“ನೈಸರ್ಗಿಕ ವಿಪತ್ತಿನಿಂದ ಪ್ರಾಣಹಾನಿ ಆಗದಂತೆ ಕಾಳಜಿ ವಹಿಸಿ’
Team Udayavani, Jun 4, 2021, 9:58 PM IST
ನಾಗಪುರ: ಹವಾಮಾನ ಇಲಾಖೆಯ ಪ್ರಕಾರ ಮಾನ್ಸೂನ್ ಶೀಘ್ರದÇ ಬರುವ ನಿರೀಕ್ಷೆಯಿದ್ದು, ನೈಸರ್ಗಿಕ ವಿಪತ್ತುಗಳಿಂದ ನದಿ ಪಾತ್ರ ದಲ್ಲಿರುವ ಗ್ರಾಮಗಳಲ್ಲಿ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಸಂದರ್ಭ ಜೀವಹಾನಿ ಉಂಟಾಗದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿಭಾಗೀಯ ಆಯುಕ್ತ ಸಂಜೀವ್ ಕುಮಾರ್ ನಿರ್ದೇಶಿಸಿದ್ದಾರೆ.
ವಿಭಾಗೀಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಮಾನ್ಸೂನ್ ಪೂರ್ವ ಸಿದ್ಧತೆಗಳನ್ನು ಡಾ| ಸಂಜೀವ್ ಕುಮಾರ್ ಪರಿಶೀಲಿಸಿ, ಪ್ರವಾಹದ ನೀರನ್ನು ಬಿಡುಗಡೆ ಮಾಡುವಾಗ ಅಣೆಕಟ್ಟುಗಳ ಸುತ್ತಮುತ್ತಲಿನ ಹಳ್ಳಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲು ಸಜ್ಜಾಗಿರಬೇಕು. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯು ಕಳೆದ ವರ್ಷ ಪ್ರವಾಹ ಪೀಡಿತ ಎಲ್ಲ ಹಳ್ಳಿಗಳಲ್ಲಿ ಮಾತ್ರವಲ್ಲದೆ ಎಲ್ಲಾ ಒಸಿ ಪೀಡಿತ ಗ್ರಾಮಗಳಲ್ಲಿಯೂ ಮ್ಯಾಕ್ ಡ್ರಿಲ್ ನಡೆಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳು 24 ಗಂಟೆಗಳು ಕಾರ್ಯ ನಿರ್ವಹಿಸಬೇಕು. ನಿಯಂತ್ರಣ ಕೊಠಡಿಗೆ ಅಗತ್ಯ ಮಾಹಿತಿ ದೊರೆತರೆ ಅದಕ್ಕೆ ತತ್ಕ್ಷಣ ಸ್ಪಂದಿಸಬೇಕು. ಅಂತಾರಾಜ್ಯ ನದಿಗಳಿಗೆ ಸಂಬಂಧಿಸಿದ ಮಳೆ ಮತ್ತು ಪ್ರವಾಹ ಮಾಹಿತಿ ಒದಗಿಸುವುದು ಅತ್ಯಗತ್ಯವಾಗಿದ್ದು, ಪ್ರವಾಹ ಸಂದರ್ಭ ದಲ್ಲಿ ರಕ್ಷಣೆಗೆ ಅಗತ್ಯವಾಗಿರುವ ಎಲ್ಲ ಸಾಮಗ್ರಿಗಳು ಉತ್ತಮ ಸ್ಥಿತಿಯಲ್ಲಿವೆಯೇ ಎಂದು ಖಚಿತಪಡಿಸಿಕೊಂಡು ಅದಕ್ಕೆ ಸಂಬಂಧಿಸಿದ ವರದಿ ಸಲ್ಲಿಸಿ ಎಂದು ಹೇಳಿದರು.
ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೋವಿಡ್ -19ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸು ವಂತೆ ಕಾಳಜಿ ವಹಿಸಬೇಕು. ಬೆಳೆಗಳಿಗೆ ಹಾನಿಯಾಗಬೇಕಾದರೆ ಅಗತ್ಯ ಮುನ್ನೆಚ್ಚ ರಿಕೆಗಳನ್ನು ತೆಗೆದುಕೊಳ್ಳಬೇಕು. ನೈಸರ್ಗಿಕ ವಿಕೋಪದಲ್ಲಿ ಪ್ರಾಣಹಾನಿ ಸಂಭವಿಸಿದಲ್ಲಿ ಅಂತಹ ಕುಟುಂಬಗಳಿಗೆ ತತ್ಕ್ಷಣದ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ಯೋಜನೆ ಮಾಡಬೇಕು ಎಂದು ವಿಭಾಗೀಯ ಆಯುಕ್ತರು ಹೇಳಿದರು.
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ತತ್ಕ್ಷಣದ ಪ್ರತಿಕ್ರಿಯೆಗೆ ಸಂಬಂಧಿಸಿದ ಇಲಾಖೆಯಲ್ಲಿ ಸಮನ್ವಯ ಕಾಪಾಡಿ ಕೊಳ್ಳಬೇಕು. ಸಿಬಂದಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಬೇಕು. ಇದಕ್ಕಾಗಿ ಎಸ್ಡಿಆರ್ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು. ತುರ್ತು ಸಂದರ್ಭ ವಾಯುಪಡೆಯು ಪ್ರವಾಹ ಪೀಡಿತ ಕುಟುಂಬಗಳಿಗೆ ಆಹಾರ ಪಾರ್ಸೆಲ್ಗಳನ್ನು ವಿತರಿಸುವಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದ ವಿಭಾಗೀಯ ಆಯುಕ್ತರು, ತುರ್ತು ಸಂದರ್ಭ ಸೇನೆಯಿಂದ ನೆರವು ಪಡೆಯಲು ಆಡಳಿತದಿಂದ ಸಮನ್ವಯ ಹೊಂದಿರುವ ವ್ಯಕ್ತಿಯನ್ನು ನೇಮಿಸಲು ವಿವಿಧ ಇಲಾಖೆಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಭಾರತೀಯ ಸೇನಾ ಕರ್ನಲ್ ಬಡಿಯೆ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಲಕ್ಷ್ಮಣ್ ಕೆ. ರಾವ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಕಮಾಂಡರ್ ಪಂಕಜ್ ದಹಾನೆ, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಪವಾರ್, ಕಂದಾಯ ಉಪ ಆಯುಕ್ತ ಮಿಲಿಂದ್ ಸಾಲ್ವೆ, ಸಾಮಾನ್ಯ ಆಡಳಿತ ಉಪ ಆಯುಕ್ತ ಶ್ರೀಕಾಂತ್ ಫಡೆR ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು