ದಾವಣಗೆರೆ ಜಿಲ್ಲೆಯಲ್ಲಿ 451 ಮಂದಿ ಗುಣಮುಖ, 581 ಹೊಸ ಪ್ರಕರಣ ಪತ್ತೆ
Team Udayavani, May 14, 2021, 8:08 PM IST
ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ದಾಖಲೆ ಪ್ರಮಾಣದಲ್ಲಿ ಕೊರೊನಾದಿಂದ 451 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 267, ಹರಿಹರದಲ್ಲಿ 67, ಜಗಳೂರಿನಲ್ಲಿ 16, ಚನ್ನಗಿರಿ ಯಲ್ಲಿ 45, ಹೊನ್ನಾಳಿಯಲ್ಲಿ 32 ಹಾಗೂ ಹೊರ ಜಿಲ್ಲೆಯ 24 ಜನ ಒಳಗೊಂಡಂತೆ 451 ಸೋಂಕಿತರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 581 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 311, ಹರಿಹರದಲ್ಲಿ 98, ಜಗಳೂರಿನಲ್ಲಿ 27, ಚನ್ನಗಿರಿಯಲ್ಲಿ 53, ಹೊನ್ನಾಳಿಯಲ್ಲಿ 62 ಹಾಗೂ ಹೊರ ಜಿಲ್ಲೆಯ 30 ಜನರು ಒಳಗೊಂಡಂತೆ 581 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 17971, ಹರಿಹರದಲ್ಲಿ 4459, ಜಗಳೂರಿನಲ್ಲಿ 1565, ಚನ್ನಗಿರಿಯಲ್ಲಿ 3065, ಹೊನ್ನಾಳಿಯಲ್ಲಿ 6579, ಹೊರ ಜಿಲ್ಲೆಯ 951 ಜನರು ಸೇರಿದಂತೆ ಈವರೆಗೆ ಒಟ್ಟು 31,554 ಜನರು ಸೋಂಕಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ :ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ, ಇಬ್ಬರು ಸಾವು, ಮೂವರು ಗಂಭೀರ
ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 16,054, ಹರಿಹರದಲ್ಲಿ 4029, ಜಗಳೂರಿನಲ್ಲಿ 1392, ಚನ್ನಗಿರಿಯಲ್ಲಿ 2723, ಹೊನ್ನಾಳಿಯಲ್ಲಿ 3154, ಹೊರ ಜಿಲ್ಲೆಯ 790 ಜನರು ಸೇರಿದಂತೆ 28, 132 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 2984 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಓರ್ವ ಮೃತಪಟ್ಟಿದ್ದಾರೆ. ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನ 53 ವರ್ಷದ ವ್ಯಕ್ತಿ ಮೃತಪಟ್ಟವರು. ಈವರೆಗೆ ಕೊರೊನಾದಿಂದ 309 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 241 ಸೋಂಕಿತರು ಸಾಮಾನ್ಯ, 683 ಸೋಂಕಿತರು ಆಕ್ಸಿಜನ್, 36 ಸೋಂಕಿತರು ಎಚ್ಎಫ್ಎನ್ಸಿ, 52ಸೋಂಕಿತರು ವೆಂಟಿಲೇಟರ್ ರಹಿತ, 32 ಸೋಂಕಿತರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1286 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 202 ಸೋಂಕಿತರು ಕೋವಿಡ್ ಕೇರ್ ಸೆಂಟರ್ನಲ್ಲಿ ಇದ್ದಾರೆ.