ಮತ್ತೊಮ್ಮೆ ರೈತರ ಬದುಕನ್ನು ಕಸಿದುಕೊಂಡ ಕೋವಿಡ್ : ತೋಟದಲ್ಲೇ ಕೊಳೆಯುತ್ತಿದೆ ತರಕಾರಿ ಬೆಳೆ
Team Udayavani, Jun 3, 2021, 6:07 PM IST
ಬನಹಟ್ಟಿ: ಕೊರೊನಾ ಲಾಕ್ಡೌನ್ ರೈತರ ಬದುಕನ್ನು ಮತ್ತೂಮ್ಮೆ ಕಸಿದುಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಬೆಳೆದು
ಹಾನಿ ಮಾಡಿಕೊಂಡ ರೈತರ ಸಂಕಷ್ಟ ಮಾತ್ರ ಹೇಳ ತೀರದು. ಅದರಲ್ಲೂ ಲಾಕ್ಡೌನ್ನಿಂದಾಗಿ ರೈತರು ಬೆಳೆದ ತರಕಾರಿಗಳು ತೋಟದಲ್ಲಿಯೇ ಕೊಳೆಯುವಂತಾಗಿದೆ.
ಬನಹಟ್ಟಿಯ ಕೆರೆಯ ರಸ್ತೆಯ ರೈತ ಮಲ್ಲಿಕಾರ್ಜುನ ಮಿರ್ಜಿ ತಮ್ಮ ತೋಟದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬದನೆ, ಸವತೆ, ಕೋಬೀಜ, ಟೊಮ್ಯಾಟೊ, ಮಣಸಿನಕಾಯಿ ಬೆಳೆದಿದ್ದರು. ಆದರೆ ಲಾಕ್ಡೌನ್ನಿಂದ ಮಾರುಕಟ್ಟೆ ಸಿಗದೇ ಬೆಳೆದ ಬೆಳೆ
ಗಿಡದಲ್ಲಿಯೇ ಕೊಳೆಯುವಂತಾಗಿದೆ.
“ಸರಿಯಾದ ಮಾರುಕಟ್ಟೆ ಇತ್ತು. ತರಕಾರಿ ಮಾರಾಟಕ್ಕೆ ಇನ್ನಷ್ಟು ಅನುಕೂಲತೆ ಕಲ್ಪಿಸಿದರೆ ಮೂರು ತಿಂಗಳ ಅವಧಿಯಲ್ಲಿ ಐವತ್ತು ಸಾವಿರ ರೂ.ದಷ್ಟು ಲಾಭ ಆಕ್ಕಿತ್ರಿ. ಆದರ ಈಗ ಖರ್ಚು ಮಾಡಿದ 40 ಸಾವಿರದಷ್ಟು ಹಣ ಕೂಡಾ ಬರದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜಿನಾಮೆ
ಬದನೆಕಾಯಿ, ಸವತೆಕಾಯಿ, ಕೋಬೀಜ್, ಟೊಮ್ಯಾಟೊ ತರಕಾರಿಗಳು ತೋಟದಲ್ಲಿ ಕೊಳೆತು ಹೋಗಿವೆ. ಬದನೆಕಾಯಿ ಬೆಳೆ
ಸಂಪೂರ್ಣವಾಗಿ ಕೊಳೆತಿದ್ದು, ಹಳದಿ ಬಣ್ಣಕ್ಕೆ ತಿರುಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಮಿರ್ಜಿ. ಬೆಳಗ್ಗೆ 6 ರಿಂದ 10ರವರೆಗೆ ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ತಳ್ಳುವ ಗಾಡಿಗಳ ಮೂಲಕ ಊರು ತುಂಬ
ತಿರುಗಾಡಿಲಿಕ್ಕೆ ಸಾಧ್ಯವಿಲ್ಲ. ಇನ್ನ ಹೆಣ್ಣು ಮಕ್ಕಳು ಸಂತೆಯಲ್ಲಿ ಕುಳಿತು ಮಾರಾಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.
ಬೇಗ ಮಾರಾಟ ಮಾಡಬೇಕು ಎಂದರೆ ಗ್ರಾಹಕರು ಇದೇ ಅವಕಾಶ ಎಂದು ತಿಳಿದುಕೊಂಡು ಅರ್ಧಕ್ಕಿಂತ ಕಡಿಮೆ ದರಕ್ಕೆ ತರಕಾರಿ ಕೇಳುತ್ತಿದ್ದಾರೆ ಎಂದರು. ಬೇಸಿಗೆಯ ಸಂದರ್ಭದಲ್ಲಿ ತರಕಾರಿ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿನ ಆದಾಯವಿರುತ್ತದೆ. ಆದರೆ
ಲಾಕ್ಡೌನ್ ಸಂಪೂರ್ಣವಾಗಿ ಬೇಸಿಗೆಯಲ್ಲಿ ಇದ್ದ ಪರಿಣಾಮವಾಗಿ ಬಹಳಷ್ಟು ಹಾನಿಯಾಗಿದೆ ಎನ್ನುತ್ತಾರೆ ತೋಟಗಾರಿಕಾ ರೈತರು.
ಮೂರ್ನಾಲ್ಕು ತಿಂಗಳುಗಳ ಕಾಲ ಗೊಬ್ಬರ ಹಾಕಿ, ನೀರು ಹಾಯಿಸಿ ಕಷ್ಟ ಪಟ್ಟು ಬೆಳೆದ ಕೈ ಬಾರದೆ ಹೋದರೆ ಕೆಟ್ಟ ಅನಸತೈತ್ರಿ. ಒಂದ ದಿವಸಕ್ಕ ಬೇರೆ ಬೇರೆ ತರಕಾರಿ ಮಾರಾಟ ಮಾಡಿ 4ರಿಂದ 5 ಸಾವಿರದಷ್ಟು ಆದಾಯ ಬರುತ್ತಿತ್ತು. ಆದರ ಈಗ ಎರಡ ಸಾವಿರದಷ್ಟು ವ್ಯಾಪಾರ ಮಾಡುವುದು ಸಾಧ್ಯ ಇಲ್ಲಿ ಎನ್ನುತ್ತಾರೆ ಜಗದಾಳ ಗ್ರಾಮದ ರೈತ ಮಹಿಳೆ ಸುವರ್ಣಾ ಬಂಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ