ಬಂಗೂರನಗರ ಶಾಲೆ ಪ್ರವೇಶ ದ್ವಾರವನ್ನೇರಿದ ಹೆಬ್ಬಾವು
Team Udayavani, Jul 3, 2021, 6:41 PM IST
ದಾಂಡೇಲಿ: ಶಾಲೆಗಳ ಪ್ರಾರಂಭೋತ್ಸವ ದಿನದಂದು ಬಹುತೇಕ ಶಾಲೆಗಳ ಪ್ರವೇಶಧ್ವಾರವನ್ನು ಬ್ಯಾನರ್ ಹಾಗೂ ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಅಂದೇ ಬಂಗೂರನಗರ ಸರಕಾರಿ ಉರ್ದು, ಕನ್ನಡ ಹಾಗೂ ಮರಾಠಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದ ನಾಮಫಲಕದ ಕಮಾನಿನಲ್ಲಿ ಹೆಬ್ಟಾವೊಂದು ಪ್ರತ್ಯಕ್ಷವಾಗಿ ಜನರ ಮನಸನ್ನು ಸೆಳೆದಿದೆ.
ಬಹಳ ಹೊತ್ತು ಹಾವಿರುವುದನ್ನು ಗಮನಿಸಿದ ಜನ ಉರಗ ಪ್ರೇಮಿ ರಝಾಕ್ ಶಾಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಸಲಕರಣೆಗಳೊಂದಿಗೆ ಧಾವಿಸಿದ ರಝಾಕ್, ಹಾವಿರುವ ಸ್ವಾಗತ ಕಮಾನಿನ ಮೇಲೆ ಹತ್ತಿ, ಹರಸಾಹಸ ಪಟ್ಟು ಹತ್ತನ್ನೆರಡು ಅಡಿ ಉದ್ದದ ಹೆಬ್ಟಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ನಿಜವಾದ ವನ್ಯಕಾಳಜಿ ಮೆರೆದಿದ್ದಾರೆ.
ಸ್ವಲ್ಪ ಎಚ್ಚರ ತಪ್ಪಿದರು ಹಾವು ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಅರಿತ ರಝಾಕ್ ಶಾ, ಬಹಳ ಎಚ್ಚರಿಕೆ ವಹಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ