ಕೈಜೋಡಿಸಿ, ನಡುಬಾಗಿಸಿ ನಮಸ್ಕಾರ


Team Udayavani, Jun 16, 2021, 6:30 AM IST

ಕೈಜೋಡಿಸಿ, ನಡುಬಾಗಿಸಿ ನಮಸ್ಕಾರ

ರಸ್ತೆಯಲ್ಲಿ ನಡೆದು ಹೋಗುವಾಗ, ಕಚೇರಿಯಲ್ಲಿ, ಅಂಗಡಿಯ ಮುಂದೆ, ಸಂತೆಯಲ್ಲಿ ಹಲವು ಮಂದಿ ಹೊಸಬರು ನಮ್ಮ ಕಣ್ಣಿಗೆ ಬೀಳುತ್ತಾರೆ. ಕೆಲವರೊಂದಿಗೆ ಮಾತುಕತೆ, ವ್ಯವಹಾರ ನಡೆಯುತ್ತದೆ. ಇನ್ನು ಕೆಲವರು ಹೀಗೆ ಎದುರಾಗಿ ಹಾಗೆ ಹೋಗಿಬಿಡುತ್ತಾರೆ. ಇಂಥ ಸಂದರ್ಭ ಗಳಲ್ಲೆಲ್ಲ ತೀರ್ಮಾನಕ್ಕೆ ಬರುವುದು ನಮ್ಮ ಮೂಲಸ್ವಭಾವಗಳಲ್ಲಿ ಒಂದು. “ಈತ ಕೆಟ್ಟವನಿರಬಹುದು’, “ಈಕೆ ಎಷ್ಟು ಚೆಂದ’, “ಅವನ ಮುಖವೇ!’, “ಆಕೆ ಖಂಡಿತ ಗಂಡುಬೀರಿ’ ಎಂದು ನಮ್ಮಷ್ಟಕ್ಕೆ ನಾವೇ ನಿರ್ಧರಿಸಿ ಬಿಡು ತ್ತೇವೆ. ಇದು ನಮ್ಮಲ್ಲಿ ಎಷ್ಟು ರೂಢಿಯಾಗಿದೆ ಎಂದರೆ, ಅದು ನಮ್ಮ ಅರಿವು ಇಲ್ಲದೆಯೇ, ಅಪ್ರಜ್ಞಾಪೂರ್ವಕವಾಗಿ ಆಗಿಬಿಡುತ್ತದೆ. ಕ್ಷಣಾರ್ಧ ದಲ್ಲಿ ತೀರ್ಮಾನ, ನಿರ್ಧಾರ, ತೀರ್ಪು ಆಗಿಬಿಡುತ್ತದೆ.

ಇಂಥ ತೀರ್ಮಾನಗಳು ತಪ್ಪಾಗಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಈ ನಿರ್ಣಯಗಳನ್ನು ನಾವು ತೆಗೆದು ಕೊಳ್ಳುವುದು ನಮ್ಮ ಹಿಂದಿನ ಅನುಭವ ಗಳ ಆಧಾರದಲ್ಲಿ. ಉದಾಹರಣೆಗೆ, ಗಟ್ಟಿ ಧ್ವನಿಯಲ್ಲಿ ಮಾಡನಾಡುವ ವ್ಯಕ್ತಿ ಬಹಳ ಜೋರಿರಬಹುದು ಎನ್ನುವ ತೀರ್ಮಾನ. ಸಿನೆಮಾಗಳಲ್ಲಿ ನೋಡಿ, ಎಷ್ಟೋ ವರ್ಷ ಗಳ ಹಿಂದೆ ಯಾರೊ ಒಬ್ಬ ಜೋರಿನ ವ್ಯಕ್ತಿ ಗಟ್ಟಿ ಧ್ವನಿಯನ್ನು ಹೊಂದಿದ್ದುದು – ಇಂಥ ಅನುಭವಗಳ ಆಧಾರದಲ್ಲಿ ನಮ್ಮ ತೀರ್ಮಾನ ನಡೆಯುತ್ತದೆ. ಈ ಹಳೆಯದರ ಭಾರ ಈ ಕ್ಷಣದ ಆಧಾರ ದಲ್ಲಿ ಯಾವುದೇ ವಸ್ತು ಅಥವಾ ವ್ಯಕ್ತಿಯ ಜತೆಗೆ ವ್ಯವಹರಿಸಲು ನಮಗೆ ಬಿಡುವು ದಿಲ್ಲ. ಆದರೆ ನಿಜಕ್ಕೂ ವರ್ತಮಾನದಲ್ಲಿ ಆ ವ್ಯಕ್ತಿ ಅಥವಾ ವಸ್ತು ಹೇಗಿದ್ದಾರೆ/ ಹೇಗಿದೆ ಎನ್ನುವುದೇ ಬಹಳ ಮುಖ್ಯ.

ಹಾಗಾಗಿಯೇ ಹೊಸಬರನ್ನು ಕಂಡೊಡನೆ ತಲೆಬಾಗಿ ಎರಡೂ ಕೈ ಮುಗಿದು ನಮಸ್ಕರಿಸುವುದು. ನಾವು ತಲೆ ಬಾಗಿ ನಮಿಸಿದಾಗ ನಮ್ಮ ತೃಪ್ತಿ – ಅತೃಪ್ತಿಗಳು ಮೃದುವಾಗುತ್ತವೆ. ಏಕೆಂದರೆ ಎದುರಿಗಿರುವ ವ್ಯಕ್ತಿಯೂ ನಮ್ಮ ಹಾಗೆಯೇ ಸೃಷ್ಟಿಯ ಭಾಗವಾಗಿರುವುದನ್ನು ನಾವು ಮನಗಾಣುತ್ತೇವೆ.

ಈ ಜಗತ್ತಿನಲ್ಲಿ ಇರುವ ಪ್ರತಿಯೊಂದರಲ್ಲಿಯೂ ಸೃಷ್ಟಿಯ ಕೈವಾಡ ಇದೆ. ಸೃಷ್ಟಿಯ ಮೂಲ ಪ್ರತೀ ಅಣು-ಪರಮಾಣುಗಳಲ್ಲಿ ಇದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ನೆಲವನ್ನು ನೋಡುತ್ತ ತಲೆ ಬಗ್ಗಿಸಿ ನಮಿಸುವ ಸಂಪ್ರದಾಯ ಇದೆ. ಗಂಡಸು, ಹೆಂಗಸು, ಮಗು, ಗೋವು, ಮರ- ಎಲ್ಲದಕ್ಕೂ ನಾವು ತಲೆಬಾಗಿಸಿ ನಮಸ್ಕರಿ ಸುತ್ತೇವೆ. ಇದು ಸೃಷ್ಟಿಯ ಕೈವಾಡ ನಮ್ಮೊಳಗೂ ಇದೆ ಎಂಬುದನ್ನು ಸತತ ಜಾಗೃತಿಯಾಗಿ ಇರಿಸುವ ಕ್ರಿಯೆ. ನಾವು ಇದನ್ನು ಅರಿತುಕೊಂಡರೆ ಪ್ರತೀ ಬಾರಿ ನಮಿಸಿದಾಗಲೂ ಪರಮೋಚ್ಚ ಸೃಷ್ಟಿಯ ಕಡೆಗೆ ನಮ್ಮ ಗೌರವ ಎಂಬುದು ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರುತ್ತದೆ.

ನಮ್ಮ ಹಸ್ತಗಳಲ್ಲಿ ಲಕ್ಷಾಂತರ ನರಾಗ್ರಗಳಿವೆ. ನಮ್ಮ ನಾಲಗೆ ಮತ್ತು ಧ್ವನಿ ಮಾತನಾಡುವುದಕ್ಕಿಂತ ಹೆಚ್ಚಿನದನ್ನು ನಮ್ಮ ಹಸ್ತಗಳು ಹೇಳುತ್ತವೆ. ಯೋಗದಲ್ಲಿ ಮುದ್ರೆಗಳು ಹೇಳುವುದು ಕೂಡ ಇದನ್ನೇ. ನಮ್ಮ ಹಸ್ತಗಳನ್ನು ಜತೆ ಸೇರಿಸಿದೊಡನೆಯೇ ನಮ್ಮ ತೃಪ್ತಿ- ಅತೃಪ್ತಿಗಳು, ಇಬ್ಬಗೆಯ ವ್ಯಕ್ತಿತ್ವ, ಪರ- ವಿರೋಧಗಳು, ಬಯಕೆ- ತಿರಸ್ಕಾರಗಳು ತಟಸ್ಥವಾಗುತ್ತವೆ. ನಾವು ಏನು ಎನ್ನುವುದರ ಅಭಿವ್ಯಕ್ತಿ ಏಕತ್ರವಾಗುತ್ತದೆ. ನಮ್ಮೊಳಗಿನ ಎಲ್ಲ ಶಕ್ತಿ ಸಂಪನ್ಮೂಲಗಳು ಒಂದಾಗಿ ಸಕ್ರಿಯವಾಗುತ್ತವೆ.

ನಮಸ್ಕಾರ ಎನ್ನುವುದು ಸಂಪ್ರದಾಯದ ವಿಚಾರ ಮಾತ್ರ ಅಲ್ಲ. ನಾವು ಯಾವುದಾದರೊಂದು ಸಾಧನೆ ಮಾಡು ತ್ತಿರುವಾಗ, ಜಪ ತಪಗಳ ಸಂದರ್ಭ, ಧಾರ್ಮಿಕ ಕ್ರಿಯೆಗಳ ಸಂದರ್ಭದಲ್ಲಿ ಹಸ್ತ ಮತ್ತು ಬೆರಳುಗಳಿಂದ ವಿವಿಧ ಮುದ್ರೆಗಳನ್ನು ಮಾಡುತ್ತೇವೆ. ಅದರಿಂದ ಭಿನ್ನ ನಮೂನೆಯಲ್ಲಿ ಶಕ್ತಿ ಸಂಚಯನ ವಾಗುತ್ತದೆ. ವ್ಯಕ್ತಿಯೊಬ್ಬನನ್ನು ಕಂಡು ನಮಸ್ಕರಿಸುವುದರಿಂದ ಸಕಾರಾತ್ಮಕ ಶಕ್ತಿಯ ತರಂಗಗಳು ಆತ ನಮ್ಮೊಡನೆ ಚೆನ್ನಾಗಿರುವಂತೆ ಪ್ರೇರೇಪಿಸುತ್ತವೆ.
( ಸಾರ ಸಂಗ್ರಹ)

ಟಾಪ್ ನ್ಯೂಸ್

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.