ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯಿಂದ 10 ಮಂದಿ ರಕ್ಷಣೆ
Team Udayavani, May 27, 2021, 6:46 PM IST
ಪಣಂಬೂರು : ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ತಾಂತ್ರಿಕ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ನೋಂದಣಿ ಹೊಂದಿದ್ದ ಲಾರ್ಡ್ ಆಫ್ ಓಷಿಯನ್ ಮೀನುಗಾರಿಕಾ ದೋಣಿಯಿಂದ 10 ಮಂದಿ ಮೀನುಗಾರರನ್ನು ಕರ್ನಾಟಕ ಕೋಸ್ಟ್ಗಾರ್ಡ್ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ.
7 ಮಂದಿ ತ.ನಾ ಹಾಗೂ ೩ ಮಂದಿ ಕೇರಳದ ಮೀನುಗಾರರಾಗಿದ್ದಾರೆ.ಸ್ಟೀಫನ್ (45), ನೆಪೋಲಿಯನ್ ( 60) ಪ್ರಭು (38), ಸಾಜಿ (41), ರಾಜಿ (38), ಸಾಗರಾಜಿ (50) ಜಾರ್ಜ್ ಬುಷ್(50), ಕ್ರಿಸ್ಪಿನ್( 38), ಸಜನ್ (26), ಡೊನಿಯೊ( 38)ರಕ್ಷಿತ ಮೀನುಗಾರರಾಗಿದ್ದಾರೆ.
ಮಂಗಳೂರು ಬಂದರಿನಿಂದ 20 ನಾ.ಮೈ (37 ಕಿ.ಮೀ)ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ ದೋಣಿಯ ಎಂಜಿನಿ ವೈಫಲ್ಯಕ್ಕೀಡಾಯಿತು. ಮೀನುಗಾರರು ಕಳಿಸಿದ ಅಪಾಯದ ಸಂದೇಶವನ್ನು ಪಡೆದ ಕೋಸ್ಟ್ಗಾರ್ಡ್ನ ರಾಜ್ದೂತ್ ಕಣ್ಗಾವಲು ಹಡಗು ಎನ್ಎಂಪಿಟಿಯಿಂದ ಕಾರ್ಯಾಚರಣೆ ನಡೆಸಿತಲ್ಲದೆ ದೋಣಿ ಸಹಿತ ೧೦ ಮಂದಿಯನ್ನು ಹಳೆ ಬಂದರಿಗೆ ತಲುಪಿಸಿತು.ಕಳೆದ ತೌಖ್ತೆ ಚಂಡಮಾರುತದ ಸಂದರ್ಭ ಈ ದೋಣಿ ಪೋರ್ಬಂದರಿನಲ್ಲಿ ಲಂಗರು ಹಾಕಿತ್ತು.
ಬಳಿಕ ಮತ್ತೆ ಮೀನುಗಾರಿಕೆಗೆ ತೆರಳಿತ್ತು. ಸ್ಥಳೀಯ ಆಲ್ ಬದ್ರಿಯಾ ಮೀನುಗಾರಿಕಾ ದೋಣಿ ಕೆಟ್ಟು ಹೋದ ದೋಣಿಯನ್ನು ಎಳೆದು ತರುವಲ್ಲಿ ನೆರವು ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
MUST WATCH
ಹೊಸ ಸೇರ್ಪಡೆ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು