ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಮನದನ್ನೆಯ ಸಹಕಾರ, ಪ್ರೀತಿ ವಿಶ್ವಾಸ ಹಿತವೆನಿಸಲಿದೆ.
Team Udayavani, Mar 26, 2021, 7:45 AM IST
26-03-2021
ಮೇಷ: ನಿಮಗೀಗ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಭದ್ರತೆಯ ಅವಶ್ಯಕತೆಯು ತೋರಿಬರಲಿದೆ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ವೈಫಲ್ಯವು ಕಂಡು ಬರುವುದು. ನಿರಾಶಾ ಮನೋಭಾವ ಕಾಡಲಿದೆ. ದೇಹಾಯಾಸವಾದೀತು.
ವೃಷಭ: ನಿಮ್ಮ ವೃತ್ತಿಯಲ್ಲಿ ಸ್ವಲ್ಪ ಏರುಪೇರು ಕಂಡುಬಂದೀತು. ದೇಹಾಯಾಸದಿಂದ ಅನಾರೋಗ್ಯ, ನಿಶ್ಶಕ್ತಿ ಕಾಡಲಿದೆ. ದೂರ ಸಂಚಾರದಿಂದ ಅನಾವಶ್ಯಕ ಧನವ್ಯಯ ಕಂಡುಬಂದೀತು. ವಿಶೇಷ ಬದಲಾವಣೆ ಇರುವುದಿಲ್ಲ.
ಮಿಥುನ: ವಾಕ್ ದೋಷದಿಂದ ಧನಹಾನಿ ಸಂಭವಿಸಲಿದೆ. ಆದರೂ ಹಲವು ವಿಧದಿಂದ ಧನಲಾಭ ಕಂಡು ಬರಲಿದೆ. ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಧನ ಲಾಭ ಬಂದರೂ ಜಾಗ್ರತೆ ಮಾಡುವುದು ಅವಶ್ಯವಿದೆ.
ಕರ್ಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಧನ ಹಾನಿ, ದುಷ್ಟ ವೃತ್ತಿಯಿಂದ ಮಾನಹಾನಿ ಇತ್ಯಾದಿಗಳು ತೋರಿ ಬಂದರೂ ಕುಟುಂಬ ಜನರ ಒಡನಾಟ, ಬಂಧು ಸುಖಗಳಿಂದ ಸಮಾಧಾನ ಸಿಗಲಿದೆ. ದೇವತಾಕಾರ್ಯವಿದೆ.
ಸಿಂಹ: ಕೃಷಿ, ಕಾರ್ಖಾನೆ, ಯಂತ್ರೋದ್ಯಮಗಳ ವ್ಯವಹಾರದಲ್ಲಿ ತೀವ್ರ ತಾಪತ್ರಯ ಕಂಡು ಬರುವುದು. ದುಷ್ಟಗ್ರಹಗಳ ಚಲನೆಯಿಂದ ವಿವಿಧ ಕಷ್ಟನಷ್ಟಗಳಿಂದ ವಿಪದಾಪತ್ತುಗಳು, ಭಯವು ನಿಮ್ಮನ್ನು ಕಾಡಲಿದೆ.
ಕನ್ಯಾ: ಅಪಘಾತ ಭಯ, ರಕ್ತದೋಷ, ಅಪಮಾನ, ಸ್ಥಾನಭ್ರಷ್ಟ, ವಿಷಾಗ್ನಿ ಭಯ ಅನುಭವಕ್ಕೆ ಬಂದರೂ ಸದ್ಯ ಗುರುವಿನ ಅನುಗ್ರಹ ನಿಮ್ಮ ಮೇಲಿದೆ. ಆರೋಗ್ಯ ಉತ್ತಮ. ಮನೆಯಲ್ಲಿ ಪತ್ನಿಯಿಂದ ಸಮಾಧಾನ ಸಂತಸವಿದೆ.
ತುಲಾ: ಆಗಾಗ ತುಸು ಅನಾರೋಗ್ಯ ಕಾಣಿಸಿಕೊಂಡು ದೇಹಕ್ಕೂ ಮನಸ್ಸಿಗೂ ನೆಮ್ಮದಿ ತೀರಾ ಕಡಿಮೆಯಾದೀತು. ಆದರೂ ಸಕಲ ಕಾರ್ಯ, ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲಕರವಾದ ವಾತಾವರಣ ಮೂಡಿಬಂದು ಸಂತಸ.
ವೃಶ್ಚಿಕ: ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ. ಅತೀ ವಿಶ್ವಾಸವು ಭಂಗ ತರಲಿದೆ. ಸಾಂಸಾರಿಕವಾಗಿ ನೆಮ್ಮದಿ ಇದೆ. ಸಾಮಾಜಿಕವಾಗಿ ಮನ್ನಣೆ, ಗೌರವ ಕಂಡು ಬರಲಿದೆ. ರಾಜಕೀಯದವರಿಗೆ ಕಷ್ಟ, ನಷ್ಟ, ವ್ಯಾಕುಲತೆ ಕಂಡುಬಂದೀತು.
ಧನು: ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯವು ಭಯ ದುಃಖಾದಿ ವಾದ, ವಿವಾದ, ತಕರಾರುಗಳನ್ನು ತರಲಿದೆ. ಕುಟುಂಬದ ಹಿರಿಯರ ಅನಾರೋಗ್ಯದಿಂದ ಉದ್ವೇಗ, ಅತಿಯಾದ ಧನವ್ಯಯ ಕಂಡು ಬರುವುದು.
ಮಕರ: ಆತ್ಮೀಯರೊಡನೆ ವಿರಸ ಮೂಡಿ ಬಂದೀತು. ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸಕಾರ್ಯಗಳು ಕೈಗೂಡಲಿವೆ. ಆಕಸ್ಮಿಕ ಧನ ಸಂಪಾದನೆಯಿಂದ ಋಣ ಸಂದಾಯವಾಗಲಿದೆ. ಅದರಿಂದ ಮನಸ್ಸಿಗೆ ಸಮಾಧಾನವಿದೆ.
ಕುಂಭ: ಮನದನ್ನೆಯ ಸಹಕಾರ, ಪ್ರೀತಿ ವಿಶ್ವಾಸ ಹಿತವೆನಿಸಲಿದೆ. ವಿವಾಹಿತರಿಗೆ ಸಂತಾನಭಾಗ್ಯದ ಹುರುಪು ಕಂಡು ಬಂದೀತು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಸ್ಥಾನ ಪ್ರಾಪ್ತಿಯಿಂದ ಸಂತಸ ತಂದೀತು. ಆರೋಗ್ಯ ಸುಧಾರಣೆ.
ಮೀನ: ಕೌಟುಂಬಿಕವಾಗಿ ಉತ್ತಮ ಸಹಕಾರ ಕೊಡುತ್ತಿದ್ದ ಹಿರಿಯರು ಕ್ರಮೇಣ ದೂರ ಉಳಿಯುವ ಸುಳಿವು ದೊರೆತೀತು. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಆದಾಯವಿದ್ದರೂ ಖರ್ಚುವೆಚ್ಚಗಳಿಂದ ಆತಂಕ ಮೂಡಿಬಂದೀತು.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ