ಬೆಟ್ಟಗಳ ರಾಣಿ ಮಸ್ಸೂರಿ; ಗಗನ ಚುಂಬಿ ಬೆಟ್ಟಗಳು, ಪ್ರಕೃತಿ ವೈಭವ


Team Udayavani, Mar 26, 2021, 8:10 PM IST

Mussoorie 03

ಉನ್ನತ ಶಿಕ್ಷಣದ ವಿಭಾಗಗಳಲ್ಲಿ ಶಿಕ್ಷಣದೊಂದಿಗೆ ಶೈಕ್ಷಣಿಕ ಪ್ರವಾಸವೂ ಒಂದು ಭಾಗವಾಗಿರುತ್ತದೆ.

ಹೀಗಾಗಿ ಫೇಬ್ರವರಿ ತಿಂಗಳಲ್ಲಿ ನಮ್ಮ ವಿಭಾಗದ ವತಿಯಿಂದ 12 ದಿನಗಳ ಸುಧೀರ್ಘ‌ ಪ್ರವಾಸ ಕೈಗೊಂಡು ಉತ್ತರಾಖಂಡ, ದಿಲ್ಲಿ ಮತ್ತು ಆಗ್ರಾಕ್ಕೆ ಹೋಗಿಬಂದೆವು. ಇಲ್ಲಿ ನಾನು ಉತ್ತರಖಂಡ ರಾಜ್ಯದ ಮಸ್ಸೂರಿಯಲ್ಲಾದ ಪ್ರವಾಸದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಮೊದಲ ಬಾರಿಗೆ ಉತ್ತರ ಭಾರತಕ್ಕೆ ಹೋಗಿದ್ದೆ. ಮಂಗಳೂರಿನಿಂದ 46 ಗಂಟೆಗಳ ರೈಲಿನಲ್ಲಿ ಪ್ರಯಾಣ ಮೂಲಕ ಡೆಹ್ರಾಡೂನ್‌ಗೆ ತಲುಪಿದೆವು. ಅಂದು ರಾತ್ರಿ ಹೊಟೇಲೊಂದರಲ್ಲಿ ಉಳಿದುಕೊಂಡು ಮರುದಿವಸ ಬೆಳಗ್ಗೆ ಪ್ರವಾಸಿತಾಣಗಳ ಭೇಟಿ ಆರಂಭವಾಯಿತು.

ಕ್ವೀನ್‌ ಆಫ್ ಹಿಲ್ಸ್‌
ಮೊದಲ ದಿನ ಮೊದಲು ಭೇಟಿ ಕೊಟ್ಟಿದ್ದೇ ಮಸ್ಸೂರಿಯಲ್ಲಿರುವ ಕೆಂಪ್ಟಿ ಫಾಲ್ಸ್‌ಗೆ ಮಸ್ಸೂರಿಯಲ್ಲಿ ಚಳಿ ಸ್ವಲ್ಪ ಜಾಸ್ತಿನೇ ಇತ್ತು. ರಸ್ತೆ ಪಯಣವಂತೂ ಮೈನವಿರೇಳಿಸುವಂತ್ತದ್ದು. ಇಕ್ಕಟ್ಟು ರಸ್ತೆಯಲ್ಲಿ ತಿರುವುಮುರವಾಗಿ ಹೋಗಬೇಕಿತ್ತು. ಒಂದು ಬದಿ ತುಂಬಾ ಆಳ. ಇನ್ನೊಂದು ಬದಿ ಎತ್ತರವಾದ ಬೆಟ್ಟಗಳು. ಘಾಟ್‌ ಅಂತಲೇ ಹೇಳಬಹುದು. ಮಾರ್ಗ ಮಧ್ಯೆ ಮಸ್ಸೂರಿಯ ಕ್ವೀನ್‌ ಆಫ್ ಹಿಲ್ಸ್‌ ಎಂದೇ ಕರೆಯುವ ಸ್ಥಳದಲ್ಲಿ ನಿಲ್ಲಸಲಾಯಿತು. ಗಗನ ಚುಂಬಿ ಬೆಟ್ಟಗಳು, ಪ್ರಕೃತಿ ವೈಭವವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಹೊರಟೆವು.

ಕೆಂಪ್ಟಿ ಫಾಲ್ಸ್‌
ಅಲ್ಲಿಂದ ಕೆಂಪ್ಟಿ ಫಾಲ್ಸ್‌ಗೆ ತಲುಪಿದೆವು. ಇಲ್ಲಿ ಎತ್ತರದಿಂದ ಹರಿಯುವ ನೀರನ್ನು ಬೀಳುವ ಸ್ಥಳದಲ್ಲೇ ಸ್ವಲ್ಪ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ನೀರಂತೂ ರಕ್ತ ಹೆಪ್ಪುಗಟ್ಟುವಷ್ಟು ತಂಪಾಗಿತ್ತು. ಸ್ನಾನಕ್ಕೆ ಅವಕಾಶವಿದ್ದರೂ, ಇನ್ನಷ್ಟು ಪ್ರವಾಸಿ ತಾಣಗಳಿಗೆ ಹೋಗಬೇಕಿದ್ದ ಕಾರಣ ಆರೋಗ್ಯ ಕೆಡಬಹುದೆಂಬ ದೃಷ್ಟಿಯಿಂದ ಸ್ನಾನ ಮಾಡದೆ ಜಲಧಾರೆಯನ್ನಷ್ಟೇ ಕಣ್ತುಂಬಿಕೊಂಡೆವು. ಕಣ್ಣು ಹಾಯಿಸಿದಷ್ಟೂ ಕಾಣುವ ಬೆಟ್ಟಗಳನ್ನು ಕಂಡು ವಾವ್‌ ಅಂದೆವು. ರೋಪ್‌ ವೇ, ವಿವಿಧ ಬಗೆಯ ವಸ್ತುಗಳು ಮಾರಾಟಕಿದ್ದವು. ಒಟ್ಟಿನಲ್ಲಿ ಕೆಂಪ್ಟಿ ಫಾಲ್ಸ್‌ ಸುಮಧುರ ಅನುಭವವನ್ನು ಕೊಟ್ಟಿತ್ತು. ಮೋಡ ಮುಸುಕಿದ ವಾತಾವರಣ ಇದ್ದಿದ್ದರಿಂದ ಊಟದ ಹೊತ್ತು ಬಂದದ್ದೇ ಗೊತ್ತಾಗಲಿಲ್ಲ. ಅಲ್ಲಿಯೇ ಭೋಜನ ಮುಗಿಸಿ ಮುಂದುವರೆದೆವು.

ಪ್ರಕಾಶೇಶ್ವರ ದೇವಾಲಯ
ಮಧ್ಯಾಹ್ನದ ಭೋಜನದ ಅನಂತರ ಭೇಟಿ ಕೊಟ್ಟದ್ದು ಹತ್ತಿರದಲ್ಲೇ ಇದ್ದ ಪ್ರಕಾಶೇಶ್ವರ ದೇವಾಲಯಕ್ಕೆ. ಇಲ್ಲಿನ ದೇಗುಲದ ಸಂಕೀರ್ಣ ತುಂಬಾ ಚಿಕ್ಕದಾಗಿದ್ದು, ನಿರ್ಮಾಣ ಬಲು ವಿಶೇಷವಾಗಿರುತ್ತದೆ. ದೇವರ ದರ್ಶನ ಪಡೆದು, ಇಲ್ಲಿನ ವಿಶೇಷ ಪ್ರಸಾದವನ್ನು ಸ್ವೀಕ‌ರಿಸಿ, ದೇಗುಲದ ಪಕ್ಕಕ್ಕೆ ಕಣ್ಣಾಯಿಸಿದಾಗ ಮಾರಾಟ ಮಳಿಗೆ ಕಣ್ಣಿಗೆ ಬಿತ್ತು. ಅಲ್ಲಿ ಒರಿಜಿನಲ್‌ ರುದ್ರಾಕ್ಷಿ ಮಾಲೆ, ಸ್ಫಟಿಕಗಳೆಲ್ಲ ಇತ್ತು. ಅವುಗಳ ಮೊತ್ತವನ್ನು ನೋಡಿಯೇ ಅಲ್ಲಿಂದ ವಾಪಸ್‌ ಬಂದು ನಮ್ಮ ಬಸ್ಸಿನಲ್ಲಿ ಕುಳಿತು ಕೊಂಡೆವು.

ಮಸ್ಸೂರಿ ಸರೋವರ
ದೇಗುಲದಿಂದ ಮುಂದೆ ಹೊರಟಿದ್ದು ಮಸ್ಸೂರಿ ಸರೋವರಕ್ಕೆ. ಸಣ್ಣದೊಂದು ಕಣಿವೆಯಲ್ಲಿ ಬರುವ ನೀರನ್ನು ಕೆರೆಯ ಹಾಗೆ ಮಾಡಿ ಅದರಲ್ಲಿ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಬಲು ವಿಶೇಷವಾಗಿದೆ. ಇದು ಮುಖ್ಯ ರಸ್ತೆ ಬದಿಯಲ್ಲೇ ಇರುವುದರಿಂದ ಮಸ್ಸೂರಿಗೆ ಆಗಮಿಸುವ ಪ್ರವಾಸಿಗರೆಲ್ಲ ಇಲ್ಲಿಗೆ ಭೇಟಿ ನೀಡುತ್ತಾರೆ. ಹಣ ಕೊಟ್ಟು ಟಿಕೆಟ್‌ ಪಡೆದರೆ ಸರೋವರದಲ್ಲಿ ಪೆಡಲಿಂಗ್‌ ಮಾಡಬಹುದು. ಇಲ್ಲಿ ಝಿಪ್‌ ಲೈನ್‌, ಹಾರರ್‌ ಹೌಸ್‌ ಕೂಡ ಇದೆ. ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಲು ಮಸ್ಸೂರಿ ಎಲ್ಲ ರೀತಿಯ ಮನೋರಂಜನ ವ್ಯವಸ್ಥೆ ಹೊಂದಿದೆ. ಅದಾಗಲೇ ಸೂರ್ಯ ಮುಳುಗುವ ಹೊತ್ತಾಗಿತ್ತು ಇಲ್ಲಿಂದ ಮುಂದೆ ನಾವು ತಂಗುವ ಹೊಟೇಲ್‌ಗೆ ಹೋದೆವು. ಮಸ್ಸೂರಿಯಲ್ಲಾದ ಪ್ರವಾಸದ ಅನುಭವ, ಅಲ್ಲಿನ ಚಳಿಯ ವಾತಾವರಣವಂತೂ ಎಂದಿಗೂ ಮರೆಯಲಾರೆವು. ಒಟ್ಟಿನಲ್ಲಿ ಮಸ್ಸೂರಿಯ ಪ್ರವಾಸದ ಅನುಭವ ಮನದಲ್ಲಿ ಅಚ್ಚಳಿಯದಂತೆ ಉಳಿಯಲಿದೆ.


ರೋಹಿತ್‌ ದೋಳ್ಪಾಡಿ, ಮಂಗಳೂರು ವಿ.ವಿ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.