ಜಿಲ್ಲಾಡಳಿತ ಭವನಕ್ಕೆ ಹಸಿರು ಮೆರಗು


Team Udayavani, Mar 23, 2021, 12:28 PM IST

ಜಿಲ್ಲಾಡಳಿತ ಭವನಕ್ಕೆ ಹಸಿರು ಮೆರಗು

ಗದಗ: ರಸ್ತೆ ಅಗಲೀಕರಣದಲ್ಲಿ ತೆರವುಗೊಂಡಿದ್ದ ಹಳೇ ಕಲ್ಲಿನ ಕಂಬಗಳನ್ನು ಪುನರ್‌ ಸ್ಥಾಪನೆಯೊಂದಿಗೆ ಹಸಿರೀಕರಣಕ್ಕೆ ಒತ್ತು ನೀಡಿದ್ದರಿಂದ ಜಿಲ್ಲಾಡಳಿತಭವನದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.ಈಚಲ ಗಿಡ ಮಾದರಿಯ ಡೇಟ್‌ ಫಾರ್ಮ್ಸಸಿಗಳನ್ನು ನೆಟ್ಟಿದ್ದರಿಂದ ಜಿಲ್ಲಾಡಳಿತ ಭವನದ ಮೆರಗು ಹೆಚ್ಚಿದೆ.

ಜಿಲ್ಲಾಡಳಿತ ಮತ್ತು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಹೊರಭಾಗದಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ಈ ಹಿಂದೆ ಕಾಂಪೌಂಡ್‌ ಹೊರ ಭಾಗದಲ್ಲಿ ಜಾಲಿ ಗಿಡ ಬೆಳೆಯುತ್ತಿದ್ದರಿಂದ ಜಿಲ್ಲಾಡಳಿತ ಭವನದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದವು. ಇದನ್ನುತಪ್ಪಿಸಲು ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಸುಮಾರು 300 ಮೀಟರ್‌ ಉದ್ದ 15 ಅಡಿಯಷ್ಟುಅಗಲದಷ್ಟು ಇಳಿಜಾರು ಮಾದರಿಯಲ್ಲಿ ಹುಲ್ಲುಗಾವಲು ಬೆಳೆಸಲಾಗಿದೆ. ಜತೆಗೆ ಜಿಲ್ಲಾಡಳಿತಭವನದ ಮುಖ್ಯ ಗೇಟ್‌ಗಳ ಎರಡೂ ಬದಿಯಲ್ಲಿಅಲಂಕಾರಿಕ ಗಿಡಗಳನ್ನು ಬಳಸಿ “ಜಿಲ್ಲಾಡಳಿತಭವನ ಗದಗ’ ಎಂದು ಬರೆಯಲಾಗಿದೆ. ಗಾರ್ಡನ್‌ ಸುತ್ತಲೂ ವಿವಿಧ ಗಿಡ ಬೆಳೆಸಿರುವುದು ದಾರಿ ಹೋಕರಿಗೆ ಮುದ ನೀಡುತ್ತಿವೆ.

ಹಳೇ ಕಲ್ಲಿನ ಕಂಬಗಳಿಗೆ ಮರು ಜೀವ: ಮಹಾತ್ಮ ಗಾಂಧಿ  ವೃತ್ತ, ಬೆಟಗೇರಿ ಹೆಲ್ತ್‌ ಕ್ಯಾಂಪ್‌ನಲ್ಲಿದಶಕಗಳ ಹಿಂದೆ ಕೂಡು ರಸ್ತೆಗಳ ನಾಲ್ಕೂ ಬದಿಯಲ್ಲಿ ನಗರದ ಆಕರ್ಷಣೆಗಾಗಿ ತಲಾ 2 ಬೃಹತ್‌ ಕಲ್ಲಿನ ಕಂಬ ನಿಲ್ಲಿಸಲಾಗಿತ್ತು. ಆದರೆ ಇತ್ತೀಚೆಗೆ ನಗರದ ಭೂಮರೆಡ್ಡಿ ವೃತ್ತದಿಂದಬೆಟಗೇರಿ ಸಿಎಸ್‌ಐ ಆಸ್ಪತ್ರೆ ಸಮೀಪದವರೆಗೆರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗದಲ್ಲಿರುವ ಗಾಂಧಿ ವೃತ್ತ ಮತ್ತು ಬೆಟಗೇರಿಯ ಅಂಬಾಭವಾನಿ ವೃತ್ತದಲ್ಲಿನ ಕಲ್ಲಿನಬೃಹತ್‌ ಕಂಬಗಳು ನೆಲಕ್ಕುರುಳಿದ್ದವು. ಇದನ್ನು ಗಮನಿಸಿದ್ದ ಹಿಂದಿನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್‌ ಎಸ್‌. ಎನ್‌., ಈ ಕಲ್ಲಿನ ಕಂಬಗಳ ಪುನರ್‌ ಬಳಕೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎಂ.

ಸುಂದರೇಶ ಬಾಬು ಈ ಬಗ್ಗೆ ವಿಶೇಷ ಆಸಕ್ತಿ ತೋರಿದ್ದರಿಂದ ಅನುಷ್ಠಾನಕ್ಕೆ ಬಂದಿದೆ.ಸುಮಾರು 10 ರಿಂದ 15 ಅಡಿ ಎತ್ತರದಪುರಾತನ ಕಲ್ಲುಗಳನ್ನು ಮರು ಕೆತ್ತನೆ ಮೂಲಕ ಅವುಗಳ ಅಂದ ಹೆಚ್ಚಿಸಲಾಗಿದೆ. ಭವನದ ಪ್ರವೇಶ ದ್ವಾರದಲ್ಲಿ ಮರು ಪ್ರತಿಷ್ಠಾಪಿಸಲಾಗಿದೆ.ಈ ಮೂಲಕ ಕಂಬಗಳು ಖಾಸಗಿಯವರಪಾಲಾಗುವುದನ್ನು ತಪ್ಪಿಸಲಾಗಿದೆ. ಜತೆಗೆ ದಶಕಗಳಹಳೆಯ ಕಂಬಗಳಿಗೆ ಮರುಜೀವ ನೀಡಿದೆ. ಕೋಟೆಮಾದರಿಯಲ್ಲಿರುವ ಜಿಲ್ಲಾಡಳಿತ ಭವನದಕಟ್ಟಡಕ್ಕೆ ಐತಿಹಾಸಿಕ ಸ್ಪರ್ಶ ನೀಡಿದಂತಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ.

ಮರಗಳ ಸ್ಥಳಾಂತರ :

ಈ ಹಿಂದೆ ಹೆದ್ದಾರಿಗಳಲ್ಲಿ ರಸ್ತೆ ಅಗಲೀಕರಣದಲ್ಲಿ ಕೊಡಲಿ ಪೆಟ್ಟಿಗೆ ಬಲಿಯಾಗುವ ಬೃಹತ್‌ ಮರಗಳ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತ ರಾಷ್ಟ್ರಮಟ್ಟದ ಪುರಸ್ಕಾರಕ್ಕೂಪಾತ್ರವಾಗಿತ್ತು. ಇದೀಗ ಜಿಲ್ಲಾಡಳಿತ ಭವನದ ಸೌಂದರ್ಯವೃದ್ಧಿಗಾಗಿ ಮತ್ತೂಮ್ಮೆ ಮರಗಳ ಸ್ಥಳಾಂತರ ಸಾಹಸಕ್ಕೆಕೈ ಹಾಕಿ, ಸೈ ಎನಿಸಿಕೊಂಡಿದೆ. ಬೇರೆಡೆ ಬೆಳೆದು ನಿಂತಿದ್ದಬೃಹತ್‌ ಮರ ತಂದು ಜಿಲ್ಲಾಡಳಿತ ಭವನದೆದುರು ಮರುನೆಡಲಾಗಿದೆ. ಐತಿಹಾಸಿಕ ಮಾದರಿಯಲ್ಲಿ ಬೃಹತ್‌ ಕಲ್ಲಿನಕಂಬಗಳೊಂದಿಗೆ ಬೃಹತ್‌ ಮರಗಳು ಜಿಲ್ಲಾಡಳಿತ ಭವನದಸೌಂದರ್ಯ ಇಮ್ಮಡಿಗೊಳಿಸಿವೆ. ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಬೆಟಗೇರಿ ಅಂಬಾ ಭವಾನಿ ವೃತ್ತ ಹಾಗೂ ನಗರದ ಮಹಾತಾ ¾ಗಾಂಧಿ ವೃತ್ತದಲ್ಲಿ ಸುಮಾರು ಏಳೆಂಟು ದಶಕಗಳ ಹಿಂದೆ ಸುಂದರ ಕಲಾಕೃತಿಯ ಒಟ್ಟು 14 ಕಂಬ ಸ್ಥಾಪಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣದಿಂದ ಅವು ನೆಲಕ್ಕುರುಳಿದ್ದವು. ಜಿಲ್ಲಾಧಿ ಕಾರಿ ಎಂ. ಸುಂದರೇಶ ಬಾಬು ವಿಶೇಷಪ್ರಯತ್ನದಿಂದ ಅವುಗಳನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜತೆಗೆ ಹಸಿರೀಕರಣಕ್ಕೆ ಒತ್ತು ನೀಡಿದ್ದರಿಂದ ಜಿಲ್ಲಾಡಳಿತ ಭವನ ಮತ್ತಷ್ಟು ಆಕರ್ಷಕವಾಗಿದೆ. ಇದಕ್ಕಾಗಿ 16 ಲಕ್ಷ ರೂ. ವೆಚ್ಚಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭವನದ ಒಳಾಂಗಣದಲ್ಲೂ ಹಸಿರೀಕರಣ ಕಾಮಗಾರಿ ಕೈಗೊಳ್ಳಲಾಗುವುದು. – ಶ್ರೀನಿವಾಸ ಶಿರೋಳ, ನಿರ್ಮಿತಿ ಕೇಂದ್ರದ ಅಧಿಕಾರಿ

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.