ಇನ್ನೂ ಆರಂಭಗೊಳ್ಳದ 3 ಇಂದಿರಾ ಕ್ಯಾಂಟೀನ್
Team Udayavani, Mar 30, 2021, 1:28 PM IST
ಕೊಪ್ಪಳ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡ ಜನರಿಗೆ ನಗರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಊಟ, ಉಪಹಾರ ದೊರೆಯಲಿ ಎಂಬ ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿ ಮಾಡಿದೆ. ಕೊಪ್ಪಳ ಜಿಲ್ಲೆಗೆ 5 ಕ್ಯಾಂಟೀನ್ ಮಂಜೂರಾಗಿದ್ದರೂ ಈವರೆಗೆ ಎರಡು ಕ್ಯಾಂಟೀನ್ ಮಾತ್ರ ಬಡವರ ಹಸಿಅವು ನೀಗಿಸುತ್ತಿವೆ. ಉಳಿದ ಮೂರು ಕ್ಯಾಂಟೀನ್ ಆರಂಭವಾಗಿಲ್ಲ.
ಹೌದು. ಕೊಪ್ಪಳ ನಗರ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ಮಾತ್ರ ತಲಾ ಒಂದೊಂದು ಕ್ಯಾಂಟೀನ್ ವರ್ಷದ ಹಿಂದೆ ಆರಂಭವಾಗಿವೆ.ಕುಷ್ಟಗಿ ತಾಲೂಕಿನಲ್ಲಿ ಇನ್ನೂ ಕ್ಯಾಂಟೀನ್ಗೆ ಜಾಗಹುಡುಕಾಟ ನಡೆದಿದೆ. ಗಂಗಾವತಿಯಲ್ಲಿ ಎರಡುಕೇಂದ್ರ ಆರಂಭಿಸಬೇಕಿದೆ. ಒಂದು ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣ ಗೊಂಡಿದ್ದು,ಉದ್ಘಾಟನೆ ಮಾಡೋದು ಮಾತ್ರ ಬಾಕಿಯಿದೆ.ಮತ್ತೂಂದಕ್ಕೂ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ.
ಅಚ್ಚರಿಯೆಂದರೆ, ಎಲ್ಲ ಕ್ಯಾಂಟೀನ್ಗಳು ಆರಂಭವಾಗಿ ಜನರಿಗೆ ಸೇವೆ ಕೊಡಬೇಕಿತ್ತು.ಆದರೆ ಎರಡು ಮಾತ್ರ ಸೇವೆ ನೀಡುತ್ತಿದ್ದು, ಇನ್ನುಮೂರು ಕಾರ್ಯಾರಂಭಗೊಳ್ಳದೇ ಇರುವುದುನಿಜಕ್ಕೂ ಜನರಲ್ಲೂ ಬೇಸರ ತರಿಸಿದೆ.
ಹಸಿವು ನೀಗಿಸುತ್ತಿವೆ ಕ್ಯಾಂಟೀನ್:ಕೊಪ್ಪಳ-ಯಲಬುರ್ಗಾದಲ್ಲಿ ಆರಂಭವಾಗಿರುವಕ್ಯಾಂಟೀನ್ಗಳು ಬಡವರ, ಕೂಲಿ ಕೆಲಸಕ್ಕೆ ನಗರಕ್ಕೆಆಗಮಿಸಿದ ಜನರ, ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಗಳ, ಮನೆಯಲ್ಲಿ ಉಪಹಾರ ಸೇವನೆ ಮಾಡದೇ ಬರುವ ವಿದ್ಯಾರ್ಥಿಗಳ ಹಸಿವುನೀಗಿಸುತ್ತಿವೆ. ಕಡಿಮೆ ಬೆಲೆಯಲ್ಲಿ ಒಂದೊತ್ತಿನಉಪಹಾರ, ಊಟ ಸಿಗುತ್ತಿರುವುದಕ್ಕೆ ಜನರು ಖುಷಿಯಾಗಿದ್ದಾರೆ.
ಇಚ್ಛಾಶಕ್ತಿ ಕೊರತೆಯೋ? ರಾಜಕೀಯವೋ? ಕ್ಯಾಂಟೀನ್ ಆರಂಭಕ್ಕೆ ಇಲ್ಲಿನ ಅಧಿಕಾರಿಗಳನಿರ್ಲಕ್ಷ್ಯವೋ? ಅಥವಾ ಸರ್ಕಾರದ ಇಚ್ಛಾಶಕ್ತಿ ಕೊರತೆಯೋ? ಎನ್ನುವುದೇ ತಿಳಿಯುತ್ತಿಲ್ಲ.ಜನರಿಗೆ ಉಪಯುಕ್ತವಾಗುವ ಕ್ಯಾಂಟೀನ್ಗಳಲ್ಲೂರಾಜಕೀಯ ಬೆರೆಸುವ ಕೆಲಸ ಮಾಡುತ್ತಿರುವುದುನಿಜಕ್ಕೂ ವಿಪರ್ಯಾಸದ ಸಂಗತಿ. ಅಲ್ಲದೇಮೂರು ವರ್ಷದ ಅವಧಿ ಗೆ ಕ್ಯಾಂಟೀನ್ ಗಳು ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಅವ ಧಿ ಮುಗಿಯುತ್ತಾ ಬಂದಿದೆ. ಆದರೆ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ. ಸಿದ್ಧವಾಗಿ ನಿಂತಿರುವ ಕಟ್ಟಡವೂ ಉದ್ಘಾಟನೆಗೊಳ್ಳುತ್ತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಇನ್ನಾದರೂ ಕಾಳಜಿ ವಹಿಸಿ ಕ್ಯಾಂಟೀನ್ಗಳನ್ನು ಆರಂಭ ಮಾಡಬೇಕಿದೆ.
ಜಿಲ್ಲೆಗೆ ಐದು ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿವೆ. ಈ ಪೈಕಿ ಕೊಪ್ಪಳ ಹಾಗೂ ಯಲಬುರ್ಗಾದಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ. ಜನರಿಗೆ ಊಟ, ಉಪಹಾರ ದೊರೆಯುತ್ತಿದೆ. ಕುಷ್ಟಗಿಯಲ್ಲಿ ಒಂದು ಹಾಗೂಗಂಗಾವತಿಯಲ್ಲಿ ಎರಡು ಕ್ಯಾಂಟೀನ್ ಆರಂಭಮಾಡಬೇಕಿದೆ. ಎರಡು ಕಡೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ಗಂಗಾವತಿಯಲ್ಲಿ ಒಂದುಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದ್ದು ಉದ್ಘಾಟನೆ ವೊಂದೇ ಬಾಕಿ ಇದೆ. – ಗಂಗಪ್ಪ, ಕೊಪ್ಪಳ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ