ಹಿಂಬಡ್ತಿ ವಿರೋಧಿಸಿ ಶಿಕ್ಷಕರ ಪ್ರತಿಭಟನೆ
Team Udayavani, Jul 10, 2021, 4:58 PM IST
ಅಫಜಲಪುರ: ಪದವಿ, ಸ್ನಾತ್ತಕೋತ್ತರ ಪದವಿ ಮುಗಿಸಿದ ಶಿಕ್ಷಕರನ್ನು 1ರಿಂದ 5ನೇ ತರಗತಿ ವರೆಗೆ ಸಿಮಿತಗೊಳಿಸಿದ್ದನ್ನು ವಿರೋ ಧಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ಪಟ್ಟಣದ ಬಿಇಒ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಸಂಘದ ತಾಲೂಕು ಅಧ್ಯಕ್ಷ ಗಾಂ ಧಿ ದಫೇದಾರ ಮಾತನಾಡಿ, 2017ರಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳನ್ನು ಬದಲಾಯಿಸಿ 1ರಿಂದ 5ನೇ ತರಗತಿ ಹಾಗೂ 6ರಿಂದ 8ನೇ ತರಗತಿ ಎಂದು ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಎರಡು ಭಾಗ ಮಾಡಿದ್ದಾರೆ.
1ರಿಂದ 5ನೇ ತರಗತಿಗಳಿಗೆ ಬೋಧಿ ಸುವ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಹಾಗೂ 6ರಿಂದ 8ನೇ ತರಗತಿಗೆ ಪಾಠ ಮಾಡುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರೆಂದು ಕರೆಯಲಾಗಿತ್ತು. 2017ರ ಸಿ ಮತ್ತು ಆರ್ ಬದಲಾವಣೆಗೂ ಮುನ್ನ 1ರಿಂದ 8ನೇ ತರಗತಿಗಳಿಗೆ ಸುಮಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರೇ ಕಾರ್ಯ ನಿರ್ವಹಿಸಿದ್ದರು.
ಎಲ್ಲ ಶಿಕ್ಷಕರು ಪದವಿ, ಸ್ನಾತಕ ಪದವಿ ಮುಗಿಸಿದ್ದಾರೆ. ಈಗ ಇವರಿಗೆಲ್ಲ ಹಿಂಬಡ್ತಿ ನೀಡಿದ್ದರಿಂದ ಬಹಳಷ್ಟು ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರ ಇನ್ನೊಮ್ಮೆ ಯೋಚಿಸಿ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ಮ್ಯಾಳೇಶಿ, ಗುರುಶಾಂತಯ್ಯ ಸ್ವಾಮಿ, ಶಿವಾನಂದ ಪೂಜಾರಿ, ಕಲಾವತಿ ಮುಜಗೊಂಡ, ಬಾಳಾಸಾಹೇಬ ಹೊಳೆಮನಿ, ಮಹೇಶ ಅಂಜುಟಗಿ, ಸಂಜು ಬಗಲಿ, ನವಿನಗೌಡ, ಮಹಾನಂದ ಸರಸಂಬಾ, ಜಗದೇಶ ಕಲಶೇಟ್ಟಿ, ವಿಠuಲ ಮಿರಗಿ, ರಹಿಂ ಸಿಪಾಯಿ, ಸಿದ್ದು ಮ್ಯಾಳೇಶಿ, ಸದಾಶಿವ ಹೊಸಮನಿ, ಭಿಮಣ್ಣ ಬದನಿಕಾಯಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ