ಜಾನಪದ ಸಂಸ್ಕೃತಿ ಉಳಿವಿಗೆ ಕೈಜೋಡಿಸಿ: ರಮೇಶ್
Team Udayavani, Apr 2, 2021, 11:44 AM IST
ವಿಜಯಪುರ: ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಜಾನಪದ ಕಲೆ ಬಗ್ಗೆ ಅಧ್ಯಯನ ಮಾಡುವ ಮೂಲಕ ಅನೇಕರುಕಟ್ಟಿಕೊಟ್ಟಿರುವ ಜಾನಪದ ಸಂಸ್ಕೃತಿಉಳಿವಿಗೆ ಶ್ರಮಿಸಿ, ಕೈಜೋಡಿಸಬೇಕು ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿ.ಎನ್.ರಮೇಶ್ ತಿಳಿಸಿದರು.
ಪಟ್ಟಣದ ಜ್ಞಾನಗಂಗಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಪನಹಳ್ಳಿ ಪರಿರ್ವತನಾ ಟ್ರಸ್ಟ್ನಿಂದ ನಡೆದ 2021ನೇ ಜಾನಪದ ಉತ್ಸವದಲ್ಲಿಡೋಲು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯಾವುದೇ ಸುಶಿಕ್ಷಿತಭಾಷೆಗೆ ಜೋತು ಬೀಳದೆ ತಮ್ಮದೇಶೈಲಿಯಲ್ಲಿ ಹಾಡು ಕಟ್ಟಿ ಹಾಡಿ ಇಂದಿನಪೀಳಿಗೆವರೆಗೂ ಉಳಿಸಿ ಹೋಗಿದ್ದಾರೆ. ಇಂದಿನ ನಾಗರಿಕರ ಅಕ್ಷರ ಜಗತ್ತಿನಲ್ಲಿಯೂ ಜಾನಪದ ಹಾಡುಗಳು ಅವುಗಳ ಶ್ರೇಷ್ಠತೆ ಉಳಿಸಿಕೊಂಡಿವೆ ಎಂದರು.
ಕಲೆಗೆ ಸಾವಿಲ್ಲ: ಜ್ಞಾನಗಂಗಾ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, ಜಾನ ಪದ ಕಲೆಗೆ ಸಾವಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತಿವೆ. ಇದರಿಂದಾಗಿ ಅಧ್ಯಯನಕಾರರಿಗೆ ಮೂಲ ಕಲೆಗಳ ಮಾಹಿತಿ ಕೊರತೆಯಿಂದ ಸಂಶೋಧನೆಗೆ ತೊಡಕಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಾನಪದ ಕಲೆ ಉಳಿಸುವ ಯೋಜನೆ ರೂಪಿಸಬೇಕೆಂದರು.
ಕಲಾವಿದರಿಗೆ ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ತಾರತಮ್ಯ ಮಾಡದೆಜಾನಪದ ಕಲಾವಿದರಿಗೂ ಅಗತ್ಯ ಮನ್ನಣೆನೀಡಬೇಕು. ಯುವ ಜನರಲ್ಲಿ ನಮ್ಮಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಭಿಮಾನ ಮೂಡಿಸಲು ಜಾನಪದ ಗೀತೆಗಳ ಗಾಯನ ಸಹಕಾರಿ ಎಂದರು.
ಇದೇ ವೇಳೆ ವೀರಗಾಸೆ, ತಮಟೆ, ಕೋಲಾಟ, ನಾದಸ್ವರ, ಸುಗಮ ಸಂಗೀತ,ಜಾನಪದ ಗೀತೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಪ್ರಸನ್ನ ಕುಮಾರ್, ಬಲಿಜ ಜನಾಂಗದ ಅಧ್ಯಕ್ಷ ಮಹತ್ಯಾಂಜನೇಯ, ಎಂ.ವಿ.ನಾಯ್ಡು, ಶಿಕ್ಷಕ ವೃಂದ, ಕಲಾವಿದರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ