ಲವ್‌ ಜೆಹಾದ್‌ ವಿರುದ್ಧ ಪಾಕ್‌ ನಲ್ಲಿ ಚಳವಳಿ


Team Udayavani, Mar 12, 2021, 8:31 AM IST

ಲವ್‌ ಜೆಹಾದ್‌ ವಿರುದ್ಧ ಪಾಕ್‌ ನಲ್ಲಿ ಚಳವಳಿ

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್‌: “ನಮ್ಮ ಮಗಳನ್ನು ರಕ್ಷಿಸಿ’, “ನಮ್ಮನ್ನು ಕಾಪಾಡಿ’- ಮಾ.8ರ ಮಹಿಳಾ ದಿನದಂದು ಇಂಥ ಫ‌ಲಕಗಳನ್ನು ಹಿಡಿದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಕ್ಖ್  ಜನಾಂಗದ ನೂರಾರು ಮಂದಿ ಪಾಕಿಸ್ಥಾನದ ಲಾಹೋರ್‌ ಪ್ರಸ್‌ಕ್ಲಬ್‌ ಮುಂದೆ ಜಮಾಯಿಸಿದ್ದರು. ಅವರೆಲ್ಲರ ಧ್ವನಿ ಒಂದೇ… “ಮದುವೆಗಾಗಿ ಲವ್‌ ಜೆಹಾದಿ ನಿಲ್ಲಿಸಿ’! ಇದು ಪಾಕ್‌ನಲ್ಲಿ ತೀವ್ರಗೊಂಡಿರುವ “ಸಹಿಷ್ಣುತೆಗಾಗಿ ಹೋರಾಟ’ದ (ರಾದಾರಿ ಟೆಹ್ರಿಕ್‌) ಒಂದು ಝಲಕ್‌. ಈ ಚಳವಳಿಗೆ ರಾಷ್ಟ್ರೀಯ ಶಾಂತಿ ಸಮಿತಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ. “ಮುಸ್ಲಿಮ್‌ ಯುವಕರು, ಮುಸ್ಲಿಮೇತರ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಮೋಸದಿಂದ ವಂಚಿಸಿ, ಮತಾಂತರ ಮಾಡುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆಯದೇ ವಿವಾಹಕ್ಕಾಗಿ ಇಂಥ ದುಷ್ಕೃತ್ಯಗಳು ನಡೆಯುತ್ತಿವೆ’ ಎಂದು ಚಳವಳಿ ನೇತಾರ ಸ್ಯಾಮ್ಸನ್‌ ಸಲಾಮತ್‌ ತಿಳಿಸಿದ್ದಾರೆ.

ಶೇ.54 ಹಿಂದೂ ಧರ್ಮೀಯರು!: ಲಾಹೋರ್‌ನ ಸಾಮಾಜಿಕ ನ್ಯಾಯ ಕೇಂದ್ರದ ಮಾಹಿತಿಯಂತೆ, 2013-2020ರ ನಡುವೆ 162 ಅಪ್ರಾಪ್ತೆಯರ ಮತಾಂತರ ಪ್ರಶ್ನಾರ್ಹವೆನ್ನಿಸಿದೆ. ಇದರಲ್ಲಿ ಶೇ.54 ಸಂತ್ರಸ್ತೆಯರು ಹಿಂದೂ, ಶೇ.44 ಮಂದಿ ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವರಾಗಿದ್ದಾರೆ.   ಸಂತ್ರಸ್ತೆಯರ ಪೈಕಿ ಶೇ.46 ಮಂದಿ ಅಪ್ರಾಪ್ತೆಯರು, ಅದರಲ್ಲೂ ಶೇ.33 ಮಂದಿ 11-15 ವಯಸ್ಸಿನವರಾಗಿದ್ದಾರೆ. ಶೇ.17 ಮಂದಿ ಮಾತ್ರವೇ 18 ವರ್ಷಕ್ಕಿಂತ  ಮೇಲ್ಪಟ್ಟವರಾಗಿದ್ದಾರೆ.

13 ವರ್ಷದ ಬಾಲಕಿ ಕಿಡ್ನ್ಯಾಪ್‌ :

ಅಪ್ಪನ ಕಣ್ಣೆದುರೇ 13 ವರ್ಷದ ಬಾಲಕಿಯನ್ನು ಅಪಹರಿಸಿ, ವಿವಾಹಕ್ಕಾಗಿ ಬಲವಂತದಿಂದ ಮತಾಂತರಿಸಿದ ಪ್ರಕರಣ ಮಹಿಳಾ ದಿನದಂದೇ ಪಾಕ್‌ನಲ್ಲಿ ಜರಗಿದೆ. ಸಿಂಧ್‌ ಪ್ರಾಂತ್ಯದ ಬಹಲ್ರಾನಿ ಬುಡಕಟ್ಟು ಜನಾಂಗದ ಬಾಲಕಿ ಕವಿತಾ ಬಾಯಿಯನ್ನು ಇಸ್ಲಾಂ ಮೌಲ್ವಿಯೊಬ್ಬ ಮತಾಂತರಿಸುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಈಕೆಯನ್ನು ಅಪಹರಣಕಾರನಿಗೇ ಕೊಟ್ಟು ಮದುವೆ ಮಾಡಲಾಗಿದೆ. ಮಾ.8ರಂದು ಐವರು ಶಸ್ತ್ರಧಾರಿಗಳು, ಬಾಲಕಿ ಮನೆಗೆ ನುಗ್ಗಿ, ಅಪಹರಿಸಿದ್ದರು.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.