ಕಾಂಗ್ರೆಸ್ ನಲ್ಲಿದ್ದವರಿಗೆ ನೆಲೆಯಿಲ್ಲ, ಸೇರುವವರ ಬಗ್ಗೆ ಕನಸು ಕಾಣುತ್ತಿದ್ದಾರೆ: ಸಿ.ಟಿ.ರವಿ
Team Udayavani, Jul 5, 2021, 1:19 PM IST
ಚಿಕ್ಕಮಗಳೂರು : ಕಾಂಗ್ರೆಸ್ ಉರಿಯುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು ಅಲ್ಲಿಗೆ ಹೋದವರನ್ನು ಭಸ್ಮ ಮಾಡುತ್ತದೆ ಎನ್ನುವುದು ಅವರ ಉದ್ದೇಶ. ಕಾಂಗ್ರೆಸ್ ನಲ್ಲಿ ಇದ್ದವರಿಗೆ ನೆಲೆಯಿಲ್ಲ, ಬೇರೆಯವರು ಬರುವ ಹಗಲುಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಂದ 14 ಜನರಿಗೆ ಡಿಕೆಶಿ ಫೋನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಉದ್ಧಗಲಕ್ಕೂ ತುಂಬಾ ಜನ ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ, ಮತ್ತೆ ಯಾರು ಸೇರುತ್ತಾರೆ? ಬಿಜೆಪಿ ಅಧಿಕಾರದಲ್ಲಿದೆ, ಚುನಾವಣೆಗೆ ಇನ್ನೂ ಎರಡು ವರ್ಷವಿದೆ, ಸಿಎಂ ಕುರ್ಚಿಗೆ ಕಿತ್ತಾಡುವ ಸ್ಥಿತಿಯಲ್ಲಿರುವಾಗ ಅಲ್ಲಿಗೆ ಯಾರು ಹೋಗುತ್ತಾರೆ. ಯಾರು ಕೂಡ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ ಎಂದರು.
ಇದನ್ನೂ ಓದಿ:ಬಿಎಸ್ ವೈ ಧೂಳಿಗೆ ಸಮನಿಲ್ಲದವರು ಟೀಕೆ ಮಾಡುತ್ತಿದ್ದಾರೆ: ಸೋಮಶೇಖರ್ ಫುಲ್ ಗರಂ
ಬಿಜೆಪಿಗೆ ಬಂದಿರುವವರು ಕಾಂಗ್ರೆಸ್ ಬೇಡ ಎಂದು ಬಂದಿದ್ದಾರೆ, ಅಂಥದ್ದರಲ್ಲಿ ಮತ್ತೆ ಹೋಗ್ತಾರಾ? ದೇಶದ ಉದ್ಧಗಲಕ್ಕೂ ತುಂಬಾ ಮಂದಿ ಕಾಂಗ್ರೆಸ್ಸಿಗರೇ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.