40 ವರ್ಷಗಳಿಂದ ಮ್ಯಾಚಿಂಗ್ ಡ್ರೆಸ್ : ಆಲಪ್ಪುಳದ ಮಿತ್ರದ್ವಯರ ದಾಖಲೆ
ವಾಸಸ್ಥಳವೂ ಸಮೀಪವೇ
Team Udayavani, Jul 10, 2021, 7:40 AM IST
ಆಲಪ್ಪುಳ: “ಅತ್ಯುತ್ತಮ ಮಿತ್ರರು’ ಎನ್ನುವುದಕ್ಕೆ ಇತಿಹಾಸ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಹಲವು ಉದಾಹರಣೆಗಳನ್ನು ನೀಡಬಹುದು. ಈಗಂತೂ ಮಿತ್ರತ್ವ ಎನ್ನುವುದು ಅನುಕೂಲಕ್ಕೆ ತಕ್ಕಂತೆ ಎಂಬ ಭಾವನೆ ಮೂಡಿರುವ ನಡುವೆ ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಳಂನ ಇಬ್ಬರು ಟೈಲರ್ಗಳು 25 ವರ್ಷಗಳಿಂದ ಸ್ನೇಹಿತ ರಾಗಿಯೇ ಉಳಿದಿದ್ದಾರೆ.
ಕೇವಲ ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿ ರಲಿಲ್ಲ. ಗಾಢ ಸ್ನೇಹತ್ವವನ್ನು ಪ್ರಕಟಿಸುವುದಕ್ಕೋಸ್ಕರ ಪ್ರತೀ ದಿನವೂ ಇಬ್ಬರೂ ಒಂದೇ ರೀತಿಯ ಪ್ಯಾಂಟ್ -ಶರ್ಟ್ ಧರಿಸುತ್ತಾರೆ.
ಅವರ ಹೆಸರೇ ರವೀಂದ್ರನ್ ಪಿಳ್ಳೆ ಮತ್ತು ಉದಯ ಕುಮಾರ್. ಉದಯ ಕುಮಾರ್ಗೆ ಅವರ ಅಣ್ಣ ತಿಲಕನ್ ಶಾಲೆಯಲ್ಲಿ ಸಹಪಾಠಿಯಾಗಿದ್ದ ರವೀಂದ್ರನ್ ಪಿಳ್ಳೆ ಅವರನ್ನು ಪರಿಚಯಿಸಿದ್ದರು. 1982ರಲ್ಲಿ ಇಬ್ಬರ ನಡುವೆ ಪರಿಚಯವಾದ ಬಳಿಕ ಒಂದೇ ಸ್ಥಳದಲ್ಲಿ ತಮ್ಮ ಬಟ್ಟೆ ಹೊಲಿಯುವ ಅಂಗಡಿ ಸ್ಥಾಪಿಸಿದರು ಮತ್ತು ಮಿತ್ರತ್ವ ಗಾಢವಾಗಿ ಕಾಪಿಡುವ ಉದ್ದೇಶದಿಂದ ಪ್ರತೀ ದಿನವೂ ಇಬ್ಬರೂ ಒಂದೇ ಬಣ್ಣದ ಶರ್ಟ್- ಪ್ಯಾಂಟ್ ಧರಿಸಲು ಶುರು ಮಾಡಿದರು.
ಮ್ಯಾಚಿಂಗ್: ಮೂವತ್ತೂಂಬತ್ತು ವರ್ಷಗಳಿಂದ ಇಬ್ಬರೂ ಹಾಕುವ ಶರ್ಟ್, ಪ್ಯಾಂಟ್ ಒಂದೇ ಬಣ್ಣದ್ದು, ಒಂದೇ ಮೂಲ ವಸ್ತು ವನ್ನು ಹೊಂದಿರುತ್ತದೆ. ಇಬ್ಬರೂ ತಮ್ಮ ಮಿತ್ರತ್ವವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸ್ನೇಹಿತರ ತಮ್ಮ ಅಂಗಡಿಗೆ “ಪಿ.ಕೆ.ಟೈಲರ್ಸ್’ ಎಂಬ ಹೆಸರನ್ನೂ ಇರಿಸಿದ್ದಾರೆ. ಅವರಿಬ್ಬರ ಬಗ್ಗೆ ಜನರಿಂದ ಕೇಳಿ ತಿಳಿದಿದ್ದ ಕೇರಳದ ಜನಪ್ರಿಯ ವ್ಯಂಗ್ಯಚಿತ್ರ ಕಾರರಾಗಿದ್ದ ದಿ|ಪಿ.ಕೆ.ಮಂತ್ರಿ ಅವರು ಜೋಡಿ ಕಾರ್ಟೂನ್ ರಚಿಸಿದ್ದರು. “ಮನೋರಾಜ್ಯಂ’ ಎಂಬ ನಿಯತ ಕಾಲಿಕದಲ್ಲಿ ಅವರಿಬ್ಬರ ಜೋಡಿಯ ಕಾರ್ಟೂನ್ ಪ್ರಕಟವಾಗಿ ಮೆಚ್ಚುಗೆ ಗಳಿಸಿತ್ತು. ಪಿ ಎಂದರೆ ಪಚ್ಚು ಮತ್ತು ಕೋವಳಂ. ಇದು ಅವರಿಬ್ಬರ ಊರಿನ ಹೆಸರುಗಳು. ಆರಂಭದಲ್ಲಿ 1 ಕಿಮೀ ದೂರದಲ್ಲಿ ವಾಸಿಸುತ್ತಿದ್ದ ಇಬ್ಬರೂ ಕಾಯಂಕುಳಂನಲ್ಲಿ ಹತ್ತಿರ ಹತ್ತಿರವೇ ವಾಸಿಸುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೂ ಮ್ಯಾಚಿಂಗ್ ಬಟ್ಟೆಯನ್ನೇ ಧರಿಸುತ್ತಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ