ಪಾಲಿಕೆಯಿಂದ ಎಲ್ಪಿಜಿ ಗ್ಯಾಸ್ ಚಾಲಿತ ಚಿತಾಗಾರ
ಪರಿಸರ ಸ್ನೇಹಿ-ಮಿತವ್ಯಯಿ ಹೊಸಯಲ್ಲಾಪುರದಲ್ಲಿ ಪ್ರಾಯೋಗಿಕವಾಗಿ ಆರಂಭಕ್ಕೆ ಸಿದ್ಧತೆ
Team Udayavani, Jun 9, 2021, 6:14 PM IST
ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಕೋವಿಡ್ ಎಂಬ ಮಹಾಮಾರಿಯಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗ ತೊಡಗಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕಡಿಮೆ ವೆಚ್ಚದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್ಪಿಜಿ ಗ್ಯಾಸ್ ಚಾಲಿತ ನೂತನ ಚಿತಾಗಾರ ನಿರ್ಮಾಣಕ್ಕೆ ಮುಂದಾಗಿದೆ.
ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಕಟ್ಟಿಗೆ(ಸೌದೆ) ಆಧಾರಿತ ಚಿತಾಗಾರಗಳಿದ್ದು, ವಿದ್ಯುತ್ ಚಿತಾಗಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ ವಿದ್ಯುತ್ ಚಿತಾಗಾರಕ್ಕೆ ಹೆಚ್ಚು ವೆಚ್ಚ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಪಿಜಿ ಚಿತಾಗಾರವನ್ನು ಪ್ರಾಯೋಗಿಕವಾಗಿ ಆರಂಭಿಸಲು ಸಿದ್ಧತೆಗಳು ನಡೆದಿವೆ. ಸದ್ಯ ಪಂಜಾಬಿನ ಲೂಧಿಯಾನದಲ್ಲಿ ಈಗಾಗಲೇ ಎಲ್ಪಿಜಿ ಚಿತಾಗಾರ ಬಳಸಲಾಗುತ್ತಿದ್ದು, ಆಧುನಿಕ ವಿಧದ ಚಿತಾಗಾರದಲ್ಲಿ ಎರಡು ವಾಣಿಜ್ಯ (ಕಮರ್ಷಿಯಲ್) ಗ್ಯಾಸ್ ಸಿಲಿಂಡರ್ ಬಳಸಿ ಮೂರು ಶವಗಳ ಅಂತ್ಯಕ್ರಿಯೆ ನಡೆಸಬಹುದಾಗಿದೆ.
ವಿದ್ಯುತ್ ಚಿತಾಗಾರದಷ್ಟೇ ಸಮಯ ತೆಗೆದುಕೊಳ್ಳುವ ಎಲ್ಪಿಜಿ ಚಿತಾಗಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಗೆ ಹೊರ ಸೂಸಲಿದೆ. ಈಗ ಸದ್ಯ ರಾಜ್ಯದ ವಿವಿಧ ನಗರಗಳಲ್ಲಿ ಬಳಕೆಯಲ್ಲಿರುವ ವಿದ್ಯುತ್ ಚಿತಾಗಾರ ಹಾಗೂ ಇನ್ನುಳಿದ ಚಿತಾಗಾರಗಳ ದರ ಹೋಲಿಸಿದರೆ ಲೂಧಿಯಾನಾದ ಚಿತಾಗಾರದ ವೆಚ್ಚ ಅತ್ಯಂತ ಕಡಿಮೆ ಎನ್ನಬಹುದಾಗಿದೆ.
ವಿದ್ಯುತ್ ಚಿತಾಗಾರ ಕೇವಲ 4.40 ಲಕ್ಷ ರೂ. ಗಳಾಗಲಿದ್ದು, ಅದು ಕೂಡಾ ಸಾರಿಗೆ ಒಳಗೊಂಡಂತೆ ವೆಚ್ಚ ತಗುಲಲಿದೆ. ಈ ವ್ಯವಸ್ಥೆ ಜಾರಿಗೆ ಬಂದಿದ್ದೇ ಆದಲ್ಲಿ ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಎಲ್ಪಿಜಿ ಆಧಾರಿತ ಚಿತಾಗಾರ ನಿರ್ಮಾಣಕ್ಕೆ ಪಾಲಿಕೆ ಮುಂದಾಗಬಹುದು. ಇದರಿಂದ ಅವಳಿನಗರದಲ್ಲಿ ಅಂತ್ಯಕ್ರಿಯೆಗೆ ಬಳಸುವ ಸಹಸ್ರಾರು ಕ್ವಿಂಟಲ್ನಷ್ಟು ಕಟ್ಟಿಗೆಗಳನ್ನು ಉಳಿಸಬಹುದಾಗಿದೆ. ಇದರಿಂದ ಮರಗಳ ಕಡಿತ ನಿಲ್ಲಿಸಬಹುದು.
ಪೈಪಡ್ ಎಲ್ಪಿಜಿ ಸಂಪರ್ಕಕ್ಕೆ ಚಿಂತನೆ: ಮೂರು ಶವಗಳ ಅಂತ್ಯಕ್ರಿಯೆ ನಡೆಸಲು 2 ವಾಣಿಜ್ಯ ಬಳಕೆ ಸಿಲಿಂಡರ್ ಬೇಕಾಗುತ್ತದೆ. ಈಗಾಗಲೇ ಅವಳಿನಗರದಲ್ಲಿ ಮನೆಗಳಿಗೆ ಗ್ಯಾಸ್ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಚಿತಾಗಾರಕ್ಕೂ ಸಹ ಪೈಪಡ್ ಎಲ್ಪಿಜಿ ಸಂಪರ್ಕ ಪಡೆಯುವ ಕುರಿತು ಚಿಂತನೆ ನಡೆಸಿ ಈಗಾಗಲೇ ಒಂದು ಹಂತದ ಚರ್ಚೆ ಸಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದರ ಬಳಕೆಗೆ ಅನುಗುಣವಾಗಿ ಗ್ಯಾಸ್ ಪೈಪ್ ಸಂಪರ್ಕಕ್ಕೆ ಮುಂದಾಗಲಿದೆ.
ಸದ್ಯ ಅವಳಿನಗರದಲ್ಲಿರುವ ಮುಕ್ತಿಧಾಮ (ಸ್ಮಶಾನಗಳ)ದಲ್ಲಿ ಶವ ಸಂಸ್ಕಾರಕ್ಕೆ ಸುಮಾರು 3500 ರಿಂದ 4500 ರೂ.ಗಳವರೆಗೆ ವೆಚ್ಚವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಪಿಜಿ ಆಧಾರಿತ ಚಿತಾಗಾರ ಬಂದಲ್ಲಿ ಅದರ ವೆಚ್ಚವೂ ಸಹ ಕಡಿಮೆಯಾಗಬಹುದಾಗಿದೆ. ಸದ್ಯ ಪ್ರಾಯೋಗಿಕ ಹಂತವಾಗಿ ಧಾರವಾಡ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್ಪಿಜಿ ಆಧಾರಿತ ಚಿತಾಗಾರ ನಿರ್ಮಾಣವಾಗಲಿದ್ದು ಅದರ ಸಾಧಕ ಭಾದಕಗಳನ್ನು ನೋಡಿಕೊಂಡು ಇನ್ನುಳಿದ ಸ್ಮಶಾನಗಳಲ್ಲಿ ಚಿತಾಗಾರ ನಿರ್ಮಾಣಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !