ನಿತ್ಯಾನಂದ ಆಶ್ರಮದಿಂದ ವಿದೇಶಿ ಪ್ರಜೆ ನಾಪತ್ತೆ
Team Udayavani, Jul 12, 2021, 1:51 PM IST
ರಾಮನಗರ: ಬಿಡದಿ ಬಳಿಯ ನಿತ್ಯಾನಂದ ಸ್ವಾಮಿ ಧ್ಯಾನಪೀಠದಿಂದ ಮಲೇಷ್ಯಾ ಪ್ರಜೆ ಕ್ರಿಸ್ಟನ್ ಭಾಸ್ಕರನ್ (23) ಎಂಬ ವಿದೇಶಿ ಪ್ರಜೆ ನಾಪತ್ತೆಯಾಗಿದ್ದಾನೆ ಎಂಬ ದೂರು ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಧ್ಯಾನಪೀಠದಲ್ಲೇ ವಾಸವಾಗಿರುವ ನಾಪತ್ತೆಯಾಗಿರವ ವಿದೇಶಿ ಪ್ರಜೆಯ ತಾಯಿ ಪುಷ್ಪಾ ರಾಣಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಸ್ಪೋರ್ಟ್ಸಮೇತ ನಾಪತ್ತೆಯಾಗಿರುವ ತಮ್ಮ ಮಗನನ್ನು ಹುಡುಕಿಕೊಡುವಂತೆ ಅವರು ಪೊಲೀಸ ರನ್ನು ಕೋರಿದ್ದಾರೆ. ಮಾನಸಿಕ ಅಸ್ವಸ್ಥನಂತಾಗಿದ್ದ ತಮ್ಮ ಮಗನನ್ನು 8 ವರ್ಷಗಳ ಹಿಂದೆ ಚಿಕಿತ್ಸೆಗಾಗಿ ಮಲೇಷ್ಯಾದಿಂದ ಕರೆತಂದು ಬಿಡದಿಯ ಧ್ಯಾನಪೀಠದ ಆಶ್ರಮದಲ್ಲಿ ನೆಲೆಸಿದ್ದಾಗಿ. ಕಳೆದ ಜುಲೈ 9ರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿದ ಕ್ರಿಸ್ಟನ್ ಭಾಸ್ಕರನ್ ವಾಪಸ್ ಕೊಠಡಿಗೆ ವಾಪಸ್ ಬಂದಿಲ್ಲ ಎಂದು ಪುಷ್ಪಾರಾಣಿ ತಿಳಿಸಿದ್ದಾರೆ.
ಪೊಲೀಸರಿಗೆ ದೂರು ಕೊಡುವ ಮುನ್ನ ಆಶ್ರಮದ ಎಲ್ಲಾಕಡೆ ಹುಡುಕಿ ರುವುದಾಗಿ, ಆತನ ಲಾಕರ್ನಲ್ಲಿದ್ದ ಪಾಸ್ ಪೋರ್ಟ್ ಕಾಣೆಯಾ ಗಿದೆ. ತಮ್ಮ ಪುತ್ರ ತಕ್ಷಣವೇ ಕೋಪಗೊಳ್ಳುವುದು, ಎದು ರಿಗಿರುವ ವ್ಯಕ್ತಿಗಳ ಮೇಲೆ ಕೈಗೆ ಸಿಕ್ಕ ವಸ್ತುಗ ಳನ್ನು ಎಸೆಯುವುದು, ಸಿಕ್ಕ ವಸ್ತುಗಳನ್ನು ಒಡೆದು ಹಾಕುತ್ತಾನೆ ಎಂದು ಹೇಳಿಕೊಂಡಿ ದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ವ್ಯಕ್ತಿಯ ಹುಡು ಕಾಟ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ