ಅನುದಾನ ಕೊರತೆ, ಬೀದಿಗೆ ಬಿದ್ದ  ವೃದ್ಧರಿಗಿಲ್ಲ ಆಶ್ರಯ


Team Udayavani, Jul 30, 2021, 3:00 AM IST

ಅನುದಾನ ಕೊರತೆ, ಬೀದಿಗೆ ಬಿದ್ದ  ವೃದ್ಧರಿಗಿಲ್ಲ ಆಶ್ರಯ

ಕಾರ್ಕಳ: ಇಂದು ಅದೆಷ್ಟೋ ಯುವ ಮನಸ್ಸುಗಳಿಗೆ ಹೆತ್ತವರೇ ಭಾರವಾಗಿದ್ದಾರೆ. ವೃದ್ಧರ ಜೀವನ  ಬೀದಿಗಳಲ್ಲಿ  ಅನಾಥ ಪ್ರಜ್ಞೆಯಲ್ಲೇ  ಕಳೆದು ಹೋಗುವಂತಾಗಿದೆ.

ಸೂಕ್ತ ನೆಲೆ ಸಿಕ್ಕದೆ ನಗರಗಳ ಬೀದಿಗಳ ಫ‌ುಟ್‌ಪಾತ್‌, ಬಸ್‌ಸ್ಟಾಂಡ್‌ಗಳಲ್ಲಿ ಭಿಕ್ಷೆ ಬೇಡಿ ಬದುಕುವ ವೃದ್ಧರ  ಸಂಖ್ಯೆ ಲೆಕ್ಕಕ್ಕೆ ಸಿಗದು. ಮಾನಸಿಕ ಅಸ್ವಸ್ಥರು, ಕಾಯಿಲೆ ಗೊಳಗಾದವರು, ಮನೆಯಿಂದ ಹೊರ ಹಾಕಲ್ಪಟ್ಟವರು  ಇದರಲ್ಲಿ ಸೇರಿದ್ದಾರೆ. ಇಂತವವರನ್ನು  ಸಮಾಜ ಸೇವಕರು, ಪೊಲೀಸರು  ರಕ್ಷಿಸಿ, ವೃದ್ಧಾಶ್ರಮಕ್ಕೋ, ಚಿಕಿತ್ಸೆಗಾಗಿ ಆಸ್ಪತ್ರೆಗೋ ದಾಖಲಿಸಿ ಮಾನವೀಯತೆ  ತೋರುವ ಪ್ರಯತ್ನ ನಡೆಸುತ್ತಾರೆ.  ಆದರೆ ಉಚಿತ ವೃದ್ಧಾಶ್ರಮಗಳು  ಇಲ್ಲದ ಕಾರಣ  ಸಂದಿಗ್ಧತೆಗೆ ಸಿಲುಕುವಂತಾಗಿದೆ.

ಜಿಲ್ಲೆಯಲ್ಲಿ ನೋಂದಣಿಯಾದ 23 ಖಾಸಗಿ ಅನಾಥಾಶ್ರಮಗಳಿವೆ.   ಇಲ್ಲಿ  ಶುಲ್ಕ ದೊಂದಿಗೆ  ವೃದ್ಧರನ್ನು ದಾಖಲಿಸಿ ಕೊಳ್ಳಲಾಗು ತ್ತಿದೆ. ಜಿಲ್ಲೆಯಲ್ಲೊಂದು ವೃದ್ಧರಿಗಾಗಿ ಸರಕಾರಿ ಅನುದಾನಿತ  ವೃದ್ಧಾಶ್ರಮವಿಲ್ಲ.

ಕಳೆದ  ವರ್ಷಕ್ಕೆ  ಹೋಲಿಸಿದರೆ  ಜಿಲ್ಲೆ ಯಲ್ಲಿ  ವೃದ್ಧಾಶ್ರಮ ಅರಸುವವರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಿದೆ.  ಹೆತ್ತವರ ಪಾಲನೆ, ಪೋಷಣೆಯ ಜವಾಬ್ದಾರಿಯಿಂದ ಮಕ್ಕಳು ವಿಮುಖರಾದ  ಪರಿಣಾಮ ಬೀದಿಗೆ  ಬೀಳುವ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದೆ.

ವೃದ್ಧಾಶ್ರಮಗಳಿಗೆ ಸರಕಾರದ ಅನು ದಾನಗಳು ದೊರಕುತ್ತಿಲ್ಲ. ಈ ಹಿಂದೆ  ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಉಪವಿಭಾಗಕ್ಕೊಂದು  ಅನಾಥಾಶ್ರಮ, ತಾತ್ಕಾಲಿಕ ಪುನರ್‌ವಸತಿ  ಕೇಂದ್ರ ತೆರೆಯುವ ಬಗ್ಗೆ  ಹೇಳಿದ್ದರು. ಜಿಲ್ಲೆಯಲ್ಲಿ ಉಚಿತ ಸೇವೆ ನೀಡುವ ವೃದ್ಧಾಶ್ರಮಗಳಿದ್ದರೂ  ಕೊರೊನಾ ಇತ್ಯಾದಿ ಆರ್ಥಿಕ ಅಡಚಣೆಯಿಂದ  ದಾನಿ ಗಳನ್ನು ಅವಲಂಬಿಸಿಕೊಂಡು  ಕಷ್ಟದಲ್ಲಿ  ನಡೆಯುತ್ತಿವೆ.

ಒಬ್ಬೊಬ್ಬರದು ಒಂದೊಂದು ಕಥೆ :

ಪೋಷಕರನ್ನು ಸಾಕಲಾಗದೆ ಆಸ್ಪತ್ರೆಗೂ ಅಥವಾ ಇನ್ನೆಲ್ಲಿಗೋ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಅನಂತರ ಅವರನ್ನು ದಿಕ್ಕು ತಪ್ಪಿಸಿ ನಗರದ ಯಾವುದಾದರೊಂದು ಪ್ರದೇಶದಲ್ಲಿ ಬಿಟ್ಟು ಹೋಗಿ ರುವ ಅನೇಕ ಉದಾಹರಣೆ ಗಳಿವೆ. ಮೃತಪಟ್ಟಂತ ಸಂದರ್ಭ ಬಂದು ನೋಡದವರೂ ಇ¨ªಾರೆ.  ಒಬ್ಬೊಬ್ಬರದು ಮನಕಲಕುವ ಕಥೆಗಳಾಗಿರುತ್ತವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

2014ರಲ್ಲಿ  ಜಿಲ್ಲೆಯಲ್ಲಿ  ತೆರೆದ ಹಿರಿಯ ನಾಗರಿಕರ ಸಹಾಯವಾಣಿಗೆ ಇದುವರೆಗೆ 12,093 ಕರೆಗಳು ಬಂದಿವೆ. ತಿಂಗಳಿಗೆ 150ರಿಂದ 200 ಕರೆಗಳು ಬರುತ್ತವೆ ಎನ್ನುತ್ತಾರೆ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ  ಅಧಿಕಾರಿಗಳು.

ಆಸ್ಪತ್ರೆಯಲ್ಲೇ ಬಾಕಿ :

ಅಸ್ವಸ್ಥರನ್ನು ಸರಕಾರಿ ಆಸ್ಪತ್ರೆಗಳಿಗೆ ಸೇರಿಸಿ, ಅನಂತರದಲ್ಲಿ ಅವರು ಬಿಡುಗಡೆಗೊಂಡರೂ ಎಲ್ಲಿಗೂ ಹೋಗಲಾಗದೆ ಆಸ್ಪತ್ರೆಗಳ ಬೆಡ್‌ಗಳಲ್ಲೇ ಉಳಿಯುತ್ತಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ 12 ಮಂದಿ ವಾರಸುದಾರರಿಲ್ಲದ ವೃದ್ಧರು ಬೆಡ್‌ಗಳಲ್ಲೆ  ಬಾಕಿ ಉಳಿದಿದ್ದಾರೆ.

ಇನ್ನೊಂದು ವೃದ್ಧಾಶ್ರಮ ತೆರೆಯುವ ಅಗತ್ಯವಿಲ್ಲ.  ವೃದ್ಧರನ್ನು ಬೀದಿಗೆ  ತಳ್ಳುವವರನ್ನು ಅಪರಾಧಿಗಳನ್ನಾಗಿಸುವ ಕಾನೂನುಗಳು ಜಾರಿಗೆ ಬರಬೇಕು ಎಂದು ಸಮಾಜ ಸೇವಕಿ ರಮಿತಾ ಶೈಲೇಂದ್ರ ಅಭಿಪ್ರಾಯಪಡುತ್ತಾರೆ.

3-4 ವರ್ಷಗಳ ಹಿಂದೆ ಸರಕಾರದ ಅನುದಾನ ಬರುತ್ತಿತ್ತು. ಅನಂತರದಲ್ಲಿ ಬರುತ್ತಿಲ್ಲ.  ಬೀದಿಯಲ್ಲಿ ಅನಾಥರಾಗಿ ವೃದ್ಧರು ಕಂಡುಬಂದಾಗ ನಮ್ಮ ಸಹಾಯವಾಣಿಗೆ ಕರೆಗಳು ಬರುತ್ತವೆ.-ಗಣೇಶ್‌, ಯೋಜನಾ ಸಂಯೋಜಕ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ಉಡುಪಿ

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.