Headache: ದೀರ್ಘ‌ಕಾಲೀನ ತಲೆನೋವು; ನೇತ್ರ ಸಮಸ್ಯೆಯ ಸೂಚನೆಯೂ ಆಗಿರಲು ಸಾಧ್ಯ


Team Udayavani, Jun 2, 2024, 3:08 PM IST

13-head-ache

ಅನೇಕ ಮಂದಿ ವಯಸ್ಕರು ಮತ್ತು ಮಕ್ಕಳಲ್ಲಿ ತಲೆನೋವು ಒಂದು ಸಾಮಾನ್ಯ ಸಮಸ್ಯೆ ಆಗಿರುತ್ತದೆ. ತಲೆನೋವುಗಳನ್ನು ಸ್ಥೂಲವಾಗಿ ಪ್ರಧಾನ ಮತ್ತು ಉಪ ತಲೆನೋವುಗಳು ಎಂದು ವರ್ಗೀಕರಿಸಬಹುದಾಗಿದೆ. ಮೈಗ್ರೇನ್‌, ಚಿಂತೆಯ ತಲೆನೋವು, ಕ್ಲಸ್ಟರ್‌ ತಲೆನೋವುಗಳಂತೆ ತಲೆನೋವೇ ಪ್ರಮುಖ ಸಮಸ್ಯೆಯಾಗಿದ್ದರೆ ಅದು ಪ್ರಧಾನ ಅಥವಾ ಪ್ರೈಮರಿ ತಲೆನೋವು. ಸೈನಸ್‌ ಸೋಂಕು, ಹಲ್ಲುಗಳಲ್ಲಿ ತೊಂದರೆ, ಟೆಂಪೊಮ್ಯಾಂಡಿಬ್ಯುಲಾರ್‌ ತೊಂದರೆಗಳು, ಮೆದುಳು ಗಡ್ಡೆಗಳು ಅಥವಾ ದೃಷ್ಟಿ ಸಮಸ್ಯೆಗಳಂತಹ ಇತರ ಅನಾರೋಗ್ಯಗಳಿಂದ ತಲೆನೋವು ಉಂಟಾದರೆ ಅದನ್ನು ಸೆಕೆಂಡರಿ ಅಥವಾ ಉಪ ತಲೆನೋವು ಎನ್ನಲಾಗುತ್ತದೆ.

ಬಹುತೇಕ ಪ್ರಧಾನ ತಲೆನೋವುಗಳು ದೃಷ್ಟಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಮೈಗ್ರೇನ್‌ನಲ್ಲಿ ಅದರ ಲಕ್ಷಣಗಳಾದ ಬೆಳಕಿನ ಭಯ, ಸದ್ದಿನ ಭಯದಂತಹ ಲಕ್ಷಣಗಳ ಜತೆಗೆ ತೀವ್ರ ಕಣ್ಣು ನೋವು ಕೂಡ ಇರಬಹುದಾಗಿದೆ. ಕ್ಲಸ್ಟರ್‌ ತಲೆನೋವಿನಲ್ಲಿ ತಲೆಯ ಒಂದು ಪಾರ್ಶ್ವದಲ್ಲಿ ನೋವಿನ ಜತೆಗೆ ಕೆಂಪಗಾಗುವುದು, ಬಾಧಿತ ಭಾಗದ ಕಣ್ಣಿನಲ್ಲಿ ನೀರು ಸುರಿಯಬಹುದು. ಚಿಂತೆಯ ತಲೆನೋವಿನಲ್ಲಿ ಹಣೆ ಬಿಗಿಹಿಡಿದಂತಹ ಅನುಭವದ ಜತೆಗೆ ಕಣ್ಣು ನೋವು ಕೂಡ ಇರಬಹುದು.

ಕಣ್ಣಿನ ಅನೇಕ ಸಮಸ್ಯೆಗಳು ತಲೆನೋವಿಗೆ ಕಾರಣವಾಗುತ್ತವೆ. ಕಣ್ಣಿಗೆ ಒತ್ತಡವಾಗುವುದು, ಕೋಸು ಕಣ್ಣು ತಲೆನೋವನ್ನು ಪ್ರಚೋದಿಸಬಹುದು. ನಾವು ನೋಡುವ ವಸ್ತುಗಳ ಬಿಂಬಗಳನ್ನು ಕಣ್ಣಿನಲ್ಲಿರುವ ರೆಟಿನಾ ಸೆರೆಹಿಡಿಯುತ್ತದೆ. ರೆಟಿನಾದ ಮೇಲೆ ಬಿದ್ದ ವಸ್ತುವಿನ ಪ್ರತಿಬಿಂಬವನ್ನು ಬಿಂಬವಾಗಿ ರೂಪಿಸುವ ಕಾರ್ಯ ಕಾರ್ನಿಯಾ ಮತ್ತು ಕಣ್ಣಿನ ಮಸೂರದ್ದು. ಈ ಸಂರಚನೆಗಳಲ್ಲಿ ತೊಂದರೆಗಳು ಉಂಟಾದರೆ ಬಿಂಬ ರೂಪುಗೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ.

ಇದನ್ನು ಸರಿಹೊಂದಿಸುವುದಕ್ಕಾಗಿ ತಲೆಬುರುಡೆಯ ಸ್ನಾಯುಗಳು, ಅದರಲ್ಲೂ ವಿಶೇಷವಾಗಿ ಕಣ್ಣಿನ ಸುತ್ತಲಿನ ಸ್ನಾಯುಗಳು ವಸ್ತುಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತವೆ. ಇದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗಬಹುದು. ಬಿಂಬ ರೂಪುಗೊಳ್ಳುವುದರಲ್ಲಿ ತೊಂದರೆ ಇದ್ದಾಗ ಅದರಿಂದಾಗಿ ಅಸಮರ್ಪಕ ದೃಷ್ಟಿ ಕೇಂದ್ರೀಕರಣವಾಗುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ.

ಇದು ಮಯೋಪಿಯಾ (ಸಮೀಪ ದೃಷ್ಟಿದೋಷ), ಹೈಪರ್‌ ಮೆಟ್ರೋಪಿಯಾ (ದೂರ ದೃಷ್ಟಿದೋಷ) ಅಥವಾ ಅಸ್ಟಿಗ್ಮಾಟಿಸಂ (ಅಸಮ ದೃಷ್ಟಿ ದೋಷ) ಆಗಿರಬಹುದಾಗಿದೆ. ಹೈಪರ್‌ ಮೆಟ್ರೋಪಿಯಾ ಅಥವಾ ದೂರ ದೃಷ್ಟಿದೋಷದಲ್ಲಿ ರೆಟಿನಾದ ಬದಲು ಕಣ್ಣಿನ ಹಿಂಭಾಗದಲ್ಲಿ ವಸ್ತುಗಳ ಪ್ರತಿಬಿಂಬ ರೂಪುಗೊಳ್ಳುತ್ತದೆ.

ಇದರಿಂದಾಗಿ ಹತ್ತಿರದ ವಸ್ತುಗಳು ಮಂಜಾಗಿ ಕಾಣುವುದರಿಂದ ಹಣೆಯ ಸ್ನಾಯುಗಳು ದೃಷ್ಟಿ ಕೇಂದ್ರೀಕರಿಸಲು ಬಳಕೆಯಾಗುತ್ತವೆ. ಕಾರ್ನಿಯಾದ ಮೇಲೆ ಅಸಹಜತೆಯಿಂದಾಗಿ ದೃಷ್ಟಿ ಮಂಜಾಗಿ ಅಸ್ಟಿಗ್ಯಾಟಿಸಂ ಅಥವಾ ಅಸಮ ದೃಷ್ಟಿಯು ಉಂಟಾಗುತ್ತದೆ. ಕಣ್ಣುಗಳನ್ನು ಹೆಚ್ಚು ದೀರ್ಘ‌ಕಾಲ ಉಪಯೋಗಿಸಲು ಪ್ರಯತ್ನಿಸುವುದರಿಂದಲೂ ಕಣ್ಣುಗಳ ಮೇಲೆ ಒತ್ತಡ ಉಂಟಾಗಿ ತಲೆನೋವು.

ಕಂಪ್ಯೂಟರನ್ನು ದೀರ್ಘ‌ಕಾಲ ಕಣ್ಣು ಮಿಟುಕಿಸದೆ ವೀಕ್ಷಿಸುವುದು, ಮಂದ ಬೆಳಕಿನಲ್ಲಿ, ರಾತ್ರಿ ಕಾಲದಲ್ಲಿ ವಾಹನ ಚಲಾಯಿಸುವುದರಿಂದ ಇದು ಉಂಟಾಗಬಹುದು. ಕಂಪ್ಯೂಟರ್‌ ಪರದೆ ಅಥವಾ ಮೊಬೈಲ್‌ ಪರದೆಯನ್ನು ದೀರ್ಘ‌ಕಾಲ, ವಿಶೇಷವಾಗಿ ಎರಡು ತಾಸುಗಳಿಗಿಂತ ಹೆಚ್ಚು ಕಾಲ ವೀಕ್ಷಿಸುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗಬಹುದು.

ಸಾಮಾನ್ಯವಾಗಿ ಕಂಪ್ಯೂಟರ್‌ ಉಪಯೋಗಿಸುವಾಗ ಕಣ್ಣು ಮಿಟುಕಿಸುವುದು ಅಪ್ರಜ್ಞಾಪೂರ್ವಕವಾಗಿ ಮರೆತುಹೋಗುತ್ತದೆ ಅಥವಾ ನಿಲ್ಲುತ್ತದೆ. ಕಣ್ಣು ಮಿಟುಕಿಸುವುದು ಕಣ್ಣುಗಳನ್ನು ಆದ್ರìವಾಗಿ ಕಾಯ್ದುಕೊಳ್ಳಲು ನೆರವಾಗುವ ಕ್ರಿಯೆಯಾಗಿದೆ. ಡಿಜಿಟಲ್‌ ಸಾಮಗ್ರಿಗಳ ಪರದೆಯ ಕೋರೈಸುವ ಪ್ರತಿಫ‌ಲನವೂ ಕಣ್ಣುಗಳಿಗೆ ಒತ್ತಡ ಉಂಟಾಗಲು ಕಾರಣವಾಗುತ್ತದೆ.

ಇವೆಲ್ಲವುಗಳಿಂದಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳಬಹುದು, ಕಣ್ಣುಗಳಿಗೆ ದಣಿವಾದ ಅನುಭವವಾಗಬಹುದು, ಬೆಳಕಿಗೆ ಕಣ್ಣುಗಳು ಸೂಕ್ಷ್ಮ ಸಂವೇದಿಯಾಗಬಹುದು, ಕಣ್ಣುಗಳು ಉರಿಯಬಹುದು. ಮಂದ ಬೆಳಕಿನಲ್ಲಿ ಓದುವುದು, ಬರೆಯುವುದು ಅಥವಾ ಹೊಲಿಯುವುದರಿಂದಲೂ ಕಣ್ಣುಗಳಿಗೆ ಒತ್ತಡವಾಗುತ್ತದೆ. ಕಣ್ಣುಗಳಿಗೆ ಒತ್ತಡವಾದ ಲಕ್ಷಣಗಳು ಇದ್ದರೆ ನೇತ್ರತಜ್ಞರನ್ನು ಕಾಣುವುದು ಮುಖ್ಯ. ದೃಷ್ಟಿ ದೋಷಗಳನ್ನು ಸರಿಯಾದ ಕನ್ನಡಕ ಅಥವಾ ಲೆನ್ಸ್‌ ಉಪಯೋಗಿಸಿ ಸುಲಭವಾಗಿ ಸರಿಪಡಿಸಬಹುದಾಗಿದೆ.

ಡಾ| ರೋಹಿತ್‌ ಪೈ,

ಕನ್ಸಲ್ಟೆಂಟ್‌ ನ್ಯುರಾಲಜಿ

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ಮತ್ತು ನ್ಯೂರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.