ಕಾಸು ಪಡೆಯುವ ಸುಂಕದ ಕಟ್ಟೆಗೂ ಗತಿಗೇಡು ! ರಾ.ಹೆ.75ರ ಬ್ರಹ್ಮರಕೂಟ್ಲು ಟೋಲ್‌ ಫ್ಲಾಜಾ


Team Udayavani, Mar 23, 2021, 5:10 AM IST

ಕಾಸು ಪಡೆಯುವ ಸುಂಕದ ಕಟ್ಟೆಗೂ ಗತಿಗೇಡು ! ರಾ.ಹೆ.75ರ ಬ್ರಹ್ಮರಕೂಟ್ಲು ಟೋಲ್‌ ಫ್ಲಾಜಾ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ರಸ್ತೆಗಳ ಸ್ಥಿತಿ ಒಂದು ರೀತಿಯಾದರೆ, ಟೋಲ್‌ ಪ್ಲಾಜಾದ ಕತೆ ಇನ್ನೊಂದು ರೀತಿ. ರಸ್ತೆಯ ಅವ್ಯವಸ್ಥೆ ಕುರಿತು ಬೇಸತ್ತುಕೊಂಡ ಬಳಿಕ ಟೋಲ್‌ ಪಾವತಿಗೆ ಕಾಯುವುದೂ ಬೇಸರದ ಸಂಗತಿಯೇ ಆಗಿದೆ. ಇರುವ ಎರಡೇ ಎರಡು ಬೂತ್‌ಗಳಲ್ಲಿ ದಿನದ ಹೆಚ್ಚಿನ ಸಮಯ ಟೋಲ್‌ ಪಾವತಿಗಾಗಿ ಕಾಯುತ್ತಿರುವ ವಾಹನಗಳ ಉದ್ದನೆಯ ಸಾಲು!
ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್‌ ಫ್ಲಾಝಾವನ್ನು ವೀಕ್ಷಿಸಬೇಕು. ಉಳಿದೆಡೆ ಟೋಲ್‌ ಸಂಗ್ರಹಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಗಳಿದ್ದರೆ ಇಲ್ಲಿ ಅವ್ಯವಸ್ಥೆಯಲ್ಲೇ ಟೋಲ್‌ ಸಂಗ್ರಹ ನಡೆಯುತ್ತಿದೆ.

ಒಂದು ಟ್ರಸ್‌ ಮಾದರಿಯ ಮೇಲ್ಛಾವಣಿಯನ್ನು ನಿರ್ಮಿಸಿ ಎರಡು ಬೂತ್‌ಗಳನ್ನಿಟ್ಟು ಟೋಲ್‌ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಸರಕಾರಕ್ಕೆ ದುಡ್ಡು ಮಾಡುವ ಯೋಚನೆ ಇದೆಯೇ ವಿನಾ ಜನರಿಗೆ ಸೇವೆ ನೀಡಬೇಕೆಂಬ ಎಳ್ಳಷ್ಟು ಇಚ್ಛೆಯೂ ಇಲ್ಲ ಎಂಬುದು ಅವ್ಯವಸ್ಥೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ಸರಕಾರವೇ ರೂಪಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. “ಇಲ್ಲ ಎಲ್ಲ ವ್ಯವಸ್ಥೆ ಸರಿಯಾಗಿಯೇ ಇದೆ’ ಎಂದು ಯಾವೊಬ್ಬ ಅಧಿಕಾರಿಯೂ ಹೇಳುತ್ತಿಲ್ಲ. ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಉಳಿದ ಟೋಲ್‌ ಫ್ಲಾಜಾಗಳ ವ್ಯವಸ್ಥೆ ಗಳನ್ನು ಕಾಣುವಾಗ ಶುಲ್ಕ ಪಾವತಿಸಬೇಕು ಅನ್ನಿಸುತ್ತದೆ. ಆದರೆ ಬ್ರಹ್ಮರಕೂಟ್ಲುನಲ್ಲಿ ಅಂತಹ ಯಾವುದೇ ವ್ಯವಸ್ಥೆಗಳಿಲ್ಲ. ದಶಕಗಳ ಹಿಂದೆ ಅನುಷ್ಠಾನಗೊಳಿಸಿದ ವ್ಯವಸ್ಥೆಗಳನ್ನೇ ಮುಂದುವರಿಸಲಾಗಿದೆ. ಬೂತ್‌ಗಳಿಗೆ ಟರ್ಪಾಲು ಹಾಕಿ ಸಿಬಂದಿ ರಕ್ಷಣೆ ಪಡೆದುಕೊಳ್ಳಬೇಕಾದ ವ್ಯವಸ್ಥೆ ಇದೆ. ಇಲ್ಲಿನ ಮೇಲ್ಛಾವಣಿಯ ಕಬ್ಬಿಣಗಳು ತುಕ್ಕು ಹಿಡಿದು ಯಾವಾಗ ಮೇಲೆ ಬೀಳುತ್ತದೆ ಎಂದು ಹೇಳುವಂತಿಲ್ಲ!

ಸರತಿ ನಿಲ್ಲವುದು ತಪ್ಪಲಿಲ್ಲ
ಟೋಲ್‌ಗ‌ಳಲ್ಲಿ ಜನರನ್ನು ಕಾಯಿಸಬಾರದು ಎಂದು ಸರಕಾರವು ಹಲವು ವ್ಯವಸ್ಥೆಗಳನ್ನು ಟೋಲ್‌ ಫ್ಲಾಜಾಗಳಲ್ಲಿ ಅನುಷ್ಠಾನಗೊಳಿಸಿದ್ದು, ಇತ್ತೀಚೆಗೆ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿತ್ತು. ಆದರೆ ಬ್ರಹ್ಮರಕೂಟ್ಲು ಟೋಲ್‌ ಫ್ಲಾಜಾದಲ್ಲಿ ಫಾಸ್ಟ್ಯಾಗ್ ಬರಲಿ, ಇನ್ನೊಂದು ವ್ಯವಸ್ಥೆಯೇ ಬರಲಿ; ವಾಹನಗಳು ಸರತಿಯಲ್ಲಿ ನಿಂತು ಕಾಯುವುದು ಮಾತ್ರ ತಪ್ಪಿಲ್ಲ.
ಟೋಲ್‌ ಸಂಗ್ರಹಕ್ಕೆ ಎರಡೇ ಬೂತ್‌ಗಳಿದ್ದು, ಹೀಗಾಗಿ ಕಾಯುವುದು ಅನಿವಾರ್ಯವಾಗಿದೆ. ಬೆಳಗ್ಗಿನಿಂದ ಹೊತ್ತು ಬಿ.ಸಿ. ರೋಡು ಭಾಗದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳ ಸರತಿ ಕಂಡುಬಂದರೆ, ಸಂಜೆಯ ಹೊತ್ತು ಮಂಗಳೂರು ಕಡೆಯಿಂದ ಬಿ.ಸಿ. ರೋಡು ಭಾಗಕ್ಕೆ ಬರುವ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

ಬ್ರಹ್ಮರಕೂಟ್ಲುನಲ್ಲಿ 3ನೇ ಬೂತ್‌ಗಾಗಿ ಕಳೆದ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದ್ದರೂ ಇನ್ನೂ ಅದು ಅನುಷ್ಠಾನಗೊಂಡಿಲ್ಲ. 3ನೇ ಬೂತಿಗೆ ಹೆದ್ದಾರಿ ವಿಸ್ತ ರಣೆಯ ಕಾಮಗಾರಿ ಆಮೆಗತಿಯಲ್ಲಿದೆ. ಹೀಗಾಗಿ ಅದು ಸದ್ಯಕ್ಕೆ ಅನುಷ್ಠಾನ ಗೊಳ್ಳುವ ಲಕ್ಷಣ ಗಳು ಕಾಣುತ್ತಿಲ್ಲ. ಫಾಸ್ಟಾಗ್‌ ಬರುವುದಕ್ಕೆ ಮುನ್ನ ಟೋಲ್‌ ಸಿಬಂದಿಯ ಜತೆಗೆ ಒಳ ಹೊಂದಾಣಿಕೆಯಿಂದ ಕೆಲವು ನಿತ್ಯ ಸಂಚಾರಿ ವಾಹನಗಳು ಹತ್ತೋ ಇಪ್ಪತ್ತೋ ನೀಡಿ ಮುಂದಕ್ಕೆ ಸಾಗುವ ಕ್ರಮವೂ ಇಲ್ಲಿತ್ತು!

ಶೌಚಾಲಯ ವ್ಯವಸ್ಥೆ ಇಲ್ಲ
ಪ್ರತಿ ಟೋಲ್‌ ಫ್ಲಾಜಾಗಳಲ್ಲೂ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ಇರುವುದು ನಿಮಯ. ಆದರೆ ಈ ಟೋಲಿಗೆ ಅಂತಹ ಯಾವುದೇ ನಿಯಮ ಅನ್ವಯಿ ಸುವುದಿಲ್ಲ. ಆರಂಭದಲ್ಲಿ ಮಾಡಿದ ಶೌಚಾಲಯ ಅವ್ಯವಸ್ಥೆ ಯಿಂದ ಕೂಡಿದೆ. ಪ್ರತಿವರ್ಷ ಟೋಲ್‌ನಲ್ಲಿ ಕೋಟ್ಯಂತರ ರೂ.ಸಂದಾಯ ವಾಗುತ್ತಿದೆಯೇ ವಿನಾ ಅದರಿಂದ ಕನಿಷ್ಠ ಮೊತ್ತವೂ ನಿರ್ವಹಣೆಗೆ ವಿನಿಯೋಗವಾಗದೇ ಇರುವುದು ವಿಪ ರ್ಯಾಸವೇ ಸರಿ.

ಕಾಳಗಕ್ಕೆ ವೇದಿಕೆಯಾಗಿತ್ತು !
ಬ್ರಹ್ಮರಕೂಟ್ಲು ಟೋಲ್‌ ಫ್ಲಾಜಾವು ಒಂದು ಕಾಲದಲ್ಲಿ ಹಲವು ಕಾಳಗಕ್ಕೆ ವೇದಿಕೆಯಾಗಿತ್ತು. ಅಧಿಕಾರಿಗಳ ಅವ್ಯವಸ್ಥೆಯಿಂದ ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಮಾಯಕ ಸಿಬಂದಿ ಪೆಟ್ಟು ತಿಂದ ಘಟನೆಗಳೂ ನಡೆದಿದ್ದವು. ಈಗಲೂ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಲೇ ಇರುತ್ತದೆ.

ಟಾಪ್ ನ್ಯೂಸ್

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.