ಜನರ ಸೇವೆಗೆ ನಿಂತ ಕಲಾಲ ಸಹೋದರರು: ಪ್ರತಿಮನೆಗೂ ಕಿಟ್ ವಿತರಣೆ
Team Udayavani, May 29, 2021, 12:38 PM IST
ಗಂಗಾವತಿ: ಜನಿಸಿದ ಊರು ಸ್ವರ್ಗಕ್ಕೆ ಸಮ ಎಂದು ಹೇಳಲಾಗುತ್ತದೆ. ತಾಲೂಕಿನ ಮಲ್ಲಾಪೂರದಲ್ಲಿ ಜನಿಸಿದ ನಾಲ್ವರು ಕಲಾಲ ಸಹೋದರರು ಇಡೀ ಊರಿಗೆ ಆಹಾರದ ಕಿಟ್ ವಿತರಿಸಿ ಸಾರ್ಥಕ ಸೇವೆ ಮಾಡಿದ್ದಾರೆ.
ಮಲ್ಲಾಪೂರ ಗ್ರಾಮದ ಮೂಲ ನಿವಾಸಿಗಳಾದ ಮಂಜುನಾಥ ಕಲಾಲ, ಸಿದ್ದೋಜಿರಾವ್ ಕಲಾಲ, ಮಲ್ಲಿಕಾರ್ಜುನ ಕಲಾಲ, ಪರಶುರಾಮ ಕಲಾಲ ಸಹೋದರರು ತೀವ್ರ ಬಡತನದಿಂದ ದುಡಿಯಲು ಹೊಸಪೇಟೆಯ ಜಿಂದಾಲ್ ತೋರಣಗಲ್ಲು ಗ್ರಾಮಕ್ಕೆ ತೆರಳಿ ಅಲ್ಲಿ ಉದ್ಯಮ ನಡೆಸಿದ್ದಾರೆ. ಆದರೂ ಜನಿಸಿದ ಊರನ್ನು ಕಲಾಲ ಸಹೋದರರು ಎಂದಿಗೂ ಮರೆತಿಲ್ಲ. ಪ್ರತಿವರ್ಷ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಪ್ರೌಢಶಾಲೆಗೆ ಡಿಜಿಟಲ್ ಬೋರ್ಡ್ ಕಂಪ್ಯೂಟರ್ ವಿತರಣೆ ಮಾಡಿದ್ದಾರೆ. ಇದೀಗ ಲಾಕ್ ಡೌನ್ ಸಂಕಷ್ಟದಲ್ಲಿ ಮಲ್ಲಾಪೂರ-ರಾಂಪೂರ ಗ್ರಾಮದ ಪ್ರತಿ ಮನೆಗೂ ಅಕ್ಕಿ ಬೇಳೆ ಸೇರಿ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಶ್ಲಾಘನೀಯ ಕಾರ್ಯ: ಕಲಾಲ ಸಹೋದರರು ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಮನೆಗೂ ರೇಶನ್ ಕಿಟ್ ವಿತರಿಸಿ ಮಾದರಿಯಾಗಿದ್ದಾರೆ. ಹುಟ್ಟಿದ ಊರನ್ನು ಎಂದಿಗೂ ಮರೆಯದ ಕಲಾಲ ಸಹೋದರರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಸಾರ್ವಜನಿಕರಿಗೆ ಆಹಾರದ ಕಿಟ್ ವಿತರಿಸಿ ಶ್ಲಾಘಿಸಿದರು.
ಇದನ್ನೂ ಓದಿ:ಕೋವಿಡ್ ನಿಂದ ಮರಣ ಹೊಂದಿದ ಆಶಾ, ಅಂಗನವಾಡಿ ಕಾರ್ಯಕರ್ತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಿ
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪಿಎಸ್ಐ ಜೆ.ದೊಡ್ಡಪ್ಪ, ಇಒ ಡಾ.ಮೋಹನ ಕುಮಾರ, ಎಚ್.ಸಿ.ಯಾದವ ವಕೀಲ, ಆನಂದಗೌಡ, ಅಂಜಿನಿಗೌಡ, ಸುಂಕಪ್ಪ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ