ಬಡ ಕಲಾವಿದರಿಗೆ ಸಹಾಯಹಸ್ತ ಶ್ಲಾಘನೀಯ
ದಿ.ಗಿರೀಶ ಕಾರ್ನಾಡ ಸ್ಮರಣಾರ್ಥ ಸಮುದಾಯ ತಂಡದಿಂದ ಶ್ರಮಿಕರಿಗೆ-ಕಲಾವಿದರಿಗೆ ದಿನಸಿ ಕಿಟ್ ವಿತರಣೆ
Team Udayavani, Jun 11, 2021, 6:28 PM IST
ಧಾರವಾಡ: ನಗರದ ರಂಗಾಯಣ ಆವರಣದಲ್ಲಿ ಸಮುದಾಯ ತಂಡದಿಂದ ದಿ.ಗಿರೀಶ ಕಾರ್ನಾಡರ ಸ್ಮರಣಾರ್ಥ ಕೋವಿಡ್ನಿಂದ ಸಂಕಷ್ಟದಲ್ಲಿರುವ ಕಲಾವಿದರು, ಪೌರ ಕಾರ್ಮಿಕರು, ಶ್ರಮಿಕರಿಗೆ ಆಹಾರ ಧಾನ್ಯದ ದಿನಸಿ ಕಿಟ್ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಕವಿವಿ ಗಾಂಧಿ ಅಧ್ಯಯನ ಪೀಠದ ಮುಖ್ಯಸ್ಥ ಡಾ| ಶಿವಾನಂದ ಶೆಟ್ಟರ್, ಕೋವಿಡ್ 2ನೇ ಅಲೆ ಹೊಡೆತದಿಂದ ಕಾರ್ಯಕ್ರಮಗಳಿಲ್ಲದೆ ಸಾಂಸ್ಕೃತಿಕ ಸಂಘಟನೆಗಳು ಕಂಗೆಟ್ಟು ಹೋಗಿವೆ. ಸಮುದಾಯ ತಂಡವು ಇಂತಹ ಬಡ ಕಲಾವಿದರಿಗೆ, ಶ್ರಮಿಕ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿರುವುದು ಶ್ಲಾಘನೀಯ ಎಂದರು.
ಪ್ರಸಾದನ ಕಲಾವಿದ ಸಂತೋಷ ಗಜಾನನ ಮಹಾಲೆ ಮಾತನಾಡಿ, ಇಂದು ಕಲಾವಿದರಾಗಲಿ, ಶ್ರಮಿಕರಾಗಲಿ ತಮ್ಮ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯ ಕಲಾವಿದರನ್ನು, ಶ್ರಮಿಕ ಕಾರ್ಮಿಕರನ್ನು ಗುರುತಿಸಿ ದಿನಸಿ ಕಿಟ್ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಹಿರಿಯ ಕಲಾವಿದ ಅನಂತ ದೇಶಪಾಂಡೆ ಮಾತನಾಡಿ, ಇಂದು ನಮ್ಮ ಜೀವನ ಎಲ್ಲಿಯವರೆಗೆ ಮುಟ್ಟುತ್ತದೆ ಎಂದು ಹೇಳಲಾಗದು. ಈ ಕೊರೊನಾ ಮಹಾಮಾರಿಯಿಂದ ದಿನನಿತ್ಯದ ಚಟುವಟಿಕೆಗಳು ನಿಂತು ಬದುಕು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ನಮ್ಮಂತಹ ಕಲಾವಿದರನ್ನು ಕರೆದು ಕಿಟ್ ನೀಡಿರುವುದು ಆತ್ಮಸ್ಥೈರ್ಯ ಬಂದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮುದಾಯ ಅಧ್ಯಕ್ಷ ಬಿ.ಆಯ್. ಈಳಿಗೇರ ಮಾತನಾಡಿ, ಕೊರೊನಾ 2ನೇ ಅಲೆ ತೀವ್ರ ಪರಿಣಾಮ ಬೀರಿದೆ. ಎಲ್ಲಾ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರವೂ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಕಲಾವಿದರು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿಯ ಕಾರ್ಮಿಕರು ದುಡಿಮೆ ಇಲ್ಲದೆ ಪರದಾಡುವಂಥ ಸ್ಥಿತಿ ಬಂದೊದಗಿದೆ. ಈ ವೇಳೆ ಎಲ್ಲರೂ ಸುರಕ್ಷತಾ ಕ್ರಮ ಪಾಲಿಸಿ , ಕೊರೊನಾ ಮಹಾಮಾರಿ ಓಡಿಸೋಣ ಎಂದರು.
ಸಮುದಾಯದ ಕಾರ್ಯಕರ್ತರಾದ ವಿಲಾಸ ಶೇರಖಾನ, ಈರಣ್ಣ ಐನಾಪುರ, ಹಿರಿಯ ರಂಗಭೂಮಿ ಕಲಾವಿದ ಗೋಪಾಲ ಉಣಕಲ್ ಸೇರಿದಂತೆ ಹಲವರು ಇದ್ದರು. ಜೋಸೆಫ್ ಮಲ್ಲಾಡಿ ನಿರೂಪಿಸಿದರು. ಭೀಮಸೇನ ಕಾಗಿ ಪ್ರಾಸ್ತಾವಿಕ ಮಾತನಾಡಿದರು. ಭೀಮು ಕಠಾವಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ