ತರೀಕೆರೆ ಬಳಿ ಬಿಯರ್ ಲಾರಿ ಅಪಘಾತ : ಬಾಟಲಿಗಾಗಿ ಮುಗಿಬಿದ್ದ ಜನ!
Team Udayavani, Apr 20, 2021, 2:51 PM IST
ಚಿಕ್ಕಮಗಳೂರು : ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಅಪಘಾತವಾದ ಘಟನೆಯು ಮಂಗಳವಾರ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ನಡೆದಿದೆ. ಈ ವೇಳೆ ಜನರು ಬಿಯರ್ ಗಾಗಿ ಮುಗಿಬಿದ್ದ ಪ್ರಸಂಗ ನಡೆದಿದೆ.
ಬೆಂಗಳೂರಿಂದ ಶಿವಮೊಗ್ಗಕ್ಕೆ ಕಿಂಗ್ ಫಿಶರ್ ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಅಪಘಾತವಾಗಿದೆ. ಈ ವೇಳೆ ಲೋ… ನಂಗ್ ಎಲ್ಡ್ ಎತ್ಕೊಡು ಎಂದು ಜನರು ಕೂಗಾಟ ಮಾಡಿದ್ದಾರೆ.
ಒಂದು ಲೋಡ್ ಬಿಯರ್ ಬಾಟಲಿ ಇದ್ದ ಲಾರಿಯು ಉರಿಳಿದೆ. ಒಬ್ಬೊಬ್ಬರ ಕೈಯಲ್ಲಿ ನಾಲ್ಕೈದು ಬಿಯರ್ ಬಾಟಲಿಗಳನ್ನು ಹಿಡಿದು ಓಡಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.