ಗೇಮ್ಚೇಂಜರ್ ಆಗಲಿದೆಯೇ ಸಹಕಾರ ಸಚಿವಾಲಯ?
Team Udayavani, Jul 9, 2021, 7:40 AM IST
ಸಾಂದರ್ಭಿಕ
ಹೊಸದಿಲ್ಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇಂದ್ರ ಸಹಕಾರ ಸಚಿವಾಲಯವು 2024ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಗೇಮ್ಚೇಂಜರ್ ಆಗಿ ಕೆಲಸ ಮಾಡಲಿದೆಯೇ?
ಹೌದು ಎನ್ನುತ್ತವೆ ಮೂಲಗಳು. ಈಗಾಗಲೇ ಈ ಸಚಿವಾಲಯದ ಹೊಣೆ ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊತ್ತುಕೊಂಡಿದ್ದಾರೆ. ದೇಶದಲ್ಲಿನ ಸಹಕಾರ ಸಂಘಗಳಿಗೆ ಪುನರುಜ್ಜೀವ ನೀಡುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯವರ್ತಿಗಳಿಂದ ಕೃಷಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವುದೇ ಇದರ ಉದ್ದೇಶ ಎನ್ನಲಾಗಿದೆ.
ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿರುವಂತೆಯೇ ಕೇಂದ್ರ ಇಂಥದ್ದೊಂದು ಹೆಜ್ಜೆಯಿಟ್ಟಿದೆ. ಮುಂದಿನ ವರ್ಷ ನಡೆಯುವ ಪಂಚರಾಜ್ಯ ಚುನಾವಣೆಗಳನ್ನೂ ಗಮನದಲ್ಲಿಟ್ಟು ಪಕ್ಷದ ಗ್ರಾಮೀಣ ಹಾಗೂ ತಳಮಟ್ಟದ ನೆಲೆ ಯನ್ನು ಗಟ್ಟಿಗೊಳಿಸುವ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ರೈತರ ಆದಾಯ ಹೆಚ್ಚಳ ಗುರಿ:
ಭಾರತವು ಈಗಾಗಲೇ ಹಲವು ಯಶಸ್ವಿ ಸಹಕಾರ ಚಳವಳಿಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಅಮೂಲ್ ಕ್ರಾಂತಿಯೂ ಒಂದು. ಗುಜರಾತ್ನ ಈ ಹಾಲು ಒಕ್ಕೂಟಕ್ಕೆ 36 ಲಕ್ಷ ಹಾಲು ಉತ್ಪಾದಕರೇ ಮಾಲಕರು. ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾ ಗದಂಥ ಸಣ್ಣ ಉತ್ಪಾದಕರೇ ರಚಿಸಿರುವ ಒಕ್ಕೂಟ ಇದಾಗಿದೆ.
ಇದೇ ಮಾದರಿಯಲ್ಲಿ, ದೇಶದ ಇತರ ಭಾಗಗಳಲ್ಲೂ ಯಶಸ್ವಿ ಕೃಷಿ ಮತ್ತು ಜಾನುವಾರು ಸಹಕಾರ ಚಳವಳಿ ಯನ್ನು ಉತ್ತೇಜಿಸಿ, ರೈತರ ಆದಾಯವನ್ನು ಹೆಚ್ಚಿಸುವುದು ಸರಕಾರದ ಗುರಿಯಾಗಿದೆ. ಜತೆಗೆ ಇದು ಭೂಮಿಯ ಉತ್ಪಾದಕತೆಯನ್ನೂ ವೃದ್ಧಿಸಿ, ದೇಶದ ಜಿಡಿಪಿ ಪ್ರಗತಿಗೂ ಕೊಡುಗೆ ನೀಡಲಿದೆ ಎನ್ನುವುದು ಸರಕಾರದ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ