ಗಂಗಾವತಿ ಪೊಲೀಸರಿಗೆ ಬಟ್ಟೆ ಅಂಗಡಿಗಳದ್ದೇ ತಲೆ ಬಿಸಿ!
ಕೋವಿಡ್ ಕರ್ಪ್ಯೂ ಉಲ್ಲಂಘಿಸಿ ಬೆಳಗಿನ ಜಾವ ಭರ್ಜರಿ ವ್ಯಾಪಾರ
Team Udayavani, May 6, 2021, 12:08 PM IST
ಗಂಗಾವತಿ: ಹೆಚ್ಚು ಜನ ಸೇರಿದಂತೆ ಸರಕಾರ ಕೋವಿಡ್ ಕರ್ಪ್ಯೂ ಜಾರಿ ಮಾಡಿದ್ದು ಪ್ರಮುಖವಾಗಿ ಹೆಚ್ಚು ಜನ ಸೇರುವ ಬಟ್ಟೆ, ಚಿನ್ನದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.
ಆದರೆ ನಗರದ ಓಎಸ್ ಬಿ ರೋಡ್ ಹಾಗೂ ಮುಚಿಗೇರ್ ಓಣಿಯ ರಸ್ತೆಯುದ್ದಕ್ಕೂ ಇರುವ ಬಟ್ಟೆ ಅಂಗಡಿಯವರು ಪ್ರತಿನಿತ್ಯ ಬೆಳಗಿನ ಜಾವದಲ್ಲಿ ಅಂಗಡಿಗಳನ್ನು ತೆರೆದು ಹೆಚ್ಚು ಜನರ ಮಧ್ಯೆ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಇಡೀ ದಿನ ಕರ್ತವ್ಯ ಮುಗಿಸಿ ಪೊಲೀಸರು ಮನೆಗೆ ತೆರಳಿದ ಮೇಲೆ ಅಂಗಡಿ ಒಂದು ಶೆಟರ್ ತೆರೆದು ಮುಂಗಡವಾಗಿ ತಿಳಿಸಿದ ಗ್ರಾಹಕರಿಗೆ ಅಗತ್ಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮತ್ತೆ ಏರಿದ ಕೋವಿಡ್ ಸೋಂಕಿತರ ಸಂಖ್ಯೆ: ದೇಶದಲ್ಲಿ ಒಂದೇ ದಿನ 4.12 ಲಕ್ಷ ಹೊಸ ಸೋಂಕಿತರು!
ನಗರದ ಇನ್ನುಳಿದ ಕಡೆ ಇರುವ ಬಟ್ಟೆ ಅಂಗಡಿಯವರು ಕೋವಿಡ್ ಕರ್ಪ್ಯೂ ಆರಂಭದ ದಿನದಿಂದ ಅಂಗಡಿ ಬಂದ್ ಮಾಡಿ ತಾಲೂಕು ಆಡಳಿತ ಸಹಕಾರ ನೀಡುತ್ತಿದ್ದು, ಓಎಸ್ ಬಿ ರಸ್ತೆ ಹಾಗೂ ಮುಚಿಗೇರ್ ಗಲ್ಲಿ ಮೂಲಕ ಹೊಂದಿಕೊಂಡಿರುವ ಬಟ್ಟೆ ಅಂಗಡಿಗಳಿಗೆ ಮುಂದೆ ಹಿಂದೆ ಎರಡು ಕಡೆ ಶಟರ್ ಇದ್ದು ಹಿಂಭಾಗದಲ್ಲಿ ಶಟರ್ ತೆರೆದು ಮಾಡಿ ವ್ಯಾಪಾರ ಮಾಡುತ್ತಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸ್ಥಳೀಯರು ವಿಡಿಯೋ -ಪೊಟೋ ಹಾಕಿ ವಿಷಯ ತಿಳಿಸಿ ಎಚ್ಚರಿಸುತ್ತಿದ್ದಾರೆ. ಪೊಲೀಸರು ಅಂಗಡಿ ಬಳಿ ಪರಿಶೀಲಿಸಲು ತೆರಳಿದ ತಕ್ಷಣ ರಾಜಕೀಯ ನಾಯಕರಿಗೆ ಮೊಬೈಲ್ ಮೂಲಕ ತಿಳಿಸಿ ಪೊಲೀಸರ ಬಂದ್ ಮಾಡಿಸುವ ಕಾರ್ಯವನ್ನು ತಡೆಯಲು ಯತ್ನಿಸುತ್ತಿರುವ ಪ್ರಕರಣ ಕಂಡು ಬರುತ್ತಿವೆ.
ಕಾನೂನು ಕ್ರಮ: ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಓಎಸ್ ಬಿ ರಸ್ತೆಯಲ್ಲಿರುವ ಕೆಲ ಬಟ್ಟೆ ಅಂಗಡಿ ಮಾಲೀಕರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಪೊಲೀಸ್ ಇಲಾಖೆಯ ನೆರವಿನಿಂದ ಇದನ್ನು ತಡೆದು ಕೃತ್ಯವೆಸಗುವವರ ವಿರುದ್ದ ಕೇಸ್ ದಾಖಲಿಸಲಾಗುತ್ತದೆ ಎಂದು ಪೌರಾಯುಕ್ತ ಅರವಿಂದ ಜಮಖಂಡಿ ಉದಯವಾಣಿಗೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ