ಕೋವಿಡ್ ಸಂಕಷ್ಟದಲ್ಲಿ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಯುವ ಬಳಗದಿಂದ ಅನ್ನಸಂತರ್ಪಣೆ
Team Udayavani, May 28, 2021, 4:36 PM IST
ಗಂಗಾವತಿ: ಅನ್ನಂ ಪರಬ್ರಹ್ಮಂ ಎನ್ನುವಂತೆ ಎಲ್ಲರೂ ದುಡಿಯುವುದು ಅನ್ನಕ್ಕಾಗಿಯೇ. ಕೋವಿಡ್ ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಹಳಷ್ಟು ಮಂದಿ ಊಟಕ್ಕಾಗಿ ಪರದಾಟ ಪಡುತ್ತಿದ್ದಾರೆ. ವಡ್ಡರಹಟ್ಟಿ ಕ್ಯಾಂಪಿನ 4ನೇ ವಾರ್ಡಿನ ಮುಸ್ಲಿಂ ಸಮುದಾಯದ ಯುವಕರ ಬಳಗದಿಂದ ನಿರಂತರ ನಾಲ್ಕು ದಿನಗಳ ಕಾಲ ಲಾಕ್ಡೌನ್ ಸಂತ್ರಸ್ತರಿಗೆ ಅನ್ನಸಂತರ್ಪಣೆ ಮಾಡಿ ಹಸಿವು ಅನ್ನಕ್ಕೆ ಯಾವ ಬೇಧಭಾವವಿಲ್ಲ ಎಂದು ಸಾಬೀತು ಮಾಡಿದ್ದಾರೆ.
ಲಾಕ್ಡೌನ್ ಘೋಷಣೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಸಮುದಾಯದ ಯುವಕರ ಬಳಗ ನಿರಂತರ ಅನ್ನಸಂತರ್ಪಣೆ ಸೇವೆ ಸಲ್ಲಿಸುತ್ತಿದೆ. ಫಲಾವ್, ವೆಜ್ ಬಿರಿಯಾನಿ, ಎಗ್ ಬಿರಿಯಾನಿ, ಪುಳಿಯೊಗರೆ ಹೀಗೆ ದಿನಾಲೂ ಒಂದೊಂದು ರೀತಿಯ ಆಹಾರವನ್ನು ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಸಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿತ್ಯ ವಿತರಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಯುವಕರು, ಬಡವ- ಶ್ರೀಮಂತ ಎನ್ನುವ ಬೇಧಭಾವವಿಲ್ಲದೇ ಎಲ್ಲಾ ವರ್ಗದ ಜನ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ಆಸ್ಪತ್ರೆ ಇನ್ನಿತರ ತುರ್ತು ಕಾರ್ಯಗಳಿಗೆ ಆಗಮಿಸಿದ ಜನರಿಗೆ ದುಡ್ಡು ಕೊಟ್ಟರೂ ಆಹಾರ ಸಿಗುತ್ತಿಲ್ಲ. ಲಾರಿ ಚಾಲಕರು ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಸಾಕಷ್ಟು ಜನ ಹಸಿವಿನಿಂದ ಬಳಲುವಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗೆಳೆಯರ ಬಳಗ ಐದು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲು ನಿಶ್ಚಯಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ;ಪಾಕಿಸ್ತಾನ ಸೇನೆಯ ನರಮೇಧ ಬಹಿರಂಗ : ಹಿಂದೂ ಸಂಸ್ಥೆಗೆ ಪಾಕ್ ಬೆದರಿಕೆ ..!
ನಾಲ್ಕನೇ ವಾರ್ಡಿನ ಹಿರಿಯರು ಮತ್ತು ಮಹಿಳೆಯರು ಆಹಾರ ತಯಾರಿಕೆಗೆ ಸಹಕಾರ ನೀಡಿ ಯುವಕರ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ವಾರ್ಡಿನ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್