“ನೀರು ಸಂಗ್ರಹಣ ಘಟಕ’ಕ್ಕೆ ತೋಟಗಾರಿಕೆ ಇಲಾಖೆ ನೆರವು


Team Udayavani, Apr 9, 2021, 2:40 AM IST

“ನೀರು ಸಂಗ್ರಹಣ ಘಟಕ’ಕ್ಕೆ ತೋಟಗಾರಿಕೆ ಇಲಾಖೆ ನೆರವು

ಬಂಟ್ವಾಳ: ನಮ್ಮಲ್ಲಿ ಕೊಳವೆಬಾವಿ ಇದೆ, ಬೇರೆ ಯಾವುದೇ ರೀತಿಯ ನೀರಿನ ವ್ಯವಸ್ಥೆ ನಮಗೆ ಬೇಕಿಲ್ಲ ಎಂದು ಕರಾವಳಿ ಭಾಗದಲ್ಲಿ ಕೊಳವೆಬಾವಿ ಮೂಲಕ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯು ಮಳೆಯ ನೀರನ್ನು ಸಂಗ್ರಹಿಸಿ “ನೀರು ಸಂಗ್ರಹಣ ಘಟಕ'(ಕೆರೆಯ ಮಾದರಿ)ಗಳ ಮೂಲಕ ತೋಟಕ್ಕೆ ನೀರು ಒದಗಿಸುವ ವ್ಯವಸ್ಥೆಗೆ ನೆರವಾಗುತ್ತಿದೆ.

ನೀರಿನ ಸಂಗ್ರಹದ ಸಾಮರ್ಥ್ಯಕ್ಕನುಗು ಣವಾಗಿ ನೆರವನ್ನು ನೀಡಲಾಗುತ್ತಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

(ಆರ್‌ಕೆವಿವೈ)ಯಡಿ ರೈತರಿಗೆ ಇಂತಹ ಘಟಕಗಳ ನಿರ್ಮಾಣಕ್ಕಾಗಿ ಸಬ್ಸಿಡಿ ಸಿಗುತ್ತಿದೆ. ಆದರೆ ನಮ್ಮ ಭಾಗದಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ ಎಂಬುದು ಕೆಲವರ ಆಲೋಚನೆಯಾಗಿದ್ದರೆ, ಇನ್ನಷ್ಟು ರೈತರು ಪ್ರಯೋಜನ ಪಡೆದಿದ್ದಾರೆ.

ಕೃಷಿ ಇಲಾಖೆಯ ಕೃಷಿ ಹೊಂಡಗಳಲ್ಲಿ ನೀರು ಭೂಮಿಗೆ ಇಂಗಿದರೆ, ಇಲ್ಲಿ ನೀರನ್ನು ಮರು ಬಳಕೆಗೆ ಪ್ರೇರಣೆ ನೀಡುತ್ತದೆ. ನೆಲ ಮಟ್ಟಕ್ಕಿಂತ ಕೆಳ ಭಾಗದಲ್ಲಿ ಕೆರೆಯ ರೀತಿಯಲ್ಲಿ ಘಟಕ ನಿರ್ಮಾಣವಾಗಲಿದ್ದು, ತಳ ಭಾಗಕ್ಕೆ ನೀರು ಇಂಗದಂತೆ ಪ್ಲಾಸ್ಟಿಕ್‌ ಶೀಟನ್ನು ಬಳಕೆ ಮಾಡಬೇಕಾಗುತ್ತದೆ. ಜತೆಗೆ ನೆಲ ಭಾಗಕ್ಕಿಂತ ಮೇಲಾ^ಗದಲ್ಲಿ ಸ್ಟೀಲ್‌ ಕವರ್‌ ಮೂಲಕ ಟ್ಯಾಂಕ್‌ ನಿರ್ಮಾಣಕ್ಕೂ ಇಲಾಖೆಯಲ್ಲಿ ಅವಕಾಶವಿದೆ.

ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ನೀರು ಸಂಗ್ರಹಣ ಘಟಕಗಳು ನಿರ್ಮಾಣಗೊಂಡಿದ್ದು, ನರಿಂಗಾನ ಭಾಗದಲ್ಲಿ ಬೃಹತ್‌ ಘಟಕವನ್ನೂ ನಿರ್ಮಿಸಲಾಗಿದೆ. ಈಗಲೂ ರೈತರಿಂದ ಘಟಕಗಳಿಗೆ ಬೇಡಿಕೆ ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

1,200 ಘನ ಮೀ. ಘಟಕ ನಿರ್ಮಾಣ :

ಸಣ್ಣ ಮಟ್ಟದ್ದಾದರೆ ಗರಿಷ್ಠ 1,200 ಘನ ಮೀಟರ್‌ ಘಟಕ ನಿರ್ಮಾ ಣಕ್ಕೆ ಅವಕಾಶವಿರುತ್ತದೆ. 10 ಮೀ. x 10 ಮೀ.x 3 ಮೀ. ಅಂದರೆ 300 ಘನ ಮೀ.ನಿಂದ 20 ಮೀ. x 20 ಮೀ.x3 ಮೀ. ಅಂದರೆ 1,200 ಘನ ಮೀ. ಘಟಕ ನಿರ್ಮಾಣಕ್ಕೆ ಅವಕಾಶವಿದ್ದು, ಪ್ರತಿ ಘನ ಮೀಟರ್‌ಗೆ 62.50 ರೂ. ಸಹಾಯಧನ ತೋಟಗಾರಿಕಾ ಇಲಾಖೆಯಿಂದ ಲಭ್ಯವಾಗಲಿದೆ. ಗರಿಷ್ಠ ಎಂದರೆ ರೈತರು 72 ಸಾವಿರ ರೂ.ಗಳಷ್ಟು ಸಹಾಯಧನ ಸರಕಾರದಿಂದ ಪಡೆಯಬಹುದಾಗಿದೆ.

ನೀರಿನ ಮರು ಬಳಕೆಗೆ ಪ್ರೇರಣೆ :

ಬೃಹತ್‌ ಪ್ರಮಾಣದಲ್ಲಿ ಸಂಗ್ರಹಣ ಘಟಕ ಮಾಡು ವುದಾದರೆ 4, 6, 8 ಸಾವಿರ ಘನ ಮೀ.ಗಳ ಟ್ಯಾಂಕ್‌ಗೆ ಅವಕಾಶವಿದೆ. 37 ಮೀ. x 37 ಮೀ. 10 x 3 ಮೀ. ಸೇರಿ   4,000 ಘನ ಮೀ. ಘಟಕ ನಿರ್ಮಾಣಕ್ಕೆ ಸುಮಾರು 6 ಲಕ್ಷ ರೂ. ವೆಚ್ಚ ತಗಲಿದರೆ, ಶೇ. 50ರಂತೆ ಗರಿಷ್ಠ 3 ಲಕ್ಷ ರೂ. ಸಹಾಯಧನ ಪಡೆಯಬಹುದು. ಇನ್ನು 45 ಮೀ.x45 ಮೀ.x3 ಮೀ. ಸೇರಿ 6 ಸಾವಿರ ಘನ ಮೀ. ಘಟಕಕ್ಕೆ ಘಟಕ ವೆಚ್ಚ 8 ಲಕ್ಷ ರೂ. ಆದರೆ ಶೇ. 50ರಂತೆ ಗರಿಷ್ಠ 4 ಲಕ್ಷ ರೂ. ಸಹಾಯಧನ ಪಡೆಯಬಹುದು. 52 ಮೀ.x52 ಮೀ.x3 ಮೀ. ಸೇರಿ 8 ಸಾವಿರ ಘನ ಮೀ. ಘಟಕಕ್ಕೆ 10 ಲಕ್ಷ ರೂ. ವೆಚ್ಚವಾದರೆ ಶೇ. 50ರಂತೆ ಗರಿಷ್ಠ 5 ಲಕ್ಷ ರೂ. ಸಹಾಯಧನ ಪಡೆಯಬಹುದಾಗಿದೆ. ಇಲ್ಲಿ ಪ್ರತೀ ಹಂತದ ಘಟಕ ನಿರ್ಮಾಣಕ್ಕೆ ಕ್ರಮವಾಗಿ 1, 2, 4 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕ ಬೆಳೆ ಹೊಂದಿರಬೇಕು.

ಟಾಪ್ ನ್ಯೂಸ್

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.