ಕ್ವಾರಂಟೈನ್ ಮುಗಿಸಿದ ಶಿಖರ್ ಧವನ್ ಪಡೆ
Team Udayavani, Jun 26, 2021, 6:50 AM IST
ಮುಂಬಯಿ: ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಶಿಖರ್ ಧವನ್ ನೇತೃತ್ವದ ಭಾರತೀಯ ಕ್ರಿಕೆಟಿಗರ 14 ದಿನಗಳ ಹೊಟೇಲ್ ಕ್ವಾರಂಟೈನ್ ಮುಗಿದಿದೆ. ಆಟಗಾರರಿಗೆಲ್ಲ ದೊಡ್ಡ ರಿಲೀಫ್ ಸಿಕ್ಕಿದೆ. ಎಲ್ಲರೂ ಜಿಮ್ಗೆ ತೆರಳಿ ಕಠಿನ ವ್ಯಾಯಾಮ ನಡೆಸಿದರು.
ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಕೃಷ್ಣಪ್ಪ ಗೌತಮ್, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ನಿತೀಶ್ ರಾಣಾ ಮೊದಲಾದವರ ಚಿತ್ರ ಹಾಗೂ ಜಿಮ್ ಅಭ್ಯಾಸದ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಇವರೆಲ್ಲರೂ ಭಾರತ ತಂಡದ ಹೊಸ ಮುಖಗಳು.
“ನಾನು ಕೊಠಡಿಯಿಂದ ಹೊರಬರುವ ಮುನ್ನ ನನ್ನ ಮುಖವನ್ನು ಅನೇಕ ಸಲ ಕನ್ನಡಿಯಲ್ಲಿ ನೋಡಿಕೊಂಡೆ. ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ನನ್ನ ಪಾಲಿಗೊಂದು ವಿಶೇಷ ಅನುಭವ’ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಪೇಸರ್ ಚೇತನ್ ಸಕಾರಿಯಾ ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕನಸು ನನಸಾಗುವ ಕ್ಷಣ
ಋತುರಾಜ್ ಗಾಯಕ್ವಾಡ್ ಮತ್ತು ನಿತೀಶ್ ರಾಣಾ ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದು ಕನಸು ನನಸಾಗುವ ಕ್ಷಣ ಎಂಬುದು ಗಾಯಕ್ವಾಡ್ ಅನಿಸಿಕೆ. “ಮೊದಲ ಏಳು ದಿನ ಬಹಳ ಕಷ್ಟವಾಯಿತು. ಹೇಗೋ ಹೊಂದಿಕೊಂಡೆ. ತಂಡದ ಸದಸ್ಯರನ್ನು ನೋಡಲು, ಭಾರತದ ಜೆರ್ಸಿಯನ್ನು ಧರಿಸಲು ಕಾತರಗೊಂಡಿದ್ದೆ…’ ಎಂವರು ನಿತೀಶ್ ರಾಣಾ.
ಎಡಗೈ ಆರಂಭಕಾರ ಧವನ್ 6 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭುವನೇಶ್ವರ್ ಉಪನಾಯಕರಾಗಿದ್ದು, ದ್ರಾವಿಡ್ ಕೋಚ್ ಆಗಿದ್ದಾರೆ.
ಏಕದಿನ ಪಂದ್ಯಗಳನ್ನು ಜು. 13, 16 ಮತ್ತು 18ರಂದು; ಟಿ20 ಪಂದ್ಯಗಳನ್ನು ಜು. 21, 23 ಮತ್ತು 25ರಂದು ಆಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
Bengaluru rain: ಮಧ್ಯಾಹ್ನದ ವರುಣಾರ್ಭಟಕ್ಕೆ ನಗರ ಕೂಲ್
Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು