ವರದಕ್ಷಿಣೆ ಕಿರುಕುಳದ ಸಂದೇಶ ಕಳುಹಿಸಿದ್ದ ಮಹಿಳೆ ಶವವಾಗಿ ಪತ್ತೆ!
Team Udayavani, Jun 24, 2021, 7:20 AM IST
ತಿರುವನಂತಪುರ: “ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ’ ಎಂದು ತಮ್ಮ ಹೆತ್ತವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ ಕೇರಳದ 24 ವರ್ಷದ ಮಹಿಳೆ, ಬುಧವಾರ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಇಡೀ ಕೇರಳವನ್ನು ಆಘಾತಕ್ಕೆ ತಳ್ಳಿದೆ.
ಆಯುರ್ವೇದ ವೈದ್ಯ ಪದ್ಧತಿ ವ್ಯಾಸಂಗ ಮಾಡುತ್ತಿದ್ದ ವಿಸ್ಮಯಾ ನಾಯರ್, ವರದಕ್ಷಿಣೆಗಾಗಿ ಪತಿ ಕಿರಣ್ಕುಮಾರ್ ನನ್ನನ್ನು ಪೀಡಿಸುತ್ತಿದ್ದಾರೆ ಎಂದು ತಮ್ಮ ದೇಹದ ಗಾಯಗಳ ಫೋಟೋ ಸಮೇತ ತಮ್ಮ ಹೆತ್ತವರಿಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸಿದ್ದರು.
ಬುಧವಾರ ಕೊಲ್ಲಂನ ಪತಿಯ ಮನೆಯ ಬಾತ್ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿಸ್ಮಯಾ ದೇಹ ಪತ್ತೆಯಾಗಿದೆ. ಕಳೆದ ವರ್ಷ ಜೂನ್ನಲ್ಲಿ ಇವರ ವಿವಾಹ ನೆರವೇರಿತ್ತು. ಆಗ 100 ಚಿನ್ನದ ನಾಣ್ಯ, ಒಂದು ಎಕರೆ ಜಮೀನು ಮತ್ತು 10 ಲಕ್ಷ ರೂ. ಮೌಲ್ಯದ ಕಾರನ್ನು ವರದಕ್ಷಿಣೆಯಾಗಿ ನೀಡಿದ್ದೆವು. ಆದರೂ ಇನ್ನಷ್ಟು ತರುವಂತೆ ಮಗಳಿಗೆ ಕಿರಣ್ ಪೀಡಿಸುತ್ತಿದ್ದ ಎಂದು ವಿಸ್ಮಯಾ ತಂದೆ ತ್ರಿವಿಕ್ರಮ್ ನಾಯರ್ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್, “ಬರ್ಬರ ಹಾಗೂ ಅಮಾನವೀಯ ವರದಕ್ಷಿಣೆ ಪಿಡುಗು ನಮ್ಮ ಹೆಣ್ಣುಮಕ್ಕಳನ್ನು ವ್ಯಾಪಾರದ ಸರಕಾಗಿಸಿದೆ. ದಯವಿಟ್ಟು ಅವರನ್ನು ಮನುಷ್ಯರಂತೆ ಕಾಣಿ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ