ಇಂದ್ರಜಿತ್ ವಿರುದ್ಧ ಸಿಡಿದ ‘ಡಿ ಬಾಸ್’ ಪಡೆ : ಕಾನೂನು ಕ್ರಮಕ್ಕೆ ಆಗ್ರಹ
Team Udayavani, Jul 22, 2021, 2:16 PM IST
ಬೆಂಗಳೂರು:ಚಲನಚಿತ್ರ ನಟ ದರ್ಶನ್ ಅವರ ವಿರುದ್ಧ ದಲಿತನ ಮೇಲೆ ಹಲ್ಲೆ ಆರೋಪ ಮಾಡಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇಂದು ( ಜುಲೈ 22) ಡಿ-ಕಂಪನಿ ಫ್ಯಾನ್ಸ್ ಅಸೋಸಿಯೇಶನ್(ರಿ.) ಹೆಸರಿನ ಅಭಿಮಾನಿಗಳ ಸಂಘ ಬೆಂಗಳೂರಿನ ವೈಟ್ ಪೀಲ್ಡ್ ವಿಭಾಗದ ಪೊಲೀಸ್ ಉಪ ಆಯುಕ್ತರಿಗೆ ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಇಂದ್ರಜಿತ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ ತೇಜೋವಧೆ ಮಾಡಲೆಂದೇ ಇಲ್ಲ ಸಲ್ಲದ ಆರೋಪವನ್ನು ಸೃಷ್ಠಿಸಿ ಇದರಿಂದ ಖ್ಯಾತಿ ಪಡೆಯಬೇಕೆನ್ನುವ ದುರುದ್ದೇಶ ಹೊಂದಿದ್ದಾರೆ. ಅದರಲ್ಲೂ ದಲಿತ ಸಪ್ಲೈಯರ್ ಗೆ ಹೊಡೆದರು ಎಂದು ಸುಳ್ಳು ಆರೋಪ ಮಾಡಿ ಒಂದು ಕೋಮಿನ ಹಿಂದುಳಿದ ಜನಾಂಗದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯದಲ್ಲಿ ಕೋಮು ವಿಷ ಬೀಜ ಬಿತ್ತಲು ಮುಂದಾಗಿರುವುದು ವಿಪರ್ಯಾಸ. ಇದುವರೆಗೆ ಯಾರೋಬ್ಬರು ಹಲ್ಲೆ ನಡೆದಿದೆ ಎಂದು ದರ್ಶನ್ ವಿರುದ್ಧ ದೂರು ನೀಡಿಲ್ಲ. ಹಾಗೂ ಇದುವರೆಗೆ ಯಾವ ದಲಿತ ಸಂಘಟನೆ ಕೂಡ ದರ್ಶನ್ ಅವರ ವಿರುದ್ಧ ಆರೋಪ ಮಾಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪಿರಿಯಾಪಟ್ಟಣ ತಾಲೂಕಿನ ಮೈಸೂರು ಜಿಲ್ಲೆ ಡಿ ಬಾಸ್ ಅಭಿಮಾನಿಗಳು, ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯ ಎಲ್ಲೆಡೆ ದರ್ಶನ್ ಅಭಿಮಾನಿಗಳು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಇಂದ್ರಜಿತ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು
ಡಿ ಡೈಮಂಡ್ಸ್ ಫ್ಯಾನ್ಸ್ ಎಲೆಕ್ಟ್ರಾನಿಕ್ ಸಿಟಿ ಸಂಘದ ವತಿಯಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/pUC3gtBlQu— Thoogudeepa ‘D’ Team – R (@DTEAM7999) July 22, 2021
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು ಪಿರಿಯಾಪಟ್ಟಣ ತಾಲೂಕಿನ ಮೈಸೂರು ಜಿಲ್ಲೆ ಡಿ ಬಾಸ್ ಅಭಿಮಾನಿಗಳಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/mmgurcrKMY
— Thoogudeepa ‘D’ Team – R (@DTEAM7999) July 22, 2021
ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರಿಗೆ
ತೇಜೋವಧೆ ಮಾಡಿರುವ ಇಂದ್ರಜಿತ್ ಲಂಕೇಶ್ ರವರು, ಬಹಿರಂಗ ಕ್ಷಮೆಯಾಚಿಸಬೇಕೆಂದು ಡಿ ಕಂಪನಿ (ರಿ) ಕೆ.ಆರ್. ಪುರಂ ವತಿಯಿಂದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.#DBoss #ChallengingStarDarshan #WeStandWithDBoss pic.twitter.com/Hzf9I0xs7n— Thoogudeepa ‘D’ Team – R (@DTEAM7999) July 22, 2021
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು ಧಾರವಾಡ ಜಿಲ್ಲೆ ನಲ್ಲಿ ಡಿ ಬಾಸ್ ಅಭಿಮಾನಿಗಳಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/ij1kkNX5lk
— Thoogudeepa ‘D’ Team – R (@DTEAM7999) July 22, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ