ಮಕ್ಕಳಿಗೆ ಸಾಂತ್ವನ ಹೇಳಿದ ಸಚಿವೆ ಜೊಲ್ಲೆ
Team Udayavani, Jun 24, 2021, 4:57 PM IST
ಬೆಳಗಾವಿ: ಖಾನಾಪುರ ತಾಲೂಕಿನ ಘೋಟಗಾಳಿ ಗ್ರಾಮದಲ್ಲಿ ಕೋವಿಡ್ದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೆಟ್ಟಿಯಾಗಿ ಸಾಂತ್ವನ ಹೇಳಿದರು.
ಕೂಲಿ ಕೆಲಸ ಮಾಡುತ್ತಿದ್ದ ಘೋಟಗಾಳಿ ಗ್ರಾಮದ ಸಂಜಯ ವೆಂಕಪ್ಪ ಕರಲೇಕರ ಹಾಗು ಅವರ ಪತ್ನಿ ಶೀತಲ್ ಇತ್ತೀಚೆಗೆ ಕೋವಿಡ್ದಿಂದ ಮೃತಪಟ್ಟಿದ್ದರು. ಇವರ ಸಾವಿನಿಂದ ಅನಾಥವಾಗಿರುವ ಅವರ ಮಕ್ಕಳಾದ ಸಂಜನಾ ಹಾಗೂ ಶುಭಂ ಅವರನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿ ಈ ಮಕ್ಕಳ ಪೋಷಣೆಗೆ ಮತ್ತು ಶಿಕ್ಷಣಕ್ಕೆ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ, ತಹಶೀಲ್ದಾರ ರೇಷ್ಮಾ ತಾಳಿಕೋಟಿ ಉಪಸ್ಥಿತರಿದ್ದರು.