ಸಕಾಲದಲ್ಲಿ ಔಷಧ ಪಡೆದರೆ ಸೋಂಕು ಗುಣಮುಖ

ಸರ್ಕಾರ ಸಕಲ ವ್ಯವಸ್ಥೆ ಮಾಡಿದ್ದರೂ ಸೋಂಕು ಹೆಚ್ಚಳಕ್ಕೆ ಕಾರಣ ಬಿಚ್ಚಿಟ್ಟ ವೈದ್ಯರು­ಸಹಕರಿಸಲು ಮನವಿ

Team Udayavani, May 25, 2021, 9:47 PM IST

6544455

ಜೀಯು, ಹೊನ್ನಾವರ

ಹೊನ್ನಾವರ: ಕರ್ಣಪಟಲ ಹರಿಯುವಂತೆ ಪ್ರತಿ ಬಾರಿ ರಿಂಗ್‌ ಮಾಡಿದಾಗಲೂ ಫೋನ್‌ ಎಚ್ಚರಿಸುತ್ತಿದ್ದರೂ, ಮನೆಮನೆಗೆ ಆಶಾ ಕಾರ್ಯಕರ್ತೆಯರು ಹೋಗಿ ಹೇಳುತ್ತಿದ್ದರೂ, ಸರ್ಕಾರ ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಕೋವಿಡ್‌ನಿಂದ ಸೋಂಕಿತರು ಹೆಚ್ಚುತ್ತಲೇ ಇದ್ದು ಯಾಕೆ? ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದಕ್ಕೆ ಕೆಲವು ವೈದ್ಯರ ಅಭಿಪ್ರಾಯ ಹೀಗಿದೆ.

ಅತಿ ಹೆಚ್ಚು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಉಡುಪಿ ಟಿಎಂಎಪೈ ಆಸ್ಪತ್ರೆಯ ವೈದ್ಯ ಡಾ| ಶಶಿಕಿರಣ್‌ ಶೇ. 95ರಷ್ಟು ಜನರಿಗೆ ಕೋವಿಡ್‌ ಪ್ರಥಮ ಹಂತದಲ್ಲಿಯೇ ಗುಣವಾಗುತ್ತದೆ ಅನುತ್ತಾರೆ. ಕೋವಿಡ್‌ ಹರಡಿ ಆಯಿತು, ಈಗ ಆಸ್ಪತ್ರೆಗೆ ಬರಲು ವಿಳಂಬ ಮಾಡಿ, ಬಂದ ಮೇಲೂ ರಾತ್ರಿ ಆಕ್ಸಿಜನ್‌ ಸಂಪರ್ಕವನ್ನು ಕಿತ್ತುಹಾಕುವಂತಹ ರೋಗಿಗಳಿಂದಾಗಿ ಸಮಸ್ಯೆ ಉಂಟಾಗುತ್ತದೆ. ನಾವು ಜೀವ ಉಳಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಇದು ಜನರಿಗೆ ಅರ್ಥವಾಗಬೇಕು ಎನ್ನುತ್ತಾರೆ ಹೊನ್ನಾವರ ತಾಲೂಕಾಸ್ಪತ್ರೆಯ ಮೆಡಿಸಿನ್‌ ವಿಭಾಗದ ಡಾ| ಪ್ರಕಾಶ ನಾಯ್ಕ.

ಸಕಾಲದಲ್ಲಿ ಬಂದರೆ ಜೀವ ಉಳಿಯುತ್ತದೆ, ಅಕಾಲದಲ್ಲಿ ಬಂದರೆ ಎಲ್ಲರಿಗೂ ಕಷ್ಟ, ನಾವು ನಮ್ಮ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ, ಆದರೆ ಜನರ ನಿಷ್ಕಾಳಜಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದು ಶಿರಸಿ ಪಂಡಿತ ಆಸ್ಪತ್ರೆಯ ಡಾ| ಗಜಾನನ ಭಟ್‌ ವಿಷಾದಿಸುತ್ತಾರೆ.

ತಾಲೂಕು ವೈದ್ಯಾಧಿಕಾರಿಯಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಆಶಾ ಕಾರ್ಯಕರ್ತೆಯವರೆಗೆ ಕೋವಿಡ್‌ ಗುರುತಿಸಿ, ತಕ್ಷಣ ಅಗತ್ಯ ಚಿಕಿತ್ಸೆ ನೀಡುವ ವ್ಯವಸ್ಥೆ ಹಳ್ಳಿಹಳ್ಳಿಗಳಲ್ಲಿ ಕಲ್ಪಿಸಲಾಗಿದೆ. ಪ್ರತಿಯಾಗಿ ಜನರ ಸ್ಪಂದನೆಯಿಲ್ಲ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲ್ಲವೂ ವ್ಯರ್ಥ ಅನಿಸುತ್ತದೆ ಎಂದು ಟಿಎಚ್‌ಓ ಉಷಾ ಹಾಸ್ಯಗಾರ ಬೇಸರಿಸುತ್ತಾರೆ.

ಪ್ರತಿ ತಾಲೂಕಿನಲ್ಲೂ ನಾಲ್ಕೈದು ಆಂಬ್ಯುಲೆನ್‌ Õಗಳಿವೆ. ಕೋವಿಡ್‌ ಸೋಂಕಿತರನ್ನು ಗುರುತಿಸಲು ಮನೆಮನೆಗೆ ಆಶಾ ಕಾರ್ಯಕರ್ತೆಯರು ಓಡಾಡುತ್ತಾರೆ. ಕೋವಿಡ್‌ನ‌ ಆರಂಭದಲ್ಲಿ ನೆಗಡಿ, ಜ್ವರ, ಬೇ ಧಿ, ಇಂಥ ಸಾಮಾನ್ಯ ಲಕ್ಷಣಗಳು ಕಂಡಾಗ ಆಶಾ ಕಾರ್ಯಕರ್ತೆಯರು ಕೊಡುವ ಔಷಧವನ್ನೇ ನಾಲ್ಕು ದಿನ ಸೇವಿಸಿದರೆ ಶೇ. 95ರಷ್ಟು ಕೋವಿಡ್‌ ಪೀಡಿತರು ಗುಣವಾಗುತ್ತಾರೆ. ಇತರ ಕಾಯಿಲೆ ಸಮಸ್ಯೆಯಿದ್ದರೆ, ವಯಸ್ಸಾಗಿದ್ದರೆ ಆಸ್ಪತ್ರೆಗೆ ಬರಬೇಕಾಗುತ್ತದೆ.

ಪ್ರಾಥಮಿಕ ಹಂತದ ಔಷಧ ನಾಲ್ಕು ದಿನ ಸೇವಿಸಿಯೂ ಗುಣವಾಗದೆ ಆಸ್ಪತ್ರೆಗೆ ಬಂದರೆ ಆಕ್ಸಿಜನ್‌ ಇಲ್ಲದೆಯೂ ಗುಣಪಡಿಸಬಹುದು. ಅಗತ್ಯಬಿದ್ದರೆ ಆಕ್ಸಿಜನ್‌ ಮಾತ್ರವಲ್ಲ ಮೌಖೀಕವಾಗಿ ಕೊಡುವ ವೆಂಟಿಲೇಟರ್‌ ಬಳಸುತ್ತೇವೆ. ಈ ಹಂತದಲ್ಲಿ ರೋಗಿ ಖಂಡಿತ ಗುಣವಾಗುತ್ತಾನೆ. ಇಷ್ಟು ಸರಳವಾದಂತಹ ಸಂಗತಿಗಳನ್ನು ಎರಡು ವರ್ಷವಾದರೂ ತಿಳಿದುಕೊಳ್ಳದ ಜನ ತಮಗೆ ಕಂಡಂತೆ ಔಷಧ ಸೇವಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರ, ತಲೆಗೊಂದು ಮಾತು ಹೇಳುವವರ ಸಲಹೆ ಪಡೆದು ನಾಲ್ಕು ಹೆಜ್ಜೆ ನಡೆಯಲಾರದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಾರೆ ಎನ್ನುತ್ತಾರೆ ಡಾ| ಪ್ರಕಾಶ ನಾಯ್ಕ.

ತಿಳಿದು ತಿಳಿದು ಎರಡು ವರ್ಷಗಳಿಂದ ವಿದ್ಯಾವಂತ ಜನ ತಪ್ಪು ಮಾಡುತ್ತಲೇ ಬಂದಿದ್ದಾರೆ. ಆಂಬ್ಯುಲೆನ್ಸ್‌ ಮನೆಗೆ ಹೋಗಿ ಕರೆದುತಂದು ಗುಣಮಾಡಿ ಮನೆಗೆ ಮುಟ್ಟಿಸುತ್ತದೆ. ಮನೆಯಲ್ಲಿ ಉಳಿಯುವುದು ಬೇಡ ಅನ್ನಿಸಿದರೆ ಸರ್ಕಾರಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಕರೆದರೂ ಬರುವುದಿಲ್ಲ. ಪೊಲೀಸರು, ತಾಲೂಕಾಡಳಿತ, ಎಲ್ಲರೂ ಜಂಟಿಯಾಗಿ ಪ್ರಯತ್ನ ನಡೆಸಿದರೂ ಜನ ಬರುತ್ತಿಲ್ಲ. ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗದೇ ಹೋಗಿದೆ. ಹಾಸಿಗೆಗಳಿಗೆ ಕೊರತೆಯಿಲ್ಲ, ಔಷಧಕ್ಕೆ, ಊಟ, ತಿಂಡಿಗೆ ಹಣ ಕೊಡಬೇಕಾಗಿಲ್ಲ. ಸುಲಭದಲ್ಲಿ ಪರಿಹಾರವಾಗುವ ಸಮಸ್ಯೆಯನ್ನು ಕ್ಲಿಷ್ಟವನ್ನಾಗಿಸಿ ಮೈಮೇಲೆ ಎಳೆದುಕೊಳ್ಳುತ್ತಿರುವ ಜಿಲ್ಲೆಯ ಜನರ ಮನೋಭಾವಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.