ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಈಶ್ವರಪ್ಪ
Team Udayavani, Apr 20, 2021, 12:06 PM IST
ಶಿವಮೊಗ್ಗ : ವಿರೋಧ ಪಕ್ಷ ಇರೋದೇ ಟೀಕೆ ಮಾಡೋಕೆ ಅವರ ಕೆಲಸಾನೇ ಅದು. ವಿರೋಧ ಪಕ್ಷ ಅಡಳಿತ ಪಕ್ಷ ಒಳ್ಳೆಯ ಕೆಲಸ ಮಾಡಿದೇ ಎಂದು ಅಭಿನಂದಿಸಲು ಸಾಧ್ಯವೇ .?? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ನಗರದಲ್ಲಿ ಮಾತಾನಾಡಿದ ಅವರು, ವಿರೋಧ ಪಕ್ಷದ ಟೀಕೆಗಳನ್ನುಗುಣಾತ್ಮಕವಾಗಿ ಸ್ವಾಗತಿಸುತ್ತೇವೆ. ಟೀಕೆ ಸರಿ ಇದ್ದರೇ ತಿದ್ದಿಕೊಳ್ಳುತ್ತೇವೆ. ವಿರೋಧ ಪಕ್ಷದವರು ಎಲ್ಲದಕ್ಕೂ ಟೀಕೆ ಮಾಡುವುದೇ ಅವರ ಕೆಲಸ ಅಂಥ ಅಂದುಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅವರ ಸಲಹೆ- ಸೂಚನೆಗಳನ್ನು ಸ್ವೀಕರಿಸುತ್ತೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ತಲೆಕೆಟ್ಟಿದೆ. ವಿರೋಧ ಪಕ್ಷ ನಾಯಕನಾಗಿ ನಾನು ಜೀವಂತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಟೀಕೆ ಮಾಡುತ್ತಿದ್ದಾರೆ.ಸಿಎಂ ಆಸ್ಪತ್ರೆಯಲ್ಲಿದ್ದರೂ ಕೆಲಸ ಮಾಡುತ್ತಿರುವುದು ಈಡೀ ರಾಜ್ಯಕ್ಕೆ ಗೊತ್ತಿದೆ. ಸಿಎಂ ಜೊತೆಗೆ ಸರ್ಕಾರವನ್ನು ಟೀಕೆ ಮಾಡುವ ಇವರು ಕೂಡ ಸಿಎಂ ಅಗಿದ್ರಲ್ಲಾ ಅನ್ನೋದು ನನ್ನ ನೋವು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕೋವಿಡ್ ನಿಂದ ಸುರಕ್ಷತೆ ವಹಿಸಲು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳಿವು
ಹಿಂದೆ ಸಿಎಂ ಆಗಿದ್ದ ಹಲವರು ಕೋವಿಡ್ ನಿಯಂತ್ರಣಕ್ಕೆ ಸಲಹೆಗಳನ್ನು ಕೊಡುತ್ತಿದ್ದಾರೆ. ಆದರೆ ಇವರು ಆ ಘನತೆಯನ್ನೇ ಮರೆತಿದ್ದಾರೆ. ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗೋಕೆ, ವಿರೋಧ ಪಕ್ಷದ ನಾಯಕ ಆಗೋಕು ಆಯೋಗ್ಯ.ಇದೇ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೇ ಸೋಲಿಸಿ, ಸರ್ಕಾರ ಕೆಡವಿದರು. ಇದನ್ನೇಲ್ಲಾ ಮರೆತು ಈಗ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು