ಸವಾರರಿಗೆ “ಸಾವಿನ ದಾರಿ’ಯದ್ದೇ ಸಮಸ್ಯೆ

ಕಿಕ್ಕೇರಿ ಭಾಗದಲ್ಲಿ ಹದಗೆಟ ರಸ್ತೆಗಳಿಂದ ಸವಾರರು ಪರದಾಟ

Team Udayavani, Mar 14, 2021, 12:11 PM IST

ಸವಾರರಿಗೆ “ಸಾವಿನ ದಾರಿ’ಯದ್ದೇ ಸಮಸ್ಯೆ

ಕಿಕ್ಕೇರಿ: ಜಿಲ್ಲೆಯ ಗಡಿಭಾಗ ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳ ರಸ್ತೆಗಳಲ್ಲಿ ಗುಂಡಿಗಳೇ ತುಂಬಿಹೋಗಿದ್ದು ಸಣ್ಣ ನೀರು ಹರಿದರೂ ಕೆಸರು ಗದ್ದೆಯಾಗುವಂತಾಗಿದೆ.

ಪಟ್ಟಣದ ಮೂಲಕ ಶ್ರೀರಂಗಪಟ್ಟಣ, ಅರಸೀಕೆರೆ ರಾಜ್ಯ ಹೆದ್ದಾರಿ(ಎನ್‌ಎಚ್‌ 7) ಹಾದು ಹೋಗಿದ್ದುಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ಎನ್ನುವುದಷ್ಟೇ ಭಾಗ್ಯವಾದಂತಿದೆ. ಮಳೆ ಇರಲಿ, ಬೇಸಿಗೆ ಇರಲಿಇಲ್ಲಿಗೆ ಗುಂಡಿಗೆ ಬರವಿಲ್ಲ. ಮೈಸೂರಿಗೆ ಮುಂಬೈಹತ್ತಿರದ ಹೆದ್ದಾರಿಯಾಗಿರುವುದರಿಂದ ನಿತ್ಯವೂ ಸಾವಿ ರಾರು ಸರ್ಕಾರಿ, ಖಾಸಗಿ ವಾಹನ ಸಂಚರಿಸುತ್ತವೆ. ಕೆ.ಆರ್‌.ಪೇಟೆಯಿಂದ ಚನ್ನರಾಯಪಟ್ಟಣದವರೆಗೆ ಲೆಕ್ಕವಿಲ್ಲದಷ್ಟು ಗುಂಡಿ, ಮೈಲಿ ಉದ್ದಕ್ಕೆ ರಸ್ತೆ ಹಂಪ್‌ ಗಳಿವೆ. ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರ ಮಜ್ಜನ, ಅಧಿಕ ತೂಕ ಹೊತ್ತು ಸಾಗುವ ಜಲ್ಲಿ ಕಲ್ಲು, ಕಬ್ಬಿಣದ ಲಾರಿ, ಟ್ರ್ಯಾಕ್ಟರ್‌ ಭಾರ ತಾಳಲಾರದೆ ರಸ್ತೆ ಗುಂಡಿ ಬಿದ್ದು ಹಾಳಾಗಿದೆ.  ಪರಿಣಾಮ ವಾಹನಸವಾರರು ಗುಂಡಿ ತಪ್ಪಿಸಲು ರಸ್ತೆ ಮಗ್ಗಲಿಗೆ ಬರುವುದ ರಿಂದ ಅಪಘಾತಗಳಿಗೆ ಕೊರತೆ ಇಲ್ಲದಂತಿದೆ.

ಅವೈಜ್ಞಾನಿಕ ರಸ್ತೆ ದಿಣ್ಣೆ: ಅವೈಜ್ಞಾನಿಕವಾಗಿ ಹಳ್ಳಿ ಗೊಂದು ರಸ್ತೆ ಹಂಪ್‌ (ಬ್ರೇಕರ್‌)ಗಳಿವೆ. ಮೈಮರೆತರೆಗದ್ದೆಯ ಬದುವಿನಂತಹ ರಸ್ತೆ ಡುಬ್ಬ, ರಸ್ತೆಗೆ ಅಡ್ಡಲಾಗಿ ಕೃಷಿ ನೀರಿನ ಪೈಪು ತೆಗೆದುಕೊಳ್ಳಲು ರೈತರುಅಗೆದಿರುವ ಗುಂಡಿಗಳು, ತಿರುವಿನ ರಸ್ತೆಗಳು,ಹೆದ್ದಾರಿಯ ಇಕ್ಕೆಲಗಳಲ್ಲಿನ ಒಣಗಿದ ಬೃಹತ್‌ ಮರಗಳು, ರೆಂಬೆಗಳ ತೆರವು ಆಗಬೇಕಿದೆ. ತೆರವಿನನೆಪದಲ್ಲಿ ಮರಕಡಿದರೆ ಸಾಲದು ಮತ್ತಷ್ಟು ಮರಗಳನ್ನು ನೆಟ್ಟು ಉಳಿಸುವ ಕೆಲಸವೂ ಆಗಬೇಕಿದೆ.

 ಅಪಾಯಕರ ಗುಂಡಿ: ಕೃಷ್ಣಾಪುರ, ಕೋಡಿಮಾರನಹಳ್ಳಿ ಪೆಟ್ರೋಲ್‌ ಬಂಕ್‌ ತಿರುವು, ಸಮುದಾಯ ಆರೋಗ್ಯ ಕೇಂದ್ರ, ಆರಕ್ಷಕ ಠಾಣೆ, ಬಸವನಹಳ್ಳಿ ತಿರುವು,ಪುರಗೇಟ್‌ ರಸ್ತೆ ಡುಬ್ಬ, ಆನೆಗೊಳ ಬಳಿ ಕಜ್ಜಿಯಂತಿರುವ ರಸ್ತೆ.

ಸರಕು ಬೆಲೆ ದುಪ್ಪಟ್ಟು, ಗ್ರಾಹಕನಿಗೆ ಪೆಟ್ಟು: ಮುಂಬೈಗೆ ಸಾಗಲು ಈ ಮಾರ್ಗ ಬಲು ಹತ್ತಿರವಾದರೂ ರಸ್ತೆ ಹಾಳಾಗಿರುವುದರಿಂದ ಬೆಳ್ಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬಹುತೇಕಮುಂಬೈ, ಆಂಧ್ರ, ದೆಹಲಿ ಮತ್ತಿತರ ಅಂತಾರಾಜ್ಯಕ್ಕೆ ನಿತ್ಯ ಸರಕು ಹೊತ್ತು ಸಾಗುತ್ತಿವೆ. ಪರಿಣಾಮ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗುತ್ತಿದೆ ಎನ್ನುವುದು ಗ್ರಾಹಕರ, ವ್ಯಾಪಾರಿಗಳ ಆರೋಪವಾಗಿದೆ.

ಶ್ರೀರಂಗಪಟ್ಟಣದಿಂದ ಅರಸೀಕೆರೆಗೆ ಸಾಗುವ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ,ಅಗಲೀಕರಣ ಎಂದು ಸರ್ಕಾರಕ್ಕೆ ಮನವಿಮಾಡಿಕೊಂಡಿರುವ ಪತ್ರ ಎಲ್ಲೆಡೆ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಬಿಟ್ಟರೆ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗುತ್ತಿಲ್ಲ

ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ರಸ್ತೆಗಳದ್ದೇ ಸಮಸ್ಯೆ :

ಹೊಯ್ಸಳರ ಕಾಲದ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ತೆಂಗಿನಘಟ್ಟದ ಈಶ್ವರ, ಕಿಕ್ಕೇರಿ ಬ್ರಹ್ಮೇಶ್ವರ, ಯೋಗನರಸಿಂಹ ದೇಗುಲ, ಸಾಸಲುವಿನ ಸೋಮೇಶ್ವರ, ಶಂಭುಲಿಂಗೇಶ್ವರ, ಮಂದಗೆರೆ ಅಂಕನಾಥೇಶ್ವರ,ಮಾದಾಪುರದ ಪಶ್ಚಿಮವಾಹಿನಿ, ಗೋವಿನಕಲ್ಲು, ರಾಮೇಶ್ವರ ದೇಗುಲ, ಸೋಮವಾರಪೇಟೆ ಸಾಕಮ್ಮ ನಿರ್ಮಿಸಿರುವ ಚೌಡೇನಹಳ್ಳಿ ಅಣೆಗೆ ಸಾಗಲು ಡಾಂಬರು ರಸ್ತೆ ಇರಲಿ ಸಮರ್ಪಕವಾದ ಕಚ್ಚಾ ರಸ್ತೆಗಳೂ ಇಲ್ಲವಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಮುಖ ಮಾಡಬೇಕಿದೆ.

ಶಾಶ್ವತ ಕಾಮಗಾರಿ ನಡೆಸಿ :

ಜನಪ್ರತಿನಿಧಿಗಳು ನಿದ್ರೆಗೆ ಜಾರಿದರೆ, ಅಧಿಕಾರಿಗಳು ಜಾಣಕುರುಡರಾಗಿದ್ದಾರೆ.ಸರ್ಕಾರಕ್ಕೆ ಲಕ್ಷಾಂತರ ರೂ. ಈ ರಸ್ತೆಯಿಂದಲೇವರಮಾನವಿದೆ. ರಸ್ತೆಗೆ ತೇಪೆ ಹಾಕುವ ಬದಲುಶಾಶ್ವತ ಕಾಮಗಾರಿ ಮಾಡಬೇಕಿದೆ. ಜನ,ಜಾನುವಾರು, ರೈತರ ಸರಕು ಸಾಗಾಣಿಕೆಸಾಗಿಸಲು ತುರ್ತಾಗಿ ಅಧ್ವಾನವಾಗಿರುವರಸ್ತೆಗಳನ್ನು ದುರಸ್ತಿ ಮಾಡಿಸಲು ಜಿಲ್ಲಾಉಸ್ತುವಾರಿ ಸಚಿವರಾಗಿರುವ ನಮ್ಮ ಕ್ಷೇತ್ರದವರೇ ಆದ ಕೆ.ಸಿ. ನಾರಾಯಣಗೌಡರುಮುಂದಾಗಬೇಕು ಎಂದು ಆನೆಗೊಳದ ಸಾಮಾಜಿಕ ಸೇವಾಕರ್ತ ಪ್ರಸನ್ನ ತಿಳಿಸಿದರು.

ಹೆದ್ದಾರಿ ವಾರ್ಷಿಕ ನಿರ್ವಹಣೆಯಡಿಸಾಕಷ್ಟು ಗುಂಡಿಗಳನ್ನು ಮುಚ್ಚಲಾಗಿದೆ.ರಸ್ತೆ ಸಂಪೂರ್ಣ ರಿಪೇರಿಗೆ ಮೇಲಧಿಕಾರಿ,ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತ್ವರಿತವಾಗಿಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ರವಿಕುಮಾರ್‌, ಲೋಕೋಪಯೋಗಿ ಇಲಾಖೆ, ಅಭಿಯಂತರರು

 

ತ್ರಿವೇಣಿ

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.