ಮಕ್ಕಳಿಗೆ ಕಣ್ಣಿನ ಸಮಸ್ಯೆ ಬರಬಹುದು, ಎಚ್ಚರ

ಮೊಬೈಲ್‌, ಲ್ಯಾಪ್‌ಟಾಪ್‌ ನೋಡೋದ್ರಿಂದ ಕಾಳಜಿ ಅಗತ್ಯ­ನಿಷ್ಕಾಳಜಿ ತೋರಿದರೆ ಭವಿಷ್ಯ ಅಂಧಕಾರ

Team Udayavani, Jul 3, 2021, 4:23 PM IST

1149405030hub-6a

ವರದಿ: ಅಮರೇಗೌಡ ಗೋನವಾರ

ಹುಬ್ಬಳ್ಳಿ: ಮೊಬೈಲ್‌ ಮುಟ್ಟಬೇಡ, ಹೆಚ್ಚು ಟಿವಿ ನೋಡಬೇಡ, ಕಂಪ್ಯೂಟರ್‌-ಲ್ಯಾಪ್‌ಟಾಪ್‌ ಮುಂದೆ ಕೂಡಬೇಡ ಎಂದು ಬುದ್ಧಿ ಹೇಳುತ್ತಿದ್ದ, ಬೈಯುತ್ತಿದ್ದ ಪಾಲಕರೇ ಇಂದು ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌, ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ಗ್ಳನ್ನು ಮಕ್ಕಳಿಗೆ ನೀಡಬೇಕಿದೆ. ಇದರಿಂದ ಅವರ ನೇತ್ರ ಆರೋಗ್ಯ ಮೇಲಾಗುವ ದುಷ್ಪರಿಣಾಮ ತಪ್ಪಿಸಲು ಸೂಕ್ತ ಕಾಳಜಿ-ಮುಂಜಾಗ್ರತೆ ಅತ್ಯವಶ್ಯ. ಹೀಗೆಂದವರು ಬೆಳಗಾವಿಯ ಆಯುಷ್‌ ಆಸ್ಪತ್ರೆಯ ಜೀವಕ ನೇತ್ರ ವಿಭಾಗದ ತಜ್ಞ ವೈದ್ಯ ಡಾ|ಚಂದ್ರಶೇಖರ ಸಿದ್ದಾಪುರ.

“ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು: ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟಿ.ವಿ.ಗಳ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವವರು, ದೊಡ್ಡವರಿರಲಿ, ಮಕ್ಕಳಿರಲಿ ನೇತ್ರ ರಕ್ಷಣೆ ಬಗ್ಗೆ ಕಾಳಜಿ ತೋರದಿದ್ದರೆ ಸಮಸ್ಯೆಗೆ ಒಳಗಾಗುವುದು ಖಂಡಿತ. ವಿಶೇಷವಾಗಿ ಮಕ್ಕಳು ಆನ್‌ಲೈನ್‌ ಶಿಕ್ಷಣ ಎಂದು ಕನಿಷ್ಠ ನಾಲ್ಕೈದು ತಾಸು ಮೊಬೈಲ್‌, ಟ್ಯಾಬ್‌, ಮೊಬೈಲ್‌ ಮುಂದೆ ಕುಳಿತುಕೊಳ್ಳುತ್ತಿರುವ ಕಾರಣ ನೇತ್ರದ ಸಮಸ್ಯೆ ಎದುರಿಸುವ ಸಂಭವ ಅಧಿಕವಾಗಿದೆ.

ಕಂಪ್ಯೂಟರ್‌ನಿಂದ ನೇತ್ರದ ಮೇಲಾಗುವ ದುಷ್ಪರಿಣಾಮಗಳನ್ನು ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಎಂದು ವೈದ್ಯಕೀಯ ಭಾಷೆಯಲ್ಲಿ ರಿಪಿಟೆಡ್‌ ಸ್ಟ್ರೆಸ್‌ ಇಂಬೂರಿ(ಆರ್‌ಎಸ್‌ಐ) ಎಂದು ಕರೆಯಲಾಗುತ್ತಿದೆ. ಇದೀಗ ಮೊಬೈಲ್‌, ಟ್ಯಾಬ್‌ಗಳಿಂದ ಬರುವ ಸಮಸ್ಯೆಯನ್ನು ವಿಡಿಯೋ ಡಿಸ್‌ಪ್ಲೇ ಟರ್ಮಿನಲಿ (ವಿಡಿಟಿ) ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಕಂಪ್ಯೂಟರ್‌ ಮುಂದೆ ಹೆಚ್ಚು ಇರುವ ಶೇ.50-70 ಜನರಲ್ಲಿ ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಸಮಸ್ಯೆ ಕಂಡುಬಂದಿದೆ.

ಅತಿಯಾದ ಕಂಪ್ಯೂಟರ್‌, ಟಿ.ವಿ., ಮೊಬೈಲ್‌ ಬಳಕೆಯಲ್ಲಿ ತೊಡಗುವ ಯುವಕರು, ಇತರೆ ವಯೋಮಾನದವರಲ್ಲಿ ನೇತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವವರು, ಸಾಮಾನ್ಯವಾಗಿ ಕಣ್ಣನ್ನು ಅತೀ ಕಡಿಮೆ ಪ್ರಮಾಣದಲ್ಲಿ ಪಿಳುಕಿಸುವುದರಿಂದ ಕಣ್ಣಿನಲ್ಲಿನ ತೇವಾಂಶ ಕಡಿಮೆಯಾಗುತ್ತದೆ.

ಕಂಪ್ಯೂಟರ್‌, ಮೊಬೈಲ್‌ ಪರದೆಯಿಂದ ಹೊರಸೂಸುವ ವಿಕಿರಣಗಳು, ಪರದೆಯಲ್ಲಿ ಅಳವಡಿಸಲಾದ ಪ್ರಕಾಶಮಾನ ಬೆಳಕಿನ ಸಲಕರಣೆಗಳು, ಕಂಪ್ಯೂಟರ್‌, ಮೊಬೈಲ್‌ ಗಳನ್ನು ಅವೈಜ್ಞಾನಿಕ ಅಂತರದಲ್ಲಿ ಇರಿಸಿಕೊಂಡು ವೀಕ್ಷಣೆ ಸೇರಿದಂತೆ ವಿವಿಧ ಕಾರಣಗಳಿಂದ ನೇತ್ರ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಮಕ್ಕಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂತಹ ರೋಗ ಲಕ್ಷಣ ಇದ್ದವರಲ್ಲಿ ಅತಿಯಾದ ಕಣ್ಣಿನ ನೋವು, ವಿಪರೀತ ಉರಿ ಮತ್ತು ತೇವಾಂಶ ಇಲ್ಲದಿರುವುದು, ಅಸ್ಪಷ್ಟ ದರ್ಶನ, ಪ್ರಕಾಶ ಅಸಹಿಷ್ಣುತೆ, ತಲೆನೋವು ಇನ್ನಿತರೆ ಸಮಸ್ಯೆಗಳು ಕಾಣತೊಡಗುತ್ತವೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ ಟಾಪ್‌ಗ್ಳ ಪರದೆಯಿಂದ ಬೀರುವ ಬೆಳಕು ಮಕ್ಕಳ ಕಣ್ಣಿನ ಮೇಲೆ ಪ್ರತಿಫಲನಗೊಳ್ಳದಂತೆ ಸರಿಯಾದ ಬೆಳಕಿನ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಟಿಗ್ಲೆರ್‌ ಸ್ಕ್ರಿನ್‌ ಉಪಯೋಗಿಸಬೇಕಿದೆ. ಜತೆಗೆ ಮಕ್ಕಳಿಗೆ ಆನ್‌ ಲೈನ್‌ ತರಗತಿ ವೀಕ್ಷಣೆ ವೇಳೆ ಸಾಕಷ್ಟು ಬಾರಿ ಕಣ್ಣು ಪಿಳುಕಿಸುವ ತಿಳಿವಳಿಕೆ ನೀಡಬೇಕಿದೆ. ಜತೆಗೆ ಕಣ್ಣಿನ ಆರೋಗ್ಯ ಸಂರಕ್ಷಣೆಗೆ ಕೆಲ ಸರಳ-ಸುಲಭ ವ್ಯಾಯಾಮಗಳಿದ್ದು ಅವುಗಳನ್ನು ತಿಳಿಸುವ, ಮಕ್ಕಳನ್ನು ಯೋಗದಲ್ಲಿ ತೊಡಗಿಸುವ ಕೆಲಸ ಮಾಡಬೇಕಿದೆ. ನೇತ್ರ ವ್ಯಾಯಾಮದಿಂದ ನೇತ್ರ ನರಗಳಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿ, ನೇತ್ರಗಳ ಆರೋಗ್ಯಕ್ಕೆ ಅನುಕೂಲವಾಗಲಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.