ವಿದ್ಯಾರ್ಥಿ ಜೀವನದ ಬಸ್‌ ಪ್ರಯಾಣ ಅವಿಸ್ಮರಣೀಯ


Team Udayavani, Mar 29, 2021, 4:56 PM IST

KSRTC

ವಿದ್ಯಾಭ್ಯಾಸದ ಸಮಯವೂ ಬಹಳ ಆನಂದ, ಸಂತೋಷ, ಹೊಸ ಚಿಂತನೆ, ಬದುಕಿನುದ್ದಕ್ಕೂ ಸಹಾಯಕನಾಗುವ ಸಮಯ.

ಅಂತಹ ಸಮಯವು ಹೆಚ್ಚಾಗಿ ನೆನಪಿನಲ್ಲಿ ಅಚ್ಚಾಗಿ ಉಳಿಯುತ್ತದೆ. ಅದರಲ್ಲಿ ಬಸ್‌ ಪ್ರಯಾಣವನ್ನು ಆನಂದ ಪಡುವ ಪ್ರಸಂಗಗಳು ಬಂದಿರುತ್ತವೆ. ಶಿಕ್ಷಣಕ್ಕಾಗಿ ಎಲ್ಲಿಂದಲೋ ಎಲ್ಲಿಗೋ ಬಸ್‌ ಮೂಲಕ ಪ್ರಯಾಣಿಸುವ ಪ್ರಸಂಗಗಳು ಬಹಳ ಸೋಜಿಗ. ಚಿರಸ್ಮರಣೀಯವಾಗಿ ನಿಲ್ಲುವಂತಹ ಸಂಗತಿಗಳಾಗಿರುತ್ತವೆ.

ಬೆಳಗ್ಗೆ ಬೇಗನೆ ಎದ್ದು, ಗಡಿಬಿಡಿಯಲ್ಲಿ ಹೊರಡುವ ವಿದ್ಯಾರ್ಥಿಗಳೇ ಹೆಚ್ಚು, ಅರೆನಿದ್ದೆಯಲ್ಲಿ ಎದ್ದಾಗ ನೆನಪಾಗುವುದು ಸಮಯ ಮತ್ತು ಬಸ್‌. ಅವಸರವಸರವಾಗಿ ಮನೆಯಿಂದ ಹೊರಟು ದಾರಿ ಬದಿಯಲ್ಲಿ ಬಸ್‌ಗಾಗಿ ಕಾಯುವ ಖುಷಿಯೇ ಬೇರೆ, ಅದು ಕೂಡ ಅರ್ಧ ನಿದ್ರೆಯ ಮಂಪ ರಿನಲ್ಲಿ. ಈ ಅನುಭವ ಸ್ವಂತ ವಾಹನದಲ್ಲಿ ಪ್ರಯಾಣಿಸುವವರಿಗೆ ಸಿಗದು.

ಈ ಮೇಲಿನ ಪ್ರಸಂಗದಲ್ಲಿ ಬಸ್‌ಗಾಗಿ ಕಾದವರು ಸೀಟು ಇರಲೆಂದು ಪ್ರಾರ್ಥಿಸುವರು ಇದ್ದಾರೆ. ನಿಂತವರು ಕುಳಿತವರ ಬಳಿ ಬ್ಯಾಗ್‌ ಕೊಟ್ಟರೆ ಸಿಡುಕು ಮನಸ್ಸಿನಿಂದ ಸ್ವೀಕರಿಸುವವರು ಕಾಣಸಿಗುತ್ತಾರೆ. ಅನೇಕರಿಗೆ ಹೊಸ ಮುಖದ ಪರಿಚಯವು ಇಲ್ಲಿಂದಲೇ ಪ್ರಾರಂಭವಾಗುವುದುಂಟು.

ಬಸ್ಸಿನ ಪ್ರಯಾಣ ಅನ್ನುವುದಕ್ಕಿಂತ ಹೆಚ್ಚಾಗಿ. ಅದೊಂದು ಹೊಸ ಲೋಕದ ಅನುಭವ ಅನ್ನಬಹುದು, ಅದು ಸನ್ನೆಗಳಿಂದ, ಕಣ್ಣಿನ ಮೂಲಕ ಮಾತನಾಡುವ ಜಾಗವೂ ಹೌದು. ಇಷ್ಟೂ ಮಾತ್ರವಲ್ಲ ಅನೇಕ ಹೊಯ್ದಾಟಗಳಿಗೆ, ಅನೇಕ ಬಿಸಿ ಬಿಸಿ ಚರ್ಚೆ, ಇನ್ನೊಬ್ಬರನ್ನು ಗೇಲಿ ಮಾಡಿಕೊಂಡು ನಗಾಡುವುದು, ಸೀಟಿಗಾಗಿ ಹೊಯ್ದಾಟ, ಇವೆಲ್ಲವು ಈ ಪ್ರಯಾಣದಲ್ಲಿ ಕಾಣಬಹುದು. ಪ್ರೇಮಿಗಳಿಗೆ ಮಾತನಾಡುವ ಸೂಕ್ತ ಜಾಗವೂ ಕೆಲವೊಮ್ಮೆ ಇದೆ ಆಗಿರುತ್ತದೆ. ಸನ್ನೆಗಳಿಂದ ಮಾತನಾಡುವ ಕಲೆಯು ಈ ಪ್ರಯಾಣದಿಂದ ಕಲಿತವರು ಅನೇಕರಿರಬಹುದು.

ಇಷ್ಟೂ ಮಾತ್ರವಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಪ್ರಕೃತಿಯ ಆಹ್ಲಾದಕ್ಕಾಗಿ ಕಿಟಕಿಯ ಬಳಿ ಜಾಗ ಬೇಕು, ಅದಕ್ಕಾಗಿ ಬಸ್ಸು ನಿಲ್ಲುವ ಮುಂಚೆ ಮಂಗಗಳಂತೆ ಹಾರುವ, ಹಿಂಬದಿಯ ಸೀಟು ಸಿಕ್ಕರೆ ಮನಸ್ಸು ಕುಣಿದಾಡುವ ಪ್ರಸಂಗವು ಬಂದಿರುತ್ತವೆ. ಇದರ ಜತೆ ಜತೆಗೆ ಕಿವಿಗೊಂದು ಇಂಪಾದ ಪದ್ಯವನ್ನು ಹಾಕಿಕೊಂಡು ಮನಸ್ಸನ್ನು ಮುದಗೊಳಿಸಿ ತನ್ಮಯತೆಯಿಂದ ತೇಲಾಡುವ ಅನುಭವಸ್ಥರನ್ನು ಕಾಣಬಹುದು.

ಇನ್ನು ಕಂಡೆಕ್ಟರ್‌ ವಿಷಯಕ್ಕೆ ಬರೋಣ, ಸಾಧರಣವಾಗಿ ದಿನನಿತ್ಯ ಒಂದೇ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಕಂಡೆಕ್ಟರ್‌ ಪರಿಚಯವಾಗುವುದು ಉಂಟು, ಒಂದೋ ಜಗಳವಾಡಿ ಪರಿಚಯ ಇಲ್ಲವೊ ಕುಸಲಿನ ಮಾತಿನಿಂದಾಗಿರಬಹುದು. ಜಗಳ ಮಾಡಿಕೊಳ್ಳುವ ಸಂದರ್ಭವು ಬಂದಾಗ ಒಬ್ಬನಿಗಾಗಿ ಇತರ ಸ್ನೇಹಿತರು ಸೇರಿ ಹಬ್ಬ ಆಚರಿಸುವುದು ಇದೆ. ಚಾಲಕ ಲೇಟಾಗಿ ಬಂದರೆ ಕೊಪಿಸಿಕೊಳ್ಳುವ ಮನಸ್ಸುಗಳು ಹೆಚ್ಚಾಗಿರುತ್ತವೆ. ನಿಮಗೂ ಅನಿಸರಬಹುದು. ಹೀಗೆ ಹೇಳಲು ಹೊರಟರೆ ಇನ್ನೂ ಅನೇಕ ಚಿತ್ರ ವಿಚಿತ್ರ ಪ್ರಸಂಗಳಿವೆ. ಕೆಲವೊಂದು ನಿಮ್ಮ ಅನುಭವಕ್ಕೂ ಬಂದಿರಲೂ ಸಾಕು.

ಒಟ್ಟಾರೆಯಾಗಿ ವಿದ್ಯಾರ್ಥಿ ಜೀವನದ ಬಸ್‌ ಪ್ರಯಾಣವು ಒಂದು ತೆರನಾದ ಹೊಸ ಅನುಭವಗ‌ಳ ಬುತ್ತಿ, ಅನೇಕ ಹಾಸ್ಯ-ಗಂಭೀರತೆಗಳ ಪರಿಚಯ.


ಅಕ್ಷಯ್‌ ಕುಮಾರ್‌ ಎ., ಮಂಗಳೂರು ವಿವಿ 

ಟಾಪ್ ನ್ಯೂಸ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.