18 ಗ್ರಾ.ಪಂ. 1 ವಾರ ಸೀಲ್ಡೌನ್ : ದ.ಕ. ಗ್ರಾಮೀಣ ಭಾಗದ ಸೋಂಕು ಇಳಿಕೆಗೆ ಜಿಲ್ಲಾಡಳಿತ ಕ್ರಮ
Team Udayavani, Jun 14, 2021, 7:10 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರದಲ್ಲಿ ಕೊರೊನಾ ಹೆಚ್ಚಿದ್ದು, ಸೋಂಕು ಸರಪಳಿ ತುಂಡರಿಸುವುದಕ್ಕಾಗಿ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ 18 ಗ್ರಾ.ಪಂ.ಗಳನ್ನು ಜೂ. 14ರಿಂದ 21ರ ತನಕ ಒಂದು ವಾರ ಸಂಪೂರ್ಣ ಸೀಲ್ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇದೇ ರೀತಿ ಗ್ರಾ.ಪಂ. ಲಾಕ್ಡೌನ್ ನಿಯಮ ಜಾರಿಗೆ ತಂದಿದ್ದು, ಸೋಂಕು ಪ್ರಕರಣ ಇಳಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ಮತ್ತು ಕಡಬ ತಾಲೂಕುಗಳ ತಲಾ 2, ಬೆಳ್ತಂಗಡಿ ತಾಲೂಕಿನ 8, ಸುಳ್ಯ ತಾಲೂಕಿನ 5 ಮತ್ತು ಬಂಟ್ವಾಳ ತಾಲೂಕಿನ 1 ಗ್ರಾ.ಪಂ. ಸೀಲ್ಡೌನ್ ಆಗಲಿವೆ.
ಎಲ್ಲೆಲ್ಲಿ ಸೀಲ್ಡೌನ್?
ಮಂಗಳೂರು ತಾಲೂಕಿನ ನೀರುಮಾರ್ಗ ಮತ್ತು ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾೖಲ, ಉಜಿರೆ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಟ್ನೂರು, ಕೊಲ್ಲ ಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು, ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು
Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ
Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ
Fraud Case; ಸಿಬಿಐ ಅಧಿಕಾರಿ ಹೆಸರಿನಲ್ಲಿ ಮೋಸ : ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್