Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ


Team Udayavani, Apr 17, 2024, 7:55 AM IST

5-ginger

ನೀವು ಪ್ರತೀದಿನ ಶುಂಠಿಯನ್ನು ಸೇವಿಸುವ ಆಲೋಚನೆಯನ್ನು ಹೊಂದಿರುವಿರಾ?

ಹಣ್ಣು ಹಂಪಲುಗಳು ಮತ್ತು ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಎಂಬುದು ನಮಗೆ ತಿಳಿದಿದೆ. ವಿವಿಧ ನೈಸರ್ಗಿಕ ಬಣ್ಣಗಳನ್ನು ಹೊಂದಿರುವ ಇಂತಹ ಹಣ್ಣು, ತರಕಾರಿ, ಸೊಪ್ಪು ತರಕಾರಿಗಳನ್ನು ದಿನದಲ್ಲಿ ಹಲವು ಬಾರಿ ಸೇವಿಸುವುದು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ನಮಗೆ ಗೊತ್ತಿದೆ. ಆದರೆ ಕೆಲವು ಮಸಾಲೆ ವಸ್ತುಗಳು ಕೂಡ ಆರೋಗ್ಯಕ್ಕೆ ಉಪಕಾರಿ ಎಂಬುದು ಎಷ್ಟು ಜನರಿಗೆ ತಿಳಿದಿದೆ?

ಉದಾಹರಣೆಗೆ ಶುಂಠಿಯನ್ನೇ ತೆಗೆದುಕೊಳ್ಳಿ. ಪ್ರತೀ ದಿನವೂ ನಾವು ಶುಂಠಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಅಪಾರ ಲಾಭಗಳಿವೆ. ನಮ್ಮ ದೇಹ ಮತ್ತು ಮೆದುಳಿಗೆ ಶಕ್ತಿಯುತ ಪ್ರಯೋಜನಗಳನ್ನು ಒದಗಿಸುವ ಅನೇಕ ಪೌಷ್ಟಿಕಾಂಶಗಳು ಶುಂಠಿಯಲ್ಲಿವೆ.

“ಸೂಪರ್‌ ಫ‌ುಡ್‌’ ಎಂದು ವರ್ಣಿಸಬಹುದಾದ ಅಪೂರ್ವ ಆಹಾರವಸ್ತುಗಳಲ್ಲಿ ಶುಂಠಿಯೂ ಒಂದು. ನಮ್ಮ ಆರೋಗ್ಯದ ವಿಚಾರದಲ್ಲಿ ಅನೇಕ ಪವಾಡಗಳನ್ನು ಉಂಟು ಮಾಡಬಹುದಾದ ಸೂಪರ್‌ಫ‌ುಡ್‌ ಇದು. ಶುಂಠಿಯು ತೀಕ್ಷ್ಣವಾದ ರುಚಿ ಮತ್ತು ಅನೇಕ ಔಷಧೀಯ ಮೌಲ್ಯಗಳನ್ನು ಹೊಂದಿರುವ ಸಂಬಾರವಸ್ತು. ಶತಮಾನಗಳ ಹಿಂದೆ ಎಲ್ಲ ಬಗೆಯ ಅನಾರೋಗ್ಯಗಳನ್ನು ಗುಣಪಡಿಸಲು ಶುಂಠಿಯನ್ನು ಉಪಯೋಗಿಸಲಾಗುತ್ತಿತ್ತು.

ಇದರ ಜತೆಗೆ ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು, ನಮ್ಮನ್ನು ನಾವು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು. ನೀವು ಪ್ರತೀ ದಿನ ಶುಂಠಿಯನ್ನು ಸೇವಿಸುವ ಆಲೋಚನೆಯನ್ನು ಹೊಂದಿದ್ದರೆ ಅದಕ್ಕೆ ನಮ್ಮ ಪ್ರೋತ್ಸಾಹವಿದೆ. ಪ್ರತೀದಿನ ಶುಂಠಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳಿವೆ.

ಗಮನಿಸಿ: ಪ್ರತೀದಿನ ಒಂದು ತುಂಡು ಶುಂಠಿಯನ್ನೇ ಸೇವಿಸಬೇಕೆಂದೇನಿಲ್ಲ. ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಅಥವಾ ಜಜ್ಜಿ ಜ್ಯೂಸ್‌, ಚಹಾ ಅಥವಾ ಇತರ ಖಾದ್ಯ ಪದಾರ್ಥಗಳ ಜತೆಗೆ ಸೇರಿಸಿ ಸೇವಿಸಬಹುದು. ಇಂತಹ ಶುಂಠಿ ನಮ್ಮ ದೇಹಕ್ಕೆ ಏನೇನು ಪ್ರಯೋಜನಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಗಮನಿಸೋಣ. ­

ಉರಿಯೂತ ನಿವಾರಕ (ಆ್ಯಂಟಿ ಇನ್‌ಫ್ಲಮೇಟರಿ): ಶುಂಠಿಯ ಪರಿಣಾಮದಿಂದಾಗಿ ದೇಹದ ಯಾವುದೇ ಭಾಗದಲ್ಲಿ ಉಂಟಾಗಿರುವ ಉರಿಯೂತವು ಕಡಿಮೆಯಾಗುತ್ತದೆ. ­

ವಾಕರಿಕೆ ಮಾಯವಾಗುತ್ತದೆ: ಕೆಲವೊಮ್ಮೆ ನಿಮಗೆ ಬೆಳಗ್ಗೆ ವಾಕರಿಕೆಯ ಅನುಭವ ಆಗುತ್ತಿದೆಯೇ? ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ಇದು ನಿವಾರಣೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಕಿಮೊಥೆರಪಿಗೆ ಒಳಗಾಗುತ್ತಿರುವವರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

 ಸ್ನಾಯು ನೋವು ಕಡಿಮೆಯಾಗುತ್ತದೆ: ನಿಮಗೆ ಸ್ನಾಯು ನೋವು ಅಥವಾ ಕಾಲುಗಳಲ್ಲಿ ನೋವು ಇದೆಯೇ? ಶುಂಠಿಯನ್ನು ಸೇವಿಸುವುದರಿಂದ ಇದು ಕಡಿಮೆಯಾಗಬಲ್ಲುದು. ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ಸ್ನಾಯು ನೋವು ಕ್ರಮೇಣ ಕಡಿಮೆಯಾಗುತ್ತದೆ. ­

ಮಲ ವಿಸರ್ಜನೆಗೆ ಸಹಾಯ ಮಾಡುತ್ತದೆ: ಪ್ರತೀ ದಿನ ಶುಂಠಿ ಸೇವನೆಯಿಂದ ಮಲ ವಿಸರ್ಜನೆಗೆ ಸಹಾಯವಾಗುತ್ತದೆ. ನೀವು ಆಗಾಗ ಮಲಬದ್ಧತೆಯನ್ನು ಅನುಭವಿಸುತ್ತಿರುವಿರಾ? ಹಾಗಾದರೆ ಶುಂಠಿಯಿಂದ ನಿಮಗೆ ಸಹಾಯವಾಗಬಹುದು. ­

ಅಜೀರ್ಣವನ್ನು ನಿವಾರಿಸುತ್ತದೆ: ನಿಮಗೆ ದೀರ್ಘ‌ಕಾಲೀನ ಅಜೀರ್ಣವಿದ್ದರೆ ಶುಂಠಿಯಿಂದ ನಿಮಗೆ ಉಪಶಮನ ಸಿಗಬಹುದಾಗಿದೆ. ಊಟ-ಉಪಾಹಾರಕ್ಕೆ ಮುನ್ನ ಶುಂಠಿಯನ್ನು ಸೇವಿಸಿದರೆ ಜೀರ್ಣಾಂಗ ಬೇಗನೆ ಖಾಲಿಯಾಗುತ್ತದೆ, ಇದರಿಂದ ಆಹಾರವು ಜೀರ್ಣಾಂಗದಲ್ಲಿ ಇರುವ ಸಮಯ ಕಡಿಮೆಯಾಗುವ ಮೂಲಕ ಸಮಸ್ಯೆ ನಿವಾರಣೆಯಾಗುತ್ತದೆ. ­

ಮುಟ್ಟಿನ ನೋವಿನಿಂದ ಉಪಶಮನ: ನಿಮ್ಮ ಮುಟ್ಟಿನ ಅವಧಿಯಲ್ಲಿ ನೋವು ತೊಂದರೆ ನೀಡುತ್ತದೆಯೇ? ಇದಕ್ಕೂ ಪ್ರತೀದಿನ ಶುಂಠಿ ಸೇವಿಸುವುದರಿಂದ ಪರಿಹಾರ ಸಿಗಬಲ್ಲುದು. ಶುಂಠಿಯು ನೋವನ್ನು ಕಡಿಮೆ ಮಾಡುವ ನೋವು ನಿವಾರಕ ಗುಣವನ್ನು ಹೊಂದಿದ್ದು, ಹೊಟ್ಟೆ ನೋವು ಕಡಿಮೆಯಾಗಬಲ್ಲುದು. ­

ಕೊಲೆಸ್ಟರಾಲ್‌ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಮಾಡುತ್ತದೆ: ಒಂದು ತಿಂಗಳು ಕಾಲ ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ‘ಕೆಟ್ಟ’ ಕೊಲೆಸ್ಟರಾಲ್‌ ಮತ್ತು ಟ್ರೈಗ್ಲಿಸರೈಡ್‌ ಗಳು ಕಡಿಮೆಯಾಗುತ್ತವೆ.

ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ: ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸುತ್ತದೆ. ನಿಮಗೆ ಶೀತ ಬಾಧೆ ಅಥವಾ ವೈರಾಣು ಸೋಂಕು ಉಂಟಾಗಿದೆಯೇ? ಬೇಗನೆ ಗುಣಹೊಂದಲು ನಿಮಗೆ ಶುಂಠಿ ಸಹಾಯ ಮಾಡಬಹುದಾಗಿದೆ.

ನಮ್ಮನ್ನು ಆರೋಗ್ಯಯುತವಾಗಿ ಇರಿಸುವ ಆಹಾರವಸ್ತುಗಳು ನಮಗೆ ಅಗತ್ಯ. ಇಂತಹ “ಸೂಪರ್‌ ಫ‌ುಡ್‌’ಗಳಲ್ಲಿ ಶುಂಠಿಯೂ ಒಂದು.

ಸುಷ್ಮಾ ಐತಾಳ,

ಪಥ್ಯಾಹಾರ ತಜ್ಞೆ,

ಕೆಎಂಸಿ ಆಸ್ಪತ್ರೆ, ಅತ್ತಾವರ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.