ಚಿಂತಾಮಣಿ ನಗರಸಭೆ ಅಧಿಕಾರಿಗಳ ವಿರುದ್ದ ಸದಸ್ಯ ಶಪೀಕ್ ಆಕ್ರೋಶ
Team Udayavani, Jul 30, 2021, 8:25 PM IST
ಚಿಂತಾಮಣಿ: ಚಿಂತಾಮಣಿಯ ನಗರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ವರ್ಷಗಳೆ ಕಳೇದರೂ ಇ-ಖಾತೆಗಳು ನಡೆಯುತ್ತಿಲ್ಲವೆಂದು ನಗರಸೆಭೆ ಆಡಳಿತಕ್ಕೆ ಬೆಂಬಲ ನೀಡಿದ್ದ ಸದಸ್ಯ ಮಹಮ್ಮದ್ ಶಫೀಕ್ ಆರೋಪಿಸಿದ್ದಾರೆ.
ಕಳೆದ ಜನವರಿ ೧೩ ರಂದು ನಗರ ನಿವಾಸಿಯೊಬ್ಬರು ಇ-ಆಸ್ತಿ ಮಾಡಿಕೊಡುವಂತೆ ಆರ್ಜಿಸಲ್ಲಿಸಿದ್ದು ಎಷ್ಟು ಬಾರಿ ಕಚೇರಿಗೆ ತಿರುಗಾಡಿದರೂ ಇದುವರೆಗೂ ಅವರ ಆರ್ಜಿ ವಿಲೇವಾರಿಯಾಗದೆ ಹಾಗೂ ಇಆಸ್ತಿ ಮಾಡದ ಕಾರಣ ಸದಸ್ಯ ಶಫೀಕ್ ರವರನ್ನು ಭೇಟಿ ಮಾಡಿದ್ದಾರೆ. ಶಫೀಕ್ ಅವರು ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಇಆಸ್ತಿ ಕಡತಗಳು ಮೂಲೆಗುಂಪಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ಶಫೀಕ್, ನಗರಸಭೆಯಲ್ಲಿ ಯಾವುದೆ ಕಾರ್ಯಗಳು ಆಗಬೇಕಾದರೆ ಸದಸ್ಯರೂ ಸಹ ತಿಂಗಳಾನುಗಟ್ಟಲೆ ಕಾಯಬೇಕಾಗಿದೆ. ೭೦-೯೦ ದಿನಗಳೊಳಗೆ ಮುಗಿಯಬೇಕಾದ ಇ ಖಾತೆಗಳು ವರ್ಷಗಳೆ ಕಳೆದರೂ ಆಗುತ್ತಿಲ್ಲ. ಇಲ್ಲಿಯ ಅಧಿಕಾರಿಗಳು ಯಾರ ಹಿಡಿತದಲ್ಲಿದ್ದಾರೆ, ಅಧಿಕಾರಿಗಳಿಗೆ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರು ಎನ್ನುವರು ಇದ್ದಾರೆ ಎನ್ನುವುದಾದರೂ ಅಧಿಕಾರಿಗಳಿಗೆ ಗೊತ್ತಿದಿಯೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮೇಲೆ ಸದಸ್ಯರುಗಳ ದರ್ಪ : ಇನ್ನು ನಗರಭೆಯಲ್ಲಿ ಹಲವು ಸದಸ್ಯರು ಅಧಿಕಾರಿಗಳ ಮೇಲೆ ತಮ್ಮ ದರ್ಪ ತೋರಿ ತಮ್ಮ ಹಿಂಬಾಲಕರ ಮೂಲಕ ಅವರಿಗೆ ಸಂಬಂದಪಟ್ಟ ಹಾಗೂ ಕಮೀಷನ್ ಪಡೆದ ಕಡತಗಳನ್ನು ಮಾತ್ರ ವಿಲೇವಾರಿ ಮಾಡಿಸಿಕೊಳ್ಳುತ್ತಿದ್ದು ಏನೂ ತಿಳಿಯದ ಮುಗ್ಧ ಜನತೆ ಅರ್ಜಿ ಸಲ್ಲಿಸಿ ಇ-ಆಸ್ತಿ, ಖಾತೆ ಬದಲಾವಣೆ ಗಾಗಿ ವರ್ಷಾನುಗಟ್ಟಲೆ ತಿರುಗಾಡುವ ದುಸ್ಥಿತಿ ಎದುರಾಗಿದೆ ಎಂದು ಶಫೀಕ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ
KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್ನಿಂದ ಅಲ್ಲ: ಪ್ರಭಾಕರ ಕೋರೆ
MUST WATCH
ಹೊಸ ಸೇರ್ಪಡೆ
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು