್ನಿಸಿದರು. ಹೊಸ ಮಾದರಿಯ ಗೊಂಬೆಗಳ ಆವಿಷ್ಕಾರ ಆಗಬೇಕಿದೆ ಎಂದು ಹುರಿದುಂಬಿಸಿದರು.
ಹೊಸ ಆವಿಷ್ಕಾರ ಮಾಡುತ್ತೇವೆ
ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಧಾನಿಗೆ ವಿವರ ನೀಡಿದ ಪ್ರತಿನಿಧಿ ಕೌಸರ್ ಪಾಷಾ, ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲ ಕರ್ಮಿಗಳು 200 ವರ್ಷಗಳಿಂದ ಗೊಂಬೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೊಂಬೆಗಳು ರಾಸಾಯನಿಕಗಳನ್ನು ಬಳಸದೆ ತಯಾರಾಗುತ್ತವೆ. ಶೇ. 80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಈ ಉದ್ಯಮದಲ್ಲಿದ್ದಾರೆ. ಈಗ ಕೇಂದ್ರ ಸರಕಾರ ನಮ್ಮ ಬೆಂಬಲಕ್ಕೆ ನಿಂತಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ