ನೀರಜ್ ಚೋಪ್ರಾ ‘ಚಿನ್ನ’ದ ಸಾಧನೆಗೆ ಅಪ್ಪಟ‌ ಕನ್ನಡಿಗನ ಕೊಡುಗೆ ಕೂಡ ಇದೆ

ನನ್ನ ಕನಸು‌ ಚೋಪ್ರಾ ಈಡೇರಿಸಿದ್ದಾರೆ ಎಂಬುದೇ‌ ಸಂಭ್ರಮ: ಕಾಶಿನಾಥ್ 

Team Udayavani, Aug 7, 2021, 8:54 PM IST

rerwe

ಶಿರಸಿ: ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕೆನ್ನುವುದು ನನ್ನ ಕನಸಾಗಿತ್ತು. ಅದನ್ನು ನೀರಜ್ ಚೋಪ್ರಾ ಈಡೇರಿಸಿದ್ದಾರೆ ಎಂಬುದೇ ನನಗೆ‌ ಹೆಮ್ಮೆ, ಸಂಭ್ರಮ ಎಂದು ಪ್ರಸಿದ್ದ ಜಾವಲಿನ ಎಸೆತಗಾರ, ಚೋಪ್ರಾದ ತರಬೇರುದಾರಲ್ಲಿ ಒಬ್ಬರಾದ ಕಾಶಿನಾಥ್ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಥ್ಲೆಟಿಕ್ಸನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟು ಇತಿಹಾಸ ನಿರ್ಮಾಣ ಮಾಡಿದ ಹರಿಯಾಣದ ನೀರಜ್ ಚೋಪ್ರಾ ಅವರ ಸಾಧನೆಗೆ ಅಪ್ಪಟ‌ ಕನ್ನಡಿಗರ ಕೊಡುಗೆ ಕೂಡ ಇದೆ. ಮೂರು ವರ್ಷಗಳ‌ ಕಾಲ ಚೋಪ್ರಾ ಅವರಿಗೆ ತರಬೇತು ನೀಡಿದ್ದು  ಶಿರಸಿ‌ ಸಮೀಪದ ಬೆಂಗಳೆ  ಮೂಲದ, ಭಾರತೀಯ ಸೇನೆಯಲ್ಲಿ‌ ಸುಬೇದುದಾರ ಆಗಿರುವ ಕಾಶಿನಾಥ್  ನಾಯ್ಕ‌ ‘ಉದಯವಾಣಿ’ ಜೊತೆ ಸಂಭ್ರಮ ಹಂಚಿಕೊಂಡರು.

ಸಾಧಿಸುವ ಗುಣವಿದೆ:

ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕೆನ್ನುವ ಕನಸನ್ನು ನನ್ನ ಶಿಷ್ಯ ಈಡೇರಿಸಿದ್ದಾನೆ. ಈ ಸಂಭ್ರಮಕ್ಕೆ ಪಾರವೇ‌ ಇಲ್ಲ. ಕರೆಗಳ ಮೂಲಕ ಅಭಿನಂದನೆ ಹೊಳೆಯೇ ಬರುತ್ತಿದೆ ಎಂದು‌ ಕಾಶೀನಾಥ ಪ್ರತಿಕ್ರಿಯೆ ನೀಡಿದ್ದಾರೆ. ಹರಿಯಾಣ ಮೂಲದ‌ ಚೋಪ್ರಾ  ಅವರಿಗೆ ಜಾವಲಿನ ಎಸೆತಕ್ಕೆ ಬೇಕಾದ ದೈವದತ್ತವಾದ ಪ್ರತಿಭೆ‌ ಇದೆ. ಅವರಿಗೆ ಗುರಿ ಸಾಧಿಸುವ‌ ಕಲೆ ಗೊತ್ತಿದೆ. ಜಾವಲಿನ ಎಸೆತದಲ್ಲಿ ಇರಬೇಕಾದ ತಂತ್ರಗಾರಿಕೆ, ಗುರಿಯ ಬಗ್ಗೆ‌ ಹೆಚ್ಚು ಲಕ್ಷ್ಯ ಹಾಕುತ್ತಿದ್ದರು. ದಿನಕ್ಕೆ‌ ಕನಿಷ್ಠ ಐದಾರು ತಾಸು ನಿರಂತರ ಹಾಗೂ‌ ಕಠಿಣ ಅಭ್ಯಾಸ ಮಾಡುತ್ತಿದ್ದರು. ಅದೇ ಈ ಸಾಧನೆಗೆ ‌ಕಾರಣ ಎಂದಿದ್ದಾರೆ ಕಾಶಿನಾಥ್ .

ಮೂರು ವರ್ಷಗಳ ಕಾಲ: ಛೋಪ್ರಾ‌ ಅವರು 2015 ರಿಂದ 2017ರ ತನಕ‌ ಮೂರು ವರ್ಷಗಳ‌ಕಾಲ ಜಾವಲಿನ ಎಸೆತದ ತರಬೇತಿ ಪಡೆದಿದ್ದರು. ಆಗಿಂದಲೇ ನನ್ನೊಂದಿಗೆ‌ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಅವರಿಗೆ‌ ಕಲಿಯುವ ಗುಣ ಇದೆ. ಅದೇ ಈ ಸಾಧನೆ ಸಾಧಿಸಲು ಕಾರಣವಾಗಿದೆ ಎಂದು ಹೇಳಿದರು.

ಶಿಕ್ಷಕರು ಎಲ್ಲ‌ ಮಕ್ಕಳಿಗೂ ಪಾಠ‌ ಮಾಡುತ್ತಾರೆ. ಎಲ್ಲರಿಗೂ ಒಂದೇ ರೀತಿ ಕಲಿಸುತ್ತಾರೆ. ಆದರೆ, ಒಂದಿಬ್ಬರು ಅಷ್ಟೇ ನಂಬರ್ ೧ ಆಗಬಹುದು. ಕಲಿಯುವವರಿಗೂ ಆ ಗುಣ ದೈವದತ್ತವಾಗಿ ಬಂದಿರಬೇಕು. ಅಂಥ ಗುಣ ಛೋಪ್ರಾ ಅವರಲ್ಲಿ ಇದೆ. ಎಷ್ಟು‌ ಮೆಡಲ್ ಬಂದಿದ್ದರೂ ವಿಧೇಯ ವಿದ್ಯಾರ್ಥಿ ಆಗಿದ್ದರು ಛೋಪ್ರಾ.  ಅವರಿಗೆ ಅಹಂ ಎನ್ನುವದೇ ಇಲ್ಲ. ಆ ಗುಣವೇ ನನಗೆ ಅತ್ಯಂತ‌ ಇಷ್ಟವಾಗಿದ್ದು.

ಛೋಪ್ರಾ ಅವರು‌ ಇಲ್ಲಿ‌ ತರಬೇತಿ‌ ಪಡೆದ ಬಳಿಕ ಸ್ವೀಡನ್ ನಲ್ಲೂ‌ ಮೂರು  ತಿಂಗಳ ವಿಶೇಷ ತರಬೇತಿ ‌ಪಡೆದಿದ್ದರು. ಕಳೆದ ಎರಡು ತಿಂಗಳ ಹಿಂದೆ‌ ಮತ್ತೆ ಕೆಲವು ಎಸೆತದ ತಂತ್ರ ಕಲಿಕೆಗೆ ಬಂದಿದ್ದರು‌ ಎಂದಿದ್ದಾರೆ.

ಯಾರಿವರು?:

23  ವರ್ಷದಿಂದ ಸೈನ್ಯದಲ್ಲಿ ಇರುವ ಕಾಶಿನಾಥ ಕಾಮವೆಲ್ತ ಕ್ರೀಡಾಕೂಟದಲ್ಲಿ 2010ರಲ್ಲಿ ಜಾವಲಿನ ಎಸೆತದಲ್ಲಿ ಕಂಚು‌ ಗೆದ್ದಿದ್ದರು.

2013 ರಿಂದ‌ ಅಂತರಾಷ್ಟ್ರೀಯ ಮಟ್ಟದ ಕ್ರಿಡಾಡಾಕೂಟದಲ್ಲಿ ದೇಶವನ್ನು‌ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. 39 ವಯಸ್ಸಿನ ಕಾಶೀನಾಥ ಒಲಿಂಪಿಕ್ಸನಲ್ಲಿ ಚಿನ್ನದ ಬೇಟೆ ಆಡುವ ಜಾವಲಿನ ಎಸೆತಗಾರರಿಗೆ ಪುಣೆಯಲ್ಲಿ ತರಬೇತಿ ನೀಡುತ್ತಿದ್ದರು. ಉತ್ತರ‌ ಕ‌ನ್ನಡದ ಶಿರಸಿ ಬೆಂಗಳೆ ಊರಿನವರು. ಕ್ರೀಡಾ ತರಬೇತಿ ಶಾಲೆಯನ್ನು‌ , ಕ್ರೀಡೆಯಲ್ಲಿ ‌ಮಿಂಚುವವರಿಗೆ ಸೂಕ್ತ ತರಬೇತಿ, ವೇದಿಕೆ ಕಲ್ಪಿಸಬೇಕು ಎಂಬ ಕನಸು ಹೊತ್ತವರು  ಎಂಬುದು ಉಲ್ಲೇಖನೀಯ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.