ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!


Team Udayavani, Mar 6, 2021, 8:16 AM IST

ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!

06-03-2021

ಮೇಷ: ಏಕಾಂತದಲ್ಲಿ ಕುಳಿತು ಏಕಾಂಗಿಯಾಗಿ ಯೋಚಿಸುವಾಗ ನಿಮಗೆ ನಿಮ್ಮ ಮೌಲ್ಯದ ಅರಿವಾಗ ಲಿದೆ. ಮುಖ್ಯವಾಗಿ ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಕಂಡುಬರಲಿದೆ. ಮನಸ್ಸು ಕೆಟ್ಟು ಹೋದೀತು. ಅತೀ ಚಿಂತೆ ಒಳ್ಳೆಯದಲ್ಲ.

ವೃಷಭ: ಹೃದಯದ ಭಾವವೇ ಆದ್ಯತೆ ಪಡೆಯುತ್ತದೆ. ಆಪ್ತರೊಬ್ಬರ ಕುರಿತಂತೆ ಯೋಚಿಸಿ ಅತೀ ಭಾವುಕರಾಗಿ ವರ್ತಿಸುವಿರಿ. ಇದರ ಅವಶ್ಯಕತೆ ಇವರಿಗೆ ಇರದು. ನಿಮ್ಮ ಯೋಚನೆಗಳು ನಿಮಗೆ ಸೀಮಿತವಾಗಿದ್ದರೆ ಉತ್ತಮ.

ಮಿಥುನ: ಸುಗಮ ದಿನ ಇಂದು. ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ. ಸಂತೋಷದ ವಾತಾವರಣವಿರುತ್ತದೆ. ಇತರರೊಂದಿಗೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫ‌ಲರಾಗುವಿರಿ. ಆರೋಗ್ಯ ಸಮಸ್ಯೆಯು ಕಾಡಲಿದೆ.

ಕರ್ಕ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಒದಗಬಹುದು. ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಯಾರ ಮಾತಿಗೂ ಹೆಚ್ಚು ತಲೆ ಕೊಡದಿರಿ. ಕರ್ತವ್ಯ ಮುಖ್ಯ.

ಸಿಂಹ: ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸುವಿರಿ. ಯಾರೊಂದಿಗೂ ಅತೀ ಸಲುಗೆ ಬೇಡ. ಶಾಂತಿ ಕಾಯ್ದುಕೊಳ್ಳಿರಿ. ಇತರರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯಲು ಕಲಿಯಿರಿ. ನಿಷ್ಠೆ ಇರಲಿ.

ಕನ್ಯಾ: ಬಿಡುವಿಲ್ಲದ ದಿನವಾಗಿದೆ. ಆರ್ಥಿಕ ಸ್ಥಿತಿಯು ಏರುಪೇರಾಗಲಿದೆ. ಬದುಕಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿರಿ. ಆರ್ಥಿಕ ಪರಿಸ್ಥಿತಿಯು ಸಂಕೀರ್ಣವಾಗಬಹುದು. ಕೌಟುಂಬಿಕವಾಗಿ ಸೌಹಾರ್ದ ಕೆಡಬಹುದು.

ತುಲಾ: ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು. ಅಸಹನೆಯ ವರ್ತನೆಯು ನಿಮ್ಮಿಂದ ಹೊರಹೊಮ್ಮಿತು ಜಾಗ್ರತೆ. ಗೃಹ ನಿವೇಶನ ಖರೀದಿ ಇದೆ.

ವೃಶ್ಚಿಕ: ಪ್ರಮುಖ ವಿಷಯಗಳನ್ನು ಇತ್ಯರ್ಥ ಪಡಿಸಲು ಸೂಕ್ತದಿನವಲ್ಲ . ಆರ್ಥಿಕ ಸಂಕಷ್ಟ ತೋರಿಬರಬಹುದು.ಖರ್ಚುವೆಚ್ಚದಲ್ಲಿ ಹೆಚ್ಚಳ ಕಂಡುಬರಲಿದೆ. ಸಂಬಂಧಗಳು ಗಟ್ಟಿಯಾಗಿ ಮನಸ್ಸು ಪ್ರಪುಲ್ಲವಾಗಲಿದೆ.

ಧನು: ಕೌಟುಂಬಿಕವಾಗಿ ಸ್ವಲ್ಪ ಏರುಪೇರುಗಳು ಕಂಡು ಬಂದಾವು. ಅದನ್ನು ಜಾಣತನದಿಂದ ಸುಧಾರಿಸುವುದು ಅಗತ್ಯವಿದೆ. ಪತ್ನಿಯ ಮನಸ್ಸು ಅರಿತು ಮುನ್ನಡೆಯಿರಿ. ಸುಖ, ಶಾಂತಿ, ಸಹನೆ, ತಾಳ್ಮೆ ಸಂಸಾರದಲ್ಲಿ ಅಗತ್ಯ.

ಮಕರ: ಯಾವುದೇ ಕಾರಣಕ್ಕೂ ಸಹನೆ ಕಳೆದು ಕೊಳ್ಳದಿರಿ. ಇತರರಿಗೆ ಬುದ್ಧಿ ಹೇಳಲು ಹೋಗದಿರಿ. ನಿಮ್ಮ ಮೇಲೆ ಅಪವಾದ ಹೊರಿಸಿಯಾರು. ಗೆಳೆಯರೊಂದಿಗೆ ಅತೀ ಸಲುಗೆ ಬೇಡ. ಹಾಗೆಯೇ ಅವರನ್ನು ಕಡೆಗಣಿಸದಿರಿ.

ಕುಂಭ: ವೃತ್ತಿಪರರಿಗೆ ಯಶಸ್ಸು ಕಂಡುಬರಲಿದೆ. ಕೌಟುಂಬಿಕವಾಗಿ ಅಸಹನೆ ಮೂಡಿ ಬರಲಿದೆ. ಗೊಂದಲದ ಪರಿಸ್ಥಿತಿ ಕಂಡುಬಂದೀತು. ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ಪರಸ್ಪರರೊಳಗೆ ಸೌಹಾರ್ದವಿದೆ.

ಮೀನ: ನೀವು ನಂಬಿದ ವ್ಯಕ್ತಿಯೊಬ್ಬರು ನಿಜ ಬಣ್ಣ ತೋರಿಸಲಿದ್ದಾರೆ. ಅವರ ಕುಟಿಲತೆ ಅರಿವಿಗೆ ಬರಲಿದೆ. ಯಾವ ವಿಷಯಕ್ಕೂ ಸಂಘರ್ಷಕ್ಕೆ ಇಳಿಯದಿರಿ. ಗೊಂದಲದ ಸ್ಥಿತಿಗೆ ಒಳಗಾಗುವಿರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಿರಿ.

ಎನ್ ಎಸ್ ಭಟ್

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.