ಈ ರಾಶಿಯ ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ!
Team Udayavani, Jun 14, 2021, 7:06 AM IST
14-06-2021
ಮೇಷ: ಅವಿವಾಹಿತರಿಗೆ ಅಚ್ಚರಿಯ ವಾರ್ತೆ ತೋರಿಬರುತ್ತದೆ. ಈ ವಾರ ಸಣ್ಣ ಗ್ರಹಗಳ ಪ್ರತಿಕೂಲತೆ ಪರಿಣಾಮ ನಿಮ್ಮ ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮ್ಮ ಕೈಗೆ ಹತ್ತದೇ ಬೇಸರವೆನಿಸುವುದು.
ವೃಷಭ: ಹಿಂದಿನ ಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯ. ಉದ್ಯೋಗಾಪೇಕ್ಷಿಗಳಿಗೆ ಆಕಸ್ಮಿಕ ಉದ್ಯೋಗ ಒದಗಿ ಬರಲಿದೆ. ವಾಹನ ಖರೀದಿ, ಗೃಹ ನಿರ್ಮಾಣ, ಭೂಮಿ ಖರೀದಿದಾರರಿಗೆ ಅಧಿಕ ಧನ ವ್ಯಯವಾದರೂ ಸಮಾಧಾನವಿದೆ.
ಮಿಥುನ: ಈ ವಾರ ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ತೋರುವುದು. ಸಾಂಸಾರಿಕವಾಗಿ ಸಮಾಧಾನವಿದ್ದರೂ ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳುಕಿರಿಕಿರಿಯನ್ನು ತಂದಾರು.
ಕರ್ಕ: ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ. ಕಾರಣ ತಕ್ಕಮಟ್ಟಿಗೆ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯಸಾಧಿಸಬೇಕು.
ಸಿಂಹ: ನಿರುದ್ಯೋಗಿಗಳು ಉದ್ಯೋಗ ಲಾಭದ ಅವಕಾಶಗಳನ್ನು ಸದುಪಯೋಗಿಸಬೇಕು. ಕೃಷಿಕರಿಗೆ ಮಳೆಯಿಂದ ತುಸು ನೆಮ್ಮದಿ. ಆಚಾರವಂತರಿಗೆ ದೂರದ ಕ್ಷೇತ್ರಗಳ ದರ್ಶನ ಭಾಗ್ಯ ದೊರೆತು ನೆಮ್ಮದಿ ತರುವುದು.
ಕನ್ಯಾ: ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಮುಂದಿನ ಅಭ್ಯಾಸಕ್ಕೆ ಪೂರಕವಾಗಲಿದೆ. ಶುಭಮಂಗಲ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಿವೆ. ಆರ್ಥಿಕ ಅಡಚಣೆ ಹಂತಹಂತವಾಗಿ ನಿವಾರಣೆಯಾಗಲಿದೆ.
ತುಲಾ: ಶುಭಮಂಗಲ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಿವೆ. ವ್ಯವಹಾರಿಕವಾಗಿ ಬ್ಯಾಂಕ್, ವಿತ್ತ ಖಾತೆಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಸಫಲತೆ ತೋರಿಬಂದು ಆರ್ಥಿಕ ಅಡಚಣೆಯು ನಿವಾರಣೆಯಾಗಲಿದೆ.
ವೃಶ್ಚಿಕ: ಪ್ರವಾಸಿ ಉದ್ಯಮ, ಸಾರಿಗೆ ಉದ್ಯೋಗ, ಎಲೆಕ್ಟ್ರಾನಿಕ್ ವೃತ್ತಿಯವರಿಗೆ ಮುಂಭಡ್ತಿಯ ಅವಕಾಶಗಳು ಒದಗಿಬಂದಾವು. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಿಯೇ ತೀರ್ಮಾನಗೊಳ್ಳಲಿದೆ.
ಧನು: ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮುನ್ನಡೆಗೆ ಸಂದೇಹ. ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲ. ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಆದಾಯಕ್ಕೆ ಕೊರತೆ ಕಾಣದು. ವಾರಾಂತ್ಯದಲ್ಲಿ ಪ್ರವಾಸ ಯೋಗವಿದೆ.
ಮಕರ: ಮನೆಯಲ್ಲಿ ಸದಸ್ಯರೊಡನೆ ವಾಗ್ವಾದಕ್ಕೆ ಕಾರಣರಾಗದಿರಿ. ಕಾರ್ಯದೊತ್ತಡದಿಂದ ಸಮಾಧಾನ ವಿರದು. ಪ್ರತಿಷ್ಠಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ.
ಕುಂಭ: ಪ್ರೇಮಿಗಳ ಪ್ರೇಮಪ್ರಕರಣ ವೈವಾಹಿಕ ಭಾಗ್ಯಕ್ಕೆ ನಾಂದಿ ಹಾಡಲಿದೆ. ಆದಾಯ ಹೇರಳ ವಾಗಿದ್ದರೂ ಖರ್ಚು-ವೆಚ್ಚಗಳಿಂದ ಅನುಭವಕ್ಕೆ ಬಾರದು. ನೂತನ ವಧು-ವರರಿಗೆ ಮಧುಚಂದ್ರದ ಭಾಗ್ಯ ಸಂತಸ ತಂದೀತು.
ಮೀನ: ಯಾವುದಕ್ಕೂ ದುಡುಕದೆ ನಿರ್ಧಾರಗಳನ್ನು ಕೈಗೊಳ್ಳಿರಿ. ಆರೋಗ್ಯ ಭಾಗ್ಯವನ್ನು ಗಮನಿಸುತ್ತಾ ಇರಬೇಕಾದೀತು. ವಾಹಾನಾದಿಗಳಿಂದ ಲಾಭವಿದ್ದರೂ ಹಣಕಾಸು ವಿಚಾರದಲ್ಲಿ ಮೋಸ, ವಂಚನೆಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್