ಜಿಯೋ-ಏರ್ಟೆಲ್ 1,500 ಕೋಟಿ ರೂ. ವ್ಯಾವಹಾರಿಕ ಒಪ್ಪಂದ
ತರಂಗಾಂತರಗಳ ಬಳಕೆಯ ನಿರ್ವಹಣೆ ವೆಚ್ಚವನ್ನು ಕೂಡ ಜಿಯೋ ಕಂಪೆನಿಯೇ ವಹಿಸಿಕೊಳ್ಳಲಿದೆ.
Team Udayavani, Apr 8, 2021, 12:38 PM IST
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಕ್ಷೇತ್ರದ ಪ್ರತಿಸ್ಪರ್ಧಿಗಳಾದ ರಿಲಯನ್ಸ್ ಜಿಯೋ ಹಾಗೂ ಏರ್ಟೆಲ್, ತಮ್ಮ ಮುಂದಿನ
ವ್ಯವಹಾರಕ್ಕಾಗಿ ಪರಸ್ಪರ ಕೈ ಜೋಡಿಸಿವೆ.
ಇತ್ತೀಚೆಗೆ ಕೇಂದ್ರ ಸರಕಾರ ನಡೆಸಿದ್ದ ತರಂಗ ಗುಚ್ಛ ಹರಾಜು ಪ್ರಕ್ರಿಯೆಯಲ್ಲಿ ತಾವು ಕೊಂಡಿರುವ ತರಂಗಗಳಲ್ಲಿ ಸುಮಾರು 1,500 ಕೋಟಿ ರೂ. ಮೊತ್ತದ ತರಂಗಗಳನ್ನು ಹಂಚಿಕೊಳ್ಳುವ ಬಗ್ಗೆ ಎರಡೂ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ.
ಒಪ್ಪಂದದ ಪ್ರಕಾರ, ಆಂಧ್ರಪ್ರದೇಶ, ದಿಲ್ಲಿ ಹಾಗೂ ಮುಂಬಯಿಯ ದೂರಸಂಪರ್ಕ ವ್ಯಾಪ್ತಿಯಲ್ಲಿ ಏರ್ ಟೆಲ್ ಕಂಪೆನಿಯ 800 ಮೆಗಾಹರ್ಟ್ಸ್ ಬ್ಯಾಂಡ್ ಅನ್ನು
ಜಿಯೋ ಬಳಸಿಕೊಳ್ಳಲಿದೆ.
ಇದರಲ್ಲಿ 1,038 ಕೋಟಿ ರೂ. ಹಣವನ್ನು ಜಿಯೋ ಕಂಪೆನಿ, ಏರ್ಟೆಲ್ಗೆ ನೇರವಾಗಿ ವರ್ಗಾಯಿಸಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ತರಂಗಾಂತರಗಳ ಬಳಕೆಯ ನಿರ್ವಹಣೆ ವೆಚ್ಚವನ್ನು ಕೂಡ ಜಿಯೋ ಕಂಪೆನಿಯೇ ವಹಿಸಿಕೊಳ್ಳಲಿದೆ. ಹಾಗಾಗಿ ಒಟ್ಟಾರೆ 1,497 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ದಿವಾಳಿ ಆದೇಶ: ಓಯೋ ಮೇಲ್ಮನವಿ?
ಹೊಸದಿಲ್ಲಿ: ಹೊಟೇಲ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಓಯೋ ಸಂಸ್ಥೆಯ ಅಂಗ ಸಂಸ್ಥೆ ಓಯೋ ಹೊಟೇಲ್ಸ್ ಆ್ಯಂಡ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ರಾಷ್ಟ್ರೀಯ ಕಂಪೆನಿ ಕಾನೂನುಗಳ ನ್ಯಾಯಮಂಡಳಿ (ಎನ್ಸಿಎಲ್ಟಿ), ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಆದೇಶ ಹೊರಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಓಯೋ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ. ಮಾ.30 ರಂದು ಎನ್ಸಿಎಲ್ಟಿಯಿಂದ ಈ ಆದೇಶ ಹೊರಬಿದ್ದಿದ್ದು, ಆದೇಶದ ಬಗ್ಗೆ ತಕರಾರು ಅರ್ಜಿಗಳನ್ನು ಸಲ್ಲಿಸಲು ಓಯೋಗೆ 15ರ ವರೆಗೆ ಗಡುವು ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ